ದಿಗ್ಗಾವಿ ದೀಪ

Author : ಪಂಚಾಕ್ಷರಿ ಬಿ. ಪೂಜಾರಿ

Pages 168

₹ 130.00




Year of Publication: 2018
Published by: ಶ್ರೀ ದಂಡಗುಂಡ ಬಸವೇಶ್ವರ ದೇವಸ್ಥಾನ ಪ್ರಕಾಶನ 
Address: ದಂಡಗುಂಡ, ತಾ: ಚಿತ್ತಾಪುರ, ಜಿಲ್ಲೆ: ಕಲಬುರಗಿ
Phone: 8105390466

Synopsys

ಲೇಖಕ ಪಂಚಾಕ್ಷರಿ ಬಿ. ಪೂಜಾರಿ ಅವರ ಕವನಗಳ ಸಂಕಲನ-ದಿಗ್ಗಾವಿ ದೀಪ. ಮೂವರು ಕವಯತ್ರಿಯರು ಸೇರಿದಂತೆ 14 ಕವಿಗಳ ಒಟ್ಟು 135  ಕವನಗಳನ್ನು ಸಂಕಲಿಸಲಾಗಿದೆ. ಕವಿ ಹಾಗೂ ಸಾಹಿತಿ ಸಂಗಣ್ಣ ಹೋತಪೇಟ ಅವರು ಮುನ್ನುಡಿ ಬರೆದು ‘ಇಲ್ಲಿಯ ಕವಿತೆಗಳು ಕಾವ್ಯ ಲಕ್ಷಣಗಳಿಂದ ಶೋಭಿಸುತ್ತವೆ. ಸಾಮಾಜಿಕ ವಿದ್ಯಮಾನಗಳನ್ನು ವೈಚಾರಿಕ ನೆಲೆಯಲ್ಲಿ ಪ್ರತಿಪಾದಿಸುತ್ತವೆ. ಮಹಿಳೆಯರ ನೋವು-ನಲಿವು, ರೈತರ ಸಂಕಷ್ಟಗಳು, ಆಡಂಬರದ ಆಚಾರಗಳು, ಶರಣರ -ಸಂತರ ಉಪದೇಶಗಳು ಹೀಗೆ ವಸ್ತು ವೈವಿಧ್ಯಮಯವಾಗಿದೆ’ ಎಂದು ಪ್ರಶಂಸಿಸಿದ್ದರೆ, ಸಾಹಿತಿ ನಾಗಯ್ಯಸ್ವಾಮಿ ಅಲ್ಲೂರು ಬೆನ್ನುಡಿ ಬರೆದು ‘ಗ್ರಾಮೀಣ ಭಾಗದ ಕವಿ-ಕಲಾವಿದರು ಬರೆದ ಸಾಹಿತ್ಯಕ್ಕೆ ಸೂಕ್ತ ವೇದಿಕೆ ಕಲ್ಪಿಸುವಲ್ಲಿ ಸಂಪಾದಕರ ಶ್ರಮ ಪ್ರಶಂಸಾರ್ಹ’ ಎಂದು ಅಭಿಪ್ರಾಯಪಟ್ಟಿದ್ದಾರೆ. 

 

About the Author

ಪಂಚಾಕ್ಷರಿ ಬಿ. ಪೂಜಾರಿ
(10 August 1960)

ಕವಿ ಪಂಚಾಕ್ಷರಿ ಬಿ. ಪೂಜಾರಿ  ಅವರು ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ದಂಡಗುಂಡ ಗ್ರಾಮದವರು. ವೃತ್ತಿಯಿಂದ  ದಂಡಗುಂಡ ಬಸವಣ್ಣನ ದೇವಸ್ಥಾನದ ಅರ್ಚಕರು. ಬಿ.ಎ. ಪದವೀಧರರು. ತಂದೆ ಬಸವಣ್ಣೆಪ್ಪ ಪೂಜಾರಿ ತಾಯಿ ಮಹಾದೇವಮ್ಮ ಪೂಜಾರಿ. ದಂಡಗುಂಡ ಸರಕಾರಿ  ಪ್ರಾಥಮಿಕ ಶಾಲೆಯ ಅಭಿವೃದ್ಧಿ ಸಮಿತಿ (ಎಸ್.ಡಿ.ಎಂ.ಸಿ) ಅಧ್ಯಕ್ಷರು. ಕಸಾಪ ದಿಗ್ಗಾವಿ ವಲಯ ಅಧ್ಯಕ್ಷರು.  ಕೃತಿಗಳು: ಅಂತರಾಳದ ಪ್ರಭೆ (ವಚನಗಳ ಸಂಕಲನ), ಗುಡ್ಡದ ಗುಡುಗು (ತತ್ವಪದಗಳ ಸಂಕಲನ), ಮನದಾಳದ ಮಾತು (ನುಡಿಮುತ್ತುಗಳು), ತತ್ವಪದ ಸಂಪದ (ತತ್ವಪದಗಳ ಸಂಪಾದನಾ ಗ್ರಂಥ), ದಂಡಗುಂಡ ಬಸವಣ್ಣ ನಾಮಾವಳಿ,  ಸರಳೀಕರಣ ಇಷ್ಟಲಿಂಗ ಪೂಜಾ ವಿಧಾನ, ದಿಗ್ಗಾವಿ ದೀಪ (ಕವನ ಸಂಕಲನ)  ಪ್ರಶಸ್ತಿ-ಗೌರವಗಳು: ಚಿತ್ತಾಪುರ ತಾಲೂಕು ಕನ್ನಡ ...

READ MORE

Related Books