`ಕವನಗಳು, ಹಾಸ್ಯ ಲೇಖನ, ಕತೆಗಳು, ನಾಟಕಗಳು’ ಕೃತಿಯು ಎಲ್.ಆರ್. ಹೆಗಡೆ ಅವರ ಅಪ್ರಕಟಿತ ಬರಹಗಳ ಸಂಕಲನ. ಈ ಕೃತಿಯನ್ನು ರೇಣುಕಾ ರಾಮಕೃಷ್ಣ ಭಟ್ಟ ಅವರು ಸಂಪಾದಿಸಿದ್ದಾರೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ಅರೆಜಾನಪದ ಶೈಲಿಯಲ್ಲಿ ಕವನಗಳನ್ನು ಬರೆದು ‘ಗ್ರಾಮಜೀವನ’ ಮಾಸಪತ್ರಿಕೆಗೆ ಕೊಡುತ್ತಿದ್ದರು. ಅದು ‘ಬಾಳ ದೀಪಾವಳಿ’ ಎಂಬ ಹೆಸರಿನಿಂದ ಗ್ರಂಥವಾಯಿತು. ಕಾಲೇಜು ಜೀವನದಲ್ಲಿ ಬರೆದ ಅನೇಕ ಕವಿತೆಗಳು ಬಹಳಷ್ಟು ಪ್ರಸಿದ್ದಿಯನ್ನು ಪಡೆದು ನಂತರದಲ್ಲಿ ಕೃತಿಯ ರೂಪವನ್ನು ಪಡೆಯಿತು. ‘ಹಕ್ಕಿ ನರಸಣ್ಣ’ ಎಂಬ ಹೆಸರಿನಲ್ಲಿ ಪುಸ್ತಕ ರೂಪದಲ್ಲಿ ಅವರ ಮೊದಲ ಕಥೆಗಳು ಪ್ರಕಟಗೊಂಡವು. ಕಾಲೇಜಿಗೆ ಹೋಗುವಾಗ ಅನೇಕ ಸಾಮಾಜಿಕ ನಾಟಕಗಳನ್ನು ರಚಿಸಿ, ತಾವೇ ದಿಗ್ದರ್ಶಿಸಿ, ಪ್ರಮುಖ ಪಾತ್ರಗಳನ್ನು ನಿರ್ವಹಿಸಿ ಎಲ್ಲ ಹೊಗಳಿಕೆಗೆ ಪಾತ್ರರಾಗಿದ್ದರು. ಹೀಗೆ ಅನೇಕ ವಿಚಾರಗಳನ್ನು ಈ ಕೃತಿಯು ಕಟ್ಟಿಕೊಡುತ್ತದೆ.
©2024 Book Brahma Private Limited.