ಬಸವರಾಜ ಕಟ್ಟೀಮನಿ ಸಾಹಿತ್ಯ ವಾಚಿಕೆ

Author : ಬಾಳಣ್ಣ ಶೀಗೀಹಳ್ಳಿ

Pages 308

₹ 300.00




Year of Publication: 2019
Published by: ಬಸವರಾಜ ಕಟ್ಟೀಮನಿ ಪ್ರತಿಷ್ಠಾನ
Address: ಕುಮಾರ ಗಂಧರ್ವ ರಂಗಮಂದಿರ, ಬೆಳಗಾವಿ- 590016
Phone: 08312474648

Synopsys

‘ಬಸವರಾಜ ಕಟ್ಟೀಮನಿ ಸಾಹಿತ್ಯ ವಾಚಿಕೆ’ ಬಸವರಾಜ ಕಟ್ಟೀಮನಿ ಅವರ ಶತಮಾನೋತ್ಸವದ ನೆನಪಿನಲ್ಲಿ ಪ್ರಕಟವಾದ ಮಹತ್ವದ ಕೃತಿ. ಹಿರಿಯ ಲೇಖಕ ಬಾಳಣ್ಣ ಶೀಗೀಹಳ್ಳಿ ಅವರು ಸಂಪಾದಿಸಿದ್ದಾರೆ. ಪ್ರತಿಷ್ಠಾನದ ಸ್ಥಾಪಕ ಅಧ್ಯಕ್ಷ ಡಾ.ಎಂ. ಎಂ. ಕಲಬುರ್ಗಿಯವರು ಪ್ರತಿಷ್ಠಾನಕ್ಕೆ ಗಟ್ಟಿ ನೆಲೆಗಟ್ಟು ಒದಗಿಸಿ ಬಸವರಾಜ ಕಟ್ಟೀಮನಿಯವರ ಸಮಗ್ರ ಸಾಹಿತ್ಯವನ್ನು ಹದಿನೈದು ಸಂಪುಟಗಳಲ್ಲಿ ಹೊರತಂದಿದ್ದರು. ಈಗ ಅವರ ಸಾಹಿತ್ಯವನ್ನು ಜನಸಮ್ಮುಖಗೊಳಿಸುವ ಜವಾಬ್ದಾರಿಯನ್ನು ಪ್ರತಿಷ್ಠಾನ ನಿರ್ವಹಿಸುತ್ತಿದೆ.

ಬಸವರಾಜ ಕಟ್ಟೀಮನಿಯವರ ಕೃತಿಗಳು ಮರು ಓದಿಗೆ, ಅವಲೋಕನಕ್ಕೆ ಒಳಪಡಲಿ ಎಂಬುದೇ ಪ್ರತಿಷ್ಠಾನದ ಆಶಯವಾಗಿದೆ. ಬಸವರಾಜ ಕಟ್ಟೀಮನಿಯವರ ಕೃತಿಗಳಿಗೆ ಒಂದು ಪ್ರವೇಶಿಕೆಯಾಗಿ ಬಸವರಾಜ ಕಟ್ಟೀಮನಿ ಸಾಹಿತ್ಯ ವಾಚಿಕೆಯನ್ನು ಪ್ರಕಟವಾಗಿದೆ. ಇಲ್ಲಿ ಕಟ್ಟೀಮನಿ ಕೃತಿಗಳನ್ನು ಕುರಿತು ವಿಚಾರ ಸಂಕಿರಣ, ಶಿಬಿರಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ, ಹೊಸ ಓದುಗರಿಗೆ ಒಂದು ಸ್ಥೂಲ, ಪ್ರಾಥಮಿಕ ಪರಿಚಯ ಇರಲಿ ಎಂಬುದು ಇದರ ಉದ್ದೇಶ. 

ಡಾ. ಬಾಳಣ್ಣ ಶೀಗೀಹಳ್ಳಿ ಅವರು ಕನ್ನಡ ಪ್ರಾಧ್ಯಾಪಕರಾಗಿ, ರಂಗಚಿಂತಕರಾಗಿ, ವಿಮರ್ಶಕರಾಗಿ, ಸಂಶೋಧಕರಾಗಿ, ಸಂಪಾದಕರಾಗಿ ಕಾರ್ಯನಿರ್ವಹಿಸುತ್ತ ಬಂದಿದ್ದಾರೆ. ಅವರು ಪ್ರತಿಷ್ಠಾನಕ್ಕೆ ಈ ವಾಚಿಕೆಯನ್ನು ಸಿದ್ಧಪಡಿಸಿದ್ದಾರೆ.

About the Author

ಬಾಳಣ್ಣ ಶೀಗೀಹಳ್ಳಿ
(01 July 1947)

ಹಿರಿಯ ಲೇಖಕ ಬಾಳಣ್ಣ ಶೀಗೀಹಳ್ಳಿ ಅವರು ಮೂಲತಃ ಬೆಳಗಾವಿ ಜಿಲ್ಲೆಯ ದೇಗಾವಿ ಗ್ರಾಮದವರು.  ಪ್ರಾಧ್ಯಾಕರಾಗಿ ನಿವೃತ್ತರು.  ‘ಡೆಪ್ಯೂಟಿ ಚೆನ್ನಬಸಪ್ಪನವರು: ಜೀವನ ಮತ್ತು ಸಾಧನೆ’ ಕುರಿತು ಮಹಾಪ್ರಂಬಂಧ ರಚಿಸಿದ್ದಾರೆ. ಕೃತಿ ಸಂಗಾತಿ, ರಂಗ ಸಂಗಾತಿ, ಪರಿಭಾವ, ಕನ್ನಡ ರಂಗಚಿಂತನೆ, ಚಿಂತಕರು-ಚಿಂತನಗಳು ಬಸವಣ್ಣ-ಮಹಾವೀರ, ಮರಿಕಲ್ಲಪ್ಪ ಮಲಶೆಟ್ಟಿ ಕೃತಿಗಳನ್ನು ಪ್ರಕಟಿಸಿದ್ದಾರೆ. ‘ರನ್ನನ ಸಾಹಸಭೀಮ ವಿಜಯ : ಪರಾಮರ್ಶೆ, ಫ. ಗು. ಹಳ್ಳಕಟ್ಟಿ ಸಮಗ್ರ ಸಾಹಿತ್ಯ ಸಂಪುಟ:9, ಬೆಳಗಾವಿ ಜಿಲ್ಲೆಯ ವೀರಶೈವ ದೇಶಗತಿಗಳು, ರಾಧಾನಾಟ, ಆತ್ಮ ಆವ ಕುಲ, ಸ್ಥಾವರವಲ್ಲದ ಬದುಕು, ಭರತ ಚಕ್ರಿಯ ದರ್ಶನ ಲೋಕ, ನಿಜ ಸುಖದ ನಿಲುವು ಮುಂತಾದ ಕೃತಿಗಳನ್ನು ...

READ MORE

Related Books