ಅವ್ವ (ಕವನ ಸಂಕಲನ)

Author : ಶರಣಬಸಪ್ಪ ವಡ್ಡನಕೇರಿ

Pages 75

₹ 50.00




Year of Publication: 2014
Published by: ಮಾತೋಶ್ರೀ ಈರಮ್ಮ ವಡ್ಡನಕೇರಿ ಪ್ರತಿಷ್ಠಾನ
Address: ಡೊಂಗರಗಾಂವ್, ತಾಲೂಕು ಮತ್ತು ಜಿಲ್ಲೆ ಕಲಬುರಗಿ
Phone: 9741169055

Synopsys

ಲೇಖಕ ಡಾ. ಶರಣಬಸಪ್ಪ ವಡ್ಡನಕೇರಿ ಅವರು ಸಂಪಾದಿಸಿದ ಕವನ ಸಂಕಲನ-ಅವ್ವ. ರಾಜ್ಯದ ವಿವಿಧೆಡೆ ಇರುವ ಸುಮಾರು 70 ಕವಿಗಳು, ‘ತಾಯಿ’ ವಿಷಯ ಕೇಂದ್ರೀಕರಿಸಿ ರಚಿಸಿದ 70 ಕವನಗಳನ್ನು ಸಂಪಾದಿಸಲಾಗಿದೆ.  ಪಿ ಲಂಕೇಶ್ ಅವರ ‘ ಅಕ್ಷರ ಹೊಸ ಕಾವ್ಯ', ಶಾಂತರಸರ ‘ಬೆನ್ನ ಹಿಂದಿನ ಬೆಳಕು' , ಮಹದೇವಪ್ಪ ಅವರ ‘ಅಪರಿಮಿತ ಕತ್ತಲೆಯ ವಿಪರೀತದ ಬೆಳಕು ' ಚಂಪಾ ಅವರ ‘ಗಾಂಧಿ ಸಂಕ್ರಮಣ ಕಾವ್ಯ’ ಅಂಥಾಲಜಿ ಅನ್ನಬಹುದಾದ ಕೃತಿಗಳ ಸಾಲುಗಳಲ್ಲಿ ‘ಅವ್ವ’ ಸೇರುತ್ತದೆ ಎಂದು ಸಂಪಾದಕರು ಅಭಿಪ್ರಾಯಪಟ್ಟಿದ್ದಾರೆ.

ಶಿಷ್ಟ ಮತ್ತು ಜನಪದ ಸಾಹಿತ್ಯದಲ್ಲಿ ತಾಯಿಯನ್ನು ಕುರಿತು ಕವಿತೆ, ಹಾಡುಗಳು ರಚಿತವಾಗಿವೆ. ಸಮಾಜ ಮತ್ತು ಸಂಸ್ಕೃತಿಯು ತಾಯಿಗೆ ವಿಶಿಷ್ಟ ಸ್ಥಾನ ನೀಡಿ ಗೌರವಿಸಿವೆ. ತಾಯಿ ಕೇವಲ ಮಗುವಿಗೆ ಮಾತ್ರ ಜನ್ಮ ಕೊಡದೆ, ಅವಳು ನಾಗರಿಕತೆ ಹಾಗೂ ಸಂಸ್ಕೃತಿಗಳ ತಾಯಿಯೂ ಹೌದು. ಜನಪದರಂತು ಭೂಮಿಗೂ, ದೈವಕ್ಕೂ ಹೋಲಿಸಿದ್ದಾರೆ. ಹೊಸಗನ್ನಡದ ಬೇಂದ್ರೆ,ಕುವೆಂಪು, ಗೋವಿಂದ ಪೈ,ಪಂಜೆ ಮಂಗೇಶರಾಯರು, ಪಿ ಲಂಕೇಶ್, ಚಂದ್ರಶೇಖರ ಕಂಬಾರ, ಚಂದ್ರಶೇಖರ್ ಪಾಟೀಲ್ ಹಲವಾರು ಕವಿಗಳು ತಾಯಿ ಕುರಿತು ಕವನಗಳನ್ನು ರಚಿಸಿದ್ದಾರೆ. ವಿವಿಧ  ಕವಿಗಳಿಂದ ಕವನಗಳನ್ನು  ಆಯ್ದುಕೊಳ್ಳಲಾಗಿದೆ. ತಾಯಿ ಪರಂಪರೆಯ ಚರಿತ್ರೆಯು ಆಗಿ ತೋರಬಲ್ಲದು. ಅವ್ವ ಸಂಕಲನದ ಬಹಳಷ್ಟು ಕವಿತೆಗಳು-ಸಾಂಸ್ಕೃತಿಕ ಕ್ರಿಯಾಶೀಲತೆಯ ವ್ಯಾಪಕತೆ ಮತ್ತು ಸೂಕ್ಷ್ಮತೆಗೆ ಇಲ್ಲಿನ ಬಹಳಷ್ಟು ಉದಯೋನ್ಮುಖ ಯುವ ಹಾಗೂ ಹಿರಿಯರ ಕವಿತೆಗಳು ಸಾಕ್ಷಿಯಾಗಿವೆ. ತಾಯಿಯ ಪ್ರೀತಿ-ಮಮತೆಯನ್ನು, ಕುರಿತು ಹಾಡುವ ತನ್ನದೇ ಆದ ಹೊಸ ಹಾದಿಯನ್ನು ನಿರ್ಮಿಸಿಲ್ಲ ಎನ್ನಬಹುದಾದರೂ ತಾಯಿಯ ಬಗೆಗಿನ ಬಹುಮುಖ್ಯ ವೈವಿಧ್ಯಮಯವಾದ ಅಭಿವ್ಯಕ್ತಿಯನ್ನು ಕಾಣುತ್ತೇವೆ ಎಂದೂ ಸಂಪಾದಕರು ಅಭಿಪ್ರಾಯಪಟ್ಟಿದ್ದಾರೆ. 

 

About the Author

ಶರಣಬಸಪ್ಪ ವಡ್ಡನಕೇರಿ
(22 May 1980)

ಲೇಖಕ ಡಾ. ಶರಣಬಸಪ್ಪ ವಡ್ಡನಕೇರಿ ಅವರು ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಡೊಂಗರಗಾoವ್ ಗ್ರಾಮದವರು. ಹುಟ್ಟೂರಿನಲ್ಲಿ ಪ್ರಾರ್ಥಮಿಕ, ಪ್ರೌಢ ಶಿಕ್ಷಣ ಪಡೆದು, ನಂತರ, ಗುಲಬರ್ಗಾ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ (ಅರ್ಥಶಾಸ್ತ್ರ) ಪದವೀಧರರು. ಕುವೆಂಪು ವಿಶ್ವವಿದ್ಯಾಲಯದಿಂದ ಪ್ರಥಮ ರ್‍ಯಾಂಕ್ ನಲ್ಲಿ ಎಂ. ಎ (ಶಿಕ್ಷಣ) ಪದವೀಧರರು. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಎಂ. ಎ (ಪತ್ರಿಕೋದ್ಯಮ ) ಪದವೀಧರರು. ಅಲ್ಲದೇ, ಎಂ. ಫಿಲ್ ಮತ್ತು ಪಿ.ಎಚ್ ಡಿ ಹಾಗೂ ಡಿ. ಲಿಟ್ ಪದವೀಧರರು. ತಾಯಿಯವರ ಹೆಸರಿನಲ್ಲಿ ಮಾತೋಶ್ರೀ ಈರಮ್ಮ ವಡ್ಡನಕೇರಿ ಪ್ರತಿಷ್ಠಾನ ಸ್ಥಾಪಿಸಿ, ಆ ಮೂಲಕ 60 ಕ್ಕಿಂತ ಹೆಚ್ಚು ...

READ MORE

Related Books