ನವೋದಯವೆಂಬ ತಂತಿಯ ಮಿಡಿದು

Author : ಗುರುಪಾದ ಮರಿಗುದ್ದಿ

Pages 208

₹ 190.00




Year of Publication: 2021
Published by: ಸಿದ್ದಲಿಂಗೇಶ್ವರ ಪ್ರಕಾಶನ
Address: ಕಲಬುರ್ಗಿ

Synopsys

ಡಾ. ಗುರುಪಾದ ಮರಿಗುದ್ದಿ ಅವರು ಸಂಪಾದಿಸಿರುವ "ನವೋದಯ ವೆಂಬ ತಂತಿಯ ಮಿಡಿದು" ಕೃತಿಯನ್ನು ಅವಲೋಕಿಸಿದಾಗ ಈ ಕೃತಿಯಲ್ಲಿ ಒಟ್ಟು 22 ವಿಮರ್ಶಾಲೇಖನಗಳು ಇದ್ದು. ಪಂಜೆ ಮಂಗೇಶರಾಯರ ತೆಂಕಣ ಗಾಳಿಯಾಟ ಕುರಿತು ಶ್ರೀಧರ್ ಹೆಗಡೆಯವರು, ಎಂ ಗೋವಿಂದ ಪೈ ಅವರ ಕವಿತೆ ಕುರಿತು ಶಶಿಕಲಾ ಮೊರಬದ ಅವರು,ಬಿ.ಎಂ.ಶ್ರೀಯವರ ಕನ್ನಡ ಹೆಣ್ಣು ಕುರಿತು ಡಾ.ಚನ್ನಪ್ಪ ಕಟ್ಟಿ ಅವರು, ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ನೀತಿ ಕುರಿತು ರಾಜಶೇಖರ್ ಜಮಖಂಡಿಯವರು, ದ.ರಾ.ಬೇಂದ್ರೆ ಅವರ ಅನಂತ ಪ್ರಣ ಯ ಕುರಿತು ಎಚ್.ಶಶಿಕಲಾ ಅವರು, ಡಿ.ಎಸ್. ಕರ್ಕಿ ಹಚ್ಚೇವು ಕನ್ನಡ ದೀಪ ಕುರಿತು ಡಾ. ಎಚ್. ಟಿ. ಪೋತೆ ಅವರು,ಪು.ತಿ.ನರಸಿಂಹಚಾರ್ಯ ನೆರಳು ಕುರಿತು ಡಾ. ಶ್ರೀಶೈಲ ನಾಗರಾಳ ಅವರು ಬರೆದ ವಿಮರ್ಶಾಲೇಖನಗಳು ಓದುಗರ ಗಮನ ಸೆಳೆಯುವ ನಿಟ್ಟಿನಲ್ಲಿ ರಚನೆಗೊಂಡಿವೆ. ಕಲಬುರ್ಗಿಯ ಸಿದ್ದಲಿಂಗೇಶ್ವರ ಪ್ರಕಾಶನದಿಂದ 2021ರಲ್ಲಿ ಪ್ರಕಟಗೊಂಡ ಈ ಕೃತಿಯಲ್ಲಿ ಒಟ್ಟು 208 ಪುಟಗಳು ಇದ್ದು,190 ರೂಪಾಯಿ ಬೆಲೆ ನಿಗದಿಪಡಿಸಲಾಗಿದೆ.

About the Author

ಗುರುಪಾದ ಮರಿಗುದ್ದಿ
(20 June 1956)

ಡಾ. ಗುರುಪಾದ ಮರಿಗುದ್ದಿ ಅವರು ಸೃಜನಶೀಲ ಹಾಗೂ ಸೃಜನೇತರ ಕ್ಷೇತ್ರಗಳೆರಡರಲ್ಲಿಯೂ ಕೃತಿ ರಚಿಸಿರುವ 'ಸವ್ಯಸಾಚಿ’.  ಕಾವ್ಯಲಹರಿಯಿಂದ ಆರಂಭವಾದ ಸಾಹಿತ್ಯ ಕೃಷಿಯು ಸಂಶೋಧನೆ, ವಿಮರ್ಶೆ ಹಾಗೂ ಕುವೆಂಪು ಸಾಹಿತ್ಯದ ಬಗ್ಗೆ ಆಳವಾದ ಅಧ್ಯಯನ, ಲೋಕಾನುಭವ ಸಾಹಿತ್ಯಗಳಲ್ಲಿ ಹರಡಿದೆ. ಅವರು ಕುವೆಂಪು ಸಾಹಿತ್ಯ ಕುರಿತಂತೆ ಬರೆದ ನಿರಂತರ ನಿಷ್ಠಾವಂತ ಕೃಷಿಕರು. ಕುವೆಂಪು ಸಾಹಿತ್ಯದ ಕುರಿತು ಉತ್ತರ ಕರ್ನಾಟಕದಲ್ಲಿ ಕುವೆಂಪು ಸಾಹಿತ್ಯದ ಪರಿಚಯ ಕೈಗೊಂಡಿದ್ದಾರೆ. ಗುರುಪಾದ ಮರಿಗುದ್ದಿ ಅವರು ಸ್ವಂತ ಪ್ರತಿಭೆ ಹಾಗೂ ಸತತ ಅಭ್ಯಾಸದಿಂದ ಸಾಹಿತ್ಯದ ಹಲವು ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳ ಪ್ರೀತಿ ಸಂಪಾದಿಸಿರುವ ಅವರು ವಾಗ್ಮಿಯಾಗಿಯೂ ಜನಪ್ರಿಯ. ಸರಳತೆ ಸಜ್ಜನಿಕೆಗೆ ಹೆಸರಾದ ಮರಿಗುದ್ದಿ ...

READ MORE

Related Books