ದೇವ ಕವಿಯ ಮರುಳುಸಿದ್ಧ ಕಾವ್ಯ

Author : ಅ.ನ.ಕೃ (ಅ.ನ. ಕೃಷ್ಣರಾಯ)

Pages 2020




Year of Publication: 1950
Published by: ವಿಶ್ವವಾಣಿ ಪ್ರಕಟಣ ಮಂದಿರ
Address: ಅನ್ನಪೂರ್ಣ, ವಿಶ್ವೇಶ್ವರ ಪುರಂ, ಬೆಂಗಳೂರು

Synopsys

ಮರುಳುಸಿದ್ಧ -ಜಾತಿಯಿಂದ ಅಸ್ಪೃಶ್ಯ. ಆದರೆ, ತನ್ನ ತಪಃ ಪ್ರಭಾವದಿಂದ ಆಚಾರ್ಯ ಪದವಿಗೇರಿ ದೇವ ಕವಿ ಎಂದು ಜನಮನದಲ್ಲಿ ನೆಲೆ ನಿಂತವನು. ಅಸ್ಪೃಶ್ಯ ಸಮಾಜದ ಅಭಿವೃದ್ಧಿಗೆ ದುಡಿದ ಹಾಗೂ ಆ ಸಮಾಜವು ಘನತೆಯುಕ್ತವಾದದು ಎಂದು ತೋರಿಸಿಕೊಟ್ಟ ಮಹಾನುಭಾವರ ಪೈಕಿ ಮರುಳುಸಿದ್ಧನ ಕಳಕಳಿ ಇತಿಹಾಸದಲ್ಲಿ ಎದ್ದು ಕಾಣುತ್ತದೆ. ಹರಿಜನೋದ್ಧಾರಕ ಮರುಳುಸಿದ್ಧನ ದಿವ್ಯ ಚರಿತ್ರೆಯನ್ನು ಕಾದಂಬರಿಕಾರ ಅ.ನ.ಕೃಷ್ಣರಾಯರು ಸಂಪಾದಿಸಿದ ಕೃತಿ-ದಿವ್ಯ ಕವಿ ಮರುಳುಸಿದ್ಧ ಕಾವ್ಯ.

About the Author

ಅ.ನ.ಕೃ (ಅ.ನ. ಕೃಷ್ಣರಾಯ)
(09 May 1908 - 04 July 1971)

‘ಅನಕೃ’ ಎಂದೇ ಸಾಹಿತ್ಯ ಲೋಕದಲ್ಲಿ ಚಿರಪರಿಚಿತರಾಗಿದ್ದ ಅರಕಲಗೂಡು ನರಸಿಂಗರಾವ್ ಕೃಷ್ಣರಾವ್ ಅವರು ಹೆಸರಾಂತ ಕಾದಂಬರಿಕಾರರು. ‘ಕಾದಂಬರಿ ಸಾರ್ವಭೌಮ’ ಎನಿಸಿಕೊಂಡಿದ್ದ ಅವರು ಕನ್ನಡದ ಜನಪ್ರಿಯ ಕಾದಂಬರಿಕಾರರು. ಪ್ರಗತಿಶೀಲ ಸಾಹಿತ್ಯದ ಪ್ರಮುಖ ಲೇಖಕರು. ತಂದೆ ನರಸಿಂಗರಾವ್, ತಾಯಿ ಅನ್ನಪೂರ್ಣಮ್ಮ. 1908ರ ಮೇ 9ರಂದು ಜನಿಸಿದ ಅವರುಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಶಿಕ್ಷಣವನ್ನು ಕೋಲಾರದಲ್ಲಿ ಮುಗಿಸಿದರು. ಬೆಂಗಳೂರಿನಲ್ಲಿ ಪ್ರೌಢಶಾಲಾ ಶಿಕ್ಷಣವನ್ನು ದೇಶೀಯ ವಿದ್ಯಾಶಾಲೆಯಲ್ಲಿ ಪಡೆದರು. ಮೆಟ್ರಿಕ್ ಓದುತ್ತಿದ್ದಾಗ ಶಾಂತಿನಿಕೇತನಕ್ಕೆ ಹೋಗಿ ಬಂದರು. ಬರಹ ಮಾಡಿಯೇ ಬದುಕಿದವರು ಅನಕೃ. ಪತ್ರಿಕಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಕಥಾಂಜಲಿ, ಬಾಂಬೆ ಕ್ರಾನಿಕಲ್, ವಿಶ್ವವಾಣಿ ಪತ್ರಿಕೆಗಳನ್ನು ...

READ MORE

Related Books