ಸಾಹಿತ್ಯ ಕಲೆಗಳಲ್ಲಿ ಪರಿವರ್ತನೆ ಮತ್ತು ಪ್ರಗತಿ

Author : ಎಂ. ಎಚ್. ಕೃಷ್ಣಯ್ಯ

Pages 108

₹ 12.00




Year of Publication: 1998
Published by: ಸಂಯುಕ್ತ ವೇದಿಕೆ
Address: ಕರ್ನಾಟಕ ರಾಜ್ಯ ಅಕಾಡೆಮಿ, 14/3, ನೃಪತುಂಗ ರಸ್ತೆ, ಬೆಂಗಳೂರು- 560002

Synopsys

‘ಸಾಹಿತ್ಯ ಕಲೆಗಳಲ್ಲಿ ಪರಿವರ್ತನೆ ಮತ್ತು ಪ್ರಗತಿ’ ಹಿರಿಯ ಲೇಖಕ ಎಂ.ಎಚ್. ಕೃಷ್ಣಯ್ಯ ಅವರು ಸಂಪಾದಿಸಿರುವ ಕೃತಿ. ಇಲ್ಲಿ ಕನ್ನಡದ ಬಹುಮುಖ್ಯ ಸಾಹಿತಿಗಳು ಸಾಹಿತ್ಯದಿಂದಾದ ಪರಿವರ್ತನೆ ಮತ್ತು ಪ್ರಗತಿಯ ಕುರಿತಾಗಿ ಬರೆದಿರುವ ಮಹತ್ವದ ಲೇಖನಗಳು ಸಂಕಲನಗೊಂಡಿವೆ.

ಡಾ.ಜಿ.ಎಸ್. ಶಿವರುದ್ರಪ್ಪ ಅವರ ಸಾಹಿತ್ಯ: ಪರಿವರ್ತನೆ ಮತ್ತು ಪ್ರಗತಿ, ಶ್ರೀಮತಿ ಮಾಯಾರಾವ್ ಅವರ ನೃತ್ಯ ಮತ್ತು ಸಂಗೀತ: ಪರಿವರ್ತನೆ ಮತ್ತು ಪ್ರಗತಿ, ಆರ್. ಎಂ. ಹಡಪದ್ ಅವರ ಕರ್ನಾಟಕ ಲಲಿತಕಲೆಗಳಲ್ಲಿ ಪರಿವರ್ತನೆ ಮತ್ತು ಪ್ರಗತಿ, ಪರ್ವತ ರಾಣಿ ಅವರ ಕರ್ನಾಟಕ ನಾಟಕ ಭವಿಷ್ಯ, ಎಂ.ಎಚ್. ಕೃಷ್ಣಯ್ಯ ಅವರ ಘರಾಣಾ ಪದ್ಧತಿಗಳು: ಒಂದು ಕಲಾತ್ಮಕ ವಿವೇಚನೆ ಸೇರಿದಂತೆ ಹಲವು ಮಹತ್ವದ ಲೇಖನಗಳು ಸಂಕಲನಗೊಂಡಿವೆ.

About the Author

ಎಂ. ಎಚ್. ಕೃಷ್ಣಯ್ಯ
(21 July 1937)

ಸಾಹಿತಿ, ವಿಮರ್ಶಕ ಪ್ರೊ. ಎಂ. ಎಚ್. ಕೃಷ್ಣಯ್ಯ ಅವರು (ಜನನ: 21-07-1937) ಮೈಸೂರಿನಲ್ಲಿ ಜನಿಸಿದರು. ತಂದೆ ಹುಚ್ಚಯ್ಯ, ತಾಯಿ ಕೆಂಪಮ್ಮ. ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ. ಎ ಮತ್ತು ಎಂ. ಎ. ಪದವೀಧರರು.  ಬೆಂಗಳೂರು, ಕೋಲಾರ, ಮಂಗಳೂರು, ಮಾಗಡಿ ಮುಂತಾದೆಡೆ ಸರ್ಕಾರಿ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತರಾಗಿದ್ದಾರೆ. 1979-83ರಲ್ಲಿ ಯುವಜನ ಸೇವಾ ಮತ್ತು ಕ್ರೀಡಾ ನಿರ್ದೇಶನಾಲಯದ ಯುವ ಕರ್ನಾಟಕ ಹಾಗೂ ಸ್ಫೋರ್ಟ್ಸ್ ಅರೆನಾ ಪತ್ರಿಕೆಗಳಿಗೆ ಇವರನ್ನು ಸರ್ಕಾರವು ಸಂಪಾದಕರೆಂದು ನಿಯೋಜಿಸಿತ್ತು. ಲಲಿತ ಕಲಾ ಅಕಾಡೆಮಿಯ `ಕರ್ನಾಟಕ ಕಲಾವಾರ್ತೆ '(1987-92) ಗೌರವ ಸಂಪಾದಕರು ಮತ್ತು ಕಲಾ ಪಂಥ ಮಾಲೆಯ ‘ಎಕ್ಸ್ ಪ್ರೆಷನಿಸಂ’ ಹಾಗೂ ‘ಇಂಪ್ರೆಷನಿಸಂ’ ಪುಸ್ತಕಗಳಿಗೆ ...

READ MORE

Related Books