ಕಾದಂಬರಿ ತ್ರಿವಳಿ

Author : ಜಿ.ಬಿ. ಹರೀಶ

Pages 652

₹ 400.00




Year of Publication: 2012
Published by: ಅಭಿನವ ಪ್ರಕಾಶನ
Address: 17/18-2, 1ನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು
Phone: 9448804905

Synopsys

ಪಾಶ್ಚಾತ್ಯ ಸಾಹಿತ್ಯ ಸಂಸ್ಕೃತಿಗಳ ತೌಲನಿಕ ಚಿಂತನೆಯ  ಕೃತಿ ’ಕಾದಂಬರಿ ತ್ರಿವಳಿ’. ಅಭಿನವ ಪ್ರಕಾಶನದ  ಶಂಕರ ಮೊಕಾಶಿ ಪುಣೇಕರ್ ಸಮಸ್ತ ಸಾಹಿತ್ಯ ಮಾಲೆಯಲ್ಲಿ ಪ್ರಕಟವಾದ ಪುಸ್ತಕ. ಕಾದಂಬರಿ ತ್ರಿವಳಿ ಕೃತಿಯು ಶಂಕರ್‍ ಮೊಕಾಶಿ ಪುಣೇಕರ್‍ ಅವರ ನಟನಾರಾಯಣಿ, ಗಂಗವ್ವ ಗಂಗಾಮಾಯಿ, ಅವಧೇಶ್ವರಿ ಕಾದಂಬರಿಗಳ ಅಧ್ಯಯನವನ್ನು ಈ ಕೃತಿಯಲ್ಲಿ ವಿಮರ್ಶಕ, ಲೇಖಕ ಜಿ.ಬಿ ಹರೀಶ್ ನಡೆಸಿದ್ದಾರೆ.

ನಟನಾರಾಯಣಿ ಕಾದಂಬರಿಯಲ್ಲಿ ಬರುವ ಕಿರ್ಕಿಗಾರ್ಡನ ಸಮಸ್ಯೆಗೆ ಭಾರತೀಯರು ಕೊಟ್ಟ ಪರಿವಾರವೇ ಹೆಚ್ಚು ಸಮರ್ಪಕ ಎನ್ನುವ ಧೋರಣೆಯ ಬಗ್ಗೆ ಚರ್ಚಿಸುವಂತೆ, ಈ ಕೃತಿ ದಾರಿಮಾಡಿಕೊಟ್ಟಿದೆ. ಮತ್ತು ಗಂಗವ್ವ ಗಂಗಾಮಾಯಿ ಕಾದಂಬರಿಯಲ್ಲಿಯ ಪಾತ್ರಗಳ ಬಗ್ಗೆ, ಪ್ರತಿಯೊಂದು ವ್ಯಕ್ತಿತ್ವದ ತಾತ್ವಿಕತೆಯ ಬಗ್ಗೆ ಕುರಿತು ವಿವರಿಸುತ್ತದೆ.   

 

About the Author

ಜಿ.ಬಿ. ಹರೀಶ

ಜಿ.ಬಿ ಹರೀಶ್ ಅವರು ಹೊಸ ತಲೆಮಾರಿನ ಗಂಭೀರ ವಿಮರ್ಶಕರಲ್ಲಿ ಒಬ್ಬರು. ಕನ್ನಡ ಕಾವ್ಯಗಳು, ಜೈನ, ಬೌದ್ಧ ಮತ್ತು ಶಾಸ್ತ್ರ ಸಾಹಿತ್ಯ ವಿಷಯಗಳಲ್ಲಿ ವಿಶೇಷ ಪರಿಣತಿ ಪಡೆದಿದ್ದಾರೆ. ಮೈಸೂರು ವಿ.ವಿ.ಯಿಂದ ಕನ್ನಡ ಸ್ನಾತಕೋತ್ತರ ಪದವಿಯನ್ನು ಪಡೆದು ಕೊಂಡ ಇವರು ದೇವಚಂದ್ರನ ರಾಜಾವಳಿ ಕಥಾಸಾರ: ಜೈನ ಸಾಹಿತ್ಯಕ, ಸಾಂಸ್ಕೃತಿಕ ಮತ್ತು ಐತಿಹಾಸಿಕ ಅಧ್ಯಯನ ಎಂಬ ವಿಷಯದಲ್ಲಿ ಪಿಎಚ್.ಡಿ. ಪದವಿ ಪಡೆದಿದ್ದಾರೆ. ಸಾಹಿತ್ಯ, ಕಲೆ ಮತ್ತು ತತ್ವಶಾಸ್ತ್ರ ಇವರ ಆಸಕ್ತಿಯ ಕ್ಷೇತ್ರಗಳು, ತುಮಕೂರು ವಿ.ವಿ., ಬೆಂಗಳೂರಿನ ಶೇಷಾದ್ರಿಪುರಂ ಸ್ನಾತಕೋತ್ತರ ಕೇಂದ್ರ, ಎಂ.ಇ.ಎಸ್. ಸ್ನಾತಕೋತ್ತರ ಕೇಂದ್ರ, ಬಿ.ಎಂ.ಶ್ರೀ. ಸ್ಮಾರಕ ಪ್ರತಿಷ್ಠಾನ ಸೇರಿದಂತೆ ಹಲವು ...

READ MORE

Related Books