ಕೆಮ್ಮಣ್ಣು

Author : ಸ. ರಘುನಾಥ

Pages 756

₹ 600.00




Year of Publication: 2020
Published by: ನಿವೇದಿತ ಪ್ರಕಾಶನ
Address: #3437, 1ನೇ ಮಹಡಿ, 9ನೇ ಅಡ್ಡರಸ್ತೆ, ಶಾಸ್ತ್ರಿ ನಗರ, ಬನಶಂಕರಿ, ಬೆಂಗಳೂರು-28
Phone: 9448733323

Synopsys

ಸ. ರಘುನಾಥರ ಸಮಗ್ರ ಸಾಹಿತ್ಯ ಸಂಪುಟ-6ರ ಕೃತಿಯಾಗಿ ಲೇಖನಗಳ ಸಂಕಲನ-ಕೆಮ್ಮಣ್ಣು ಪ್ರಕಟಗೊಂಡಿದೆ. ಕೃತಿ ಕರ್ತೃ ಸ. ರಘುನಾಥ. ಕೊಂಚ ನನ್ನೋವು, ಮನದಲ್ಲಿ ಅರಳಿದವರು, ಕೋಲಾರ ಸೀಮೆ ಓದು, ಓದು, ಮಡಿಲಿಗೆ ಬಿದ್ದೋವು, ನಮ್ಮೋರ ದನಿ ಹೀಗೆ 6 ಭಾಗವಾಗಿ ಕೃತಿಯನ್ನು ವಿಭಾಗಿಸಲಾಗಿದೆ. ಒಟ್ಟು 126 ಲೇಖನಗಳಿವೆ.

‘ಕೆಮ್ಮಣ್ಣು’ ಸಮಗ್ರ ಕೃತಿ ಕುರಿತು ಲೇಖಕರು ‘ರೇಗಡಿ ಎಂದರೆ ಮಣ್ಣು. ವ್ಯವಸಾಯಕ್ಕೆ ಯೋಗ್ಯವಾದ ಮಣ್ಣು. ಕೆಂಪು ರೇಗಡಿ, ಕಪ್ಪು ರೇಗಡಿ ಎಂಬ ವಿಧಗಳಿವೆ.ಇಲ್ಲಿನ ಲೇಖನಗಳು ಈ ಮಣ್ಣುಗಳ ಸಾವಯವ ಗುಣ ವಾಸನೆಯವು ಎಂಬ ವಿಶ್ವಾಸ ತಳೆದು, ಬರೆದ ಲೇಖನಗಳಲ್ಲಿ ನನ್ನ ಹುಡುಕಿಗೆ ಸಿಕ್ಕಷ್ಟನ್ನ ಸಮಗ್ರವೆಂಬ ಈ ಸಂಕಲನದಲ್ಲಿ ಸೇರಿಸಲಾಗಿದೆ’ ಎಂದು ಹೇಳಿಕೊಂಡಿದ್ದಾರೆ ಮಾತ್ರವಲ್ಲ; `ಕಾಲ ಕಟ್ಟಿ ತೋರಿಸಿದ ದಾರಿಯಲ್ಲಿ ನಾನು ಕಂಡಿದ್ದು , ಜೊತೆ ಮಾಡಿಕೊಂಡು ಎದೆಗೆ ತೋರಿಸಿದ್ದು, ಹೇಳಿದ್ದು ಇಲ್ಲಿದೆ. ಹಾಗಾಗಿ ಸ್ಪರ್ಶ, ವಾಸನೆ ಇದೆ. ಆದರೆ, ರುಚಿ ಬಗ್ಗೆ ಹೇಳಲಾರೆ’ ಎಂದು ತಮ್ಮ ಲೇಖನ ಸಾಹಿತ್ಯದ ಗುಣಮಟ್ಟವನ್ನು ಓದುಗರ ವಿಮರ್ಶೆಗೆ ಬಿಟ್ಟಿದ್ದಾರೆ.

 

About the Author

ಸ. ರಘುನಾಥ
(13 August 1954)

ಪ್ರಾಥಮಿಕ ಶಾಲಾ ಶಿಕ್ಷಕರಾಗಿರುವ  ಸ.ರಘುನಾಥ,ಕಥೆ, ಕಾವ್ಯ, ವಿಮರ್ಶೆ, ಅಂಕಣಬರಹ, ಅನುವಾದ, ಜಾನಪದ ಸಾಹಿತ್ಯ ಸಂಗ್ರಹ,ಮುಂತಾದ ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ಮಾಡಿದವರು. ಸುಮಾರು 40ಕ್ಕೂ ಹೆಚ್ಚಿನ ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆ ನೀಡಿದ ಸ. ರಘುನಾಥ ಅವರು ಸಮಾಜಸೇವೆಯಲ್ಲಿಯೂ ಹೆಚ್ಚಾಗಿ ತೊಡಗಿಸಿಕೊಂಡವರು. 1995 ರಿಂದ ’ನಮ್ಮ ಮಕ್ಕಳು’ ಎಂಬ ಸಂಸ್ಥೆಯ ಮೂಲಕ ಸಾಮಾಜಿಕ ಕಾರ್ಯ: ಭಿಕ್ಷುಕ, ಅನಾಥ, ವೃದ್ಧರಿಗೆ, ಅಂಗವಿಕಲರಿಗೆ ಶೈಕ್ಷಣಿಕ ಹಾಗು ಉಚಿತ ವೈದ್ಯಕೀಯ ನೆರವು. 1994 ರಿಂದ 2014 ರವರೆಗೆ ಗಾಯಗೊಂಡ ಪ್ರಾಣಿ  - ಪಕ್ಷಿಗಳ ಆರೈಕೆ. 2005ರಿಂದ ನಾಟಿ ಔಷಧ ತಯಾರಿಕೆ, ಉಚಿತ ...

READ MORE

Related Books