ಮನುಷ್ಯ ಪ್ರೇಮ ಕದ ತೆರೆಯುವ ಹೊತ್ತಿಗೆ...

Author : ಎ.ಎಸ್. ಮಕಾನದಾರ

Pages 88

₹ 75.00




Year of Publication: 2008
Published by: ನಿರಂತರ ಪ್ರಕಾಶನ
Address: # ಮಾಸುಮ್ ಮಂಜಿಲ್ ಟೆಕ್ಕೇ ದ ಓಣಿ ಗಜೇಂದ್ರಗಡ 582114 ಜಿಲ್ಲಾ :ಗದಗ
Phone: 9916480291

Synopsys

ಕವಿ ಎ ಎಸ್. ಮಕಾನದಾರ ಅವರ ಸಂಪಾದನೆಯಲ್ಲಿ ಪ್ರಕಟಣೆಗೊಂಡ `ಮನುಷ್ಯ ಪ್ರೇಮ ಕದ ತೆರೆಯುವ ಹೊತ್ತಿಗೆ' ಯಲ್ಲಿ ಹಿರಿಯ ಸಾಹಿತಿಗಳಾದ ಪ್ರೊ..ಬರಗೂರು ರಾಮಚಂದ್ರಪ್ಪ, ಪ್ರೊ. ಚಂದ್ರಶೇಖರ ಪಾಟೀಲ್, ಗೌರಿ ಲಂಕೇಶ್, ಡಾ. ರಹಮತ್ ತರೀಕೆರೆ, ಬಿ ಟಿ ಲಲಿತ ನಾಯಕ, ರಂಜಾನ್ ದರ್ಗಾ, ಕೋ ಚನ್ನಬಸಪ್ಪ (ಕೋಚೆ), ಡಾ ಶಾಮ ಸುಂದರ ಬಿದರಕುಂದಿ, ಡಾ ಸಬಿಹಾ ಭೂಮಿ ಗೌಡ, ಬಾನು ಮುಸ್ತಾಕ್, ಆನಂದ ಝoಜರವಾಡ, ಬಿ ಎಂ ಹನೀಫ್, ಎಂ ಡಿ ಗೋಗೇರಿ, ಡಾ. ಅರ್ಜುನ್ ಗೊಳಸಂಗಿ, ಪ್ರೂ.ಅಬ್ಬಾಸ್ ಮೇಲಿನ ಮನಿ, ಆನಂದ ಋಗ್ವೇದಿ, ಜ್ಞಾನ ದೇವ ದೊಡ್ಡಮೇಟಿ, ಪ್ರೊ.ಅಲ್ಲಮ ಪ್ರಭು ಬೆಟದೂರು, ಪತ್ರಕರ್ತ ಗೋಪಾಲ್ ಕೃಷ್ಣ ಹೆಗಡೆ, ಸನ್ಮಾರ್ಗಪತ್ರಿಕೆ ಸಂಪಾದಕ ಇಬ್ರಾಹಿಂ ಸಈದ, ಜರಗನ ಹಳ್ಳಿ ಶಿವಶಂಕರ ಹೀಗೆ 31 ಜನ ಕರ್ನಾಟಕದ ಅನೇಕ ಹಿರಿಯ ಲೇಖಕರ ಲೇಖನಗಳಿಂದ ಸೌಹಾರ್ದ ಸಂಸ್ಕೃತಿ ಪ್ರತಿ ಬಿಂಬಿಸುವಲ್ಲಿ ಈ ಸಂಕಲನ ಸಫಲವಾಗಿದೆ.

ಎ ಎಸ್ ಮಕಾನದಾರ ಅವರು ಪ್ರಗತಿ ಪರ ಸಂಘಟನೆಯಲ್ಲಿದ್ದುಕೊಂಡು ಸಾಮಾಜಿಕ ಅನಿಷ್ಟ ಗಳ ವಿರುದ್ಧ ಗಟ್ಟಿ ಧ್ವನಿಯಾಗಿ ಬೆಳೆದಿರುವರು. ವಿಶ್ವ ಭ್ರಾತೃತತ್ವದ ಸೂಫಿ ದೂದ್ ಪೀರಾ ಕೃತಿಗೆ ಸಂಬಂಧಿಸಿದಂತೆ ನಾಡಿನ ಪ್ರಗತಿ ಪರ ಮನಸುಗಳು ವ್ಯಕ್ತಪಡಿಸಿದ ಗಂಭೀರ ಅಭಿಪ್ರಾಯ ಗಳನ್ನು ಸಂಗ್ರಹಣೆ ಮಾಡಿ ಮುಚ್ಚಿಕೊಂಡಿರುವ ಮನುಷ್ಯನ ಮನಸ್ಸಿನ ಬಾಗಿಲನ್ನು ಪ್ರೇಮ ದ ಮೂಲಕ ಭ್ರಾತೃತ್ವದ ಮೂಲಕ ತೆರೆಯುತ್ತಿರುವ ಮಕಾನದಾರ ಅವರು, ಬತ್ತುತ್ತಿರುವ ಮನುಷ್ಯ ಪ್ರೀತಿಯ ಒರತೆ ಯನ್ನು ಇಂತಹ ಕೆಲಸದ ಮೂಲಕ ಹಸಿ ಹಸಿಯಾಗಿ ಇಡಲೆಂದು ಹಿರಿಯ ಬರಹ ಗಾರ್ತಿ ಡಾ. ಮಲ್ಲಿಕಾ ಘಂಟಿ ಅವರು ಮುನ್ನುಡಿ ಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

About the Author

ಎ.ಎಸ್. ಮಕಾನದಾರ

ಲೇಖಕ ಎ. ಎಸ್. ಮಕಾನದಾರ ಅವರ ಹುಟ್ಟೂರು ಗಜೇಂದ್ರಗಡ. ಪ್ರಸ್ತುತ ಗದುಗಿನ ಒಂದನೇ ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯದಲ್ಲಿ ಪ್ರಥಮ ದರ್ಜೆ ಸಹಾಯಕರಾಗಿದ್ದಾರೆ. ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ 10 ಸ್ವತಂತ್ರ ಕೃತಿಗಳನ್ನು, 16 ಸಂಪಾದಿತ ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ವಿಶ್ವವಿದ್ಯಾಲಯದ ಬಿ.ಎ., ಬಿ.ಕಾಂ., ಬಿ.ಎಸ್ಸಿ., ಬಿ.ಎಸ್.ಡಬ್ಲೂ ಮೊದಲ ಸೆಮಿಸ್ಟರ್ ಗೆ ‘ಅಮ್ಮನ ಬಿಕ್ಕಳಿಕೆ ನಿಲ್ಲಿಸುವಿರಾ’ ಎಂಬ ಇವರ ಕವಿತೆ ಪಠ್ಯ ವಾಗಿ ಸೇರ್ಪಡೆ ಯಾಗಿದೆ.  ಪ್ರಶಸ್ತಿ-ಗೌರವಗಳು:  ಸರಕಾರದಿಂದ ಜಿಲ್ಲಾ ಸರ್ವೋತ್ತಮ ಸೇವಾ ಪುರಸ್ಕಾರ, ಜಿಲ್ಲಾ ಕನ್ನಡ ರಾಜ್ಯೋತ್ಸವ ಪುರಸ್ಕಾರ, ಸಂತ ಶಿಶುನಾಳ ಶರೀಫ ಪುರಸ್ಕಾರ, ಭಾವೈಕ್ಯ ಪುರಸ್ಕಾರ, ರಾಷ್ಟ್ರಕೂಟ ಸಾಹಿತ್ಯ ಶ್ರೀ ಪುರಸ್ಕಾರ, ಕೊಪಳ ...

READ MORE

Related Books