
‘ಶಿಲ್ಪಸಿದ್ಧಾಂತಿ ಶ್ರೀಸಿದ್ಧಲಿಂಗಸ್ವಾಮಿಗಳು’ ಕಲಾವಿದ ಲೇಖಕ ಎನ್. ಮರಿಶಾಮಾಚಾರ್ ಅವರ ಸಂಪಾದಿತ ಕೃತಿ. ಕಲಾಗುರು ಶ್ರೀ ಸಿದ್ಧಲಿಂಗಸ್ವಾಮಿ ಅವರ ಕಲಾಬದುಕು ಮತ್ತು ಸಾಧನೆಗಳ ಕುರಿತ ಮಹತ್ವದ ಲೇಖನಗಳನ್ನು ಈ ಕೃತಿಯಲ್ಲಿ ದಾಖಲಿಸಿದ್ದಾರೆ.
ಕಲಾವಿದ ಎಲ್. ಶಿವಲಿಂಗಪ್ಪ ಅವರ ಶಿಲ್ಪ ಸಿದ್ಧಾಂತಿ ಶ್ರೀ ಸಿದ್ಧಲಿಂಗ ಸ್ವಾಮಿಗಳವರು, ಕೆ.ಸಿ. ಪುಟ್ಟಣ್ಣಾಚಾರ್ ಅವರ ನನ್ನ ಗುರುಗಳ ಸನ್ನಿಧಿಯಲ್ಲಿ, ಸಿ. ಪರಮೇಶ್ವರಾಚಾರ್ ಅವರ ನಾನು ಕಂಡಂತೆ ನನ್ನ ಗುರುಗುಳು ಹಾಗೂ ಎನ್. ಮರಿಶಾಮಾಚಾರ್ ಅವರ ಬಹುಮುಖ ಪ್ರತಿಭೆಯ ಕಲಾವಿದ ಎಂಬ ನಾಲ್ಕು ಮಹತ್ವದ ಲೇಖನಗಳು ಸಂಕಲನಗೊಂಡಿವೆ.
©2025 Book Brahma Private Limited.