
’ಮಹಾಜಿಪುಣ ಮೈದಾಸ’ ಚಂದ್ರಕಾಂತ ಕರದಳ್ಳಿಯವರು ಮಕ್ಕಳಿಗಾಗಿ ಬರೆದಿರುವ ಕಿರು ಕಾದಂಬರಿ. ಸಂಪತ್ತಿನ ಬಗ್ಗೆ ದುರಾಸೆ ಹೊಂದಿದವರಿಗೆ ಮತ್ತು ಅದನ್ನು ಸಂಗ್ರಹಿಸಿ ಇಡುವವರಿಗೆ ಜೀವನದಲ್ಲಿ ಅದೊಂದೇ ಪರಮ ಗುರಿಯಾಗಿರುತ್ತದೆ. ಮೈದಾಸ ಅಂಥ ಮನಸ್ಥಿತಿಯನ್ನು ಪತಿಬಿಂಬಿಸುವ ರೂಪಕ. ಆತನು ತನ್ನ ದುರಾಸೆಯಿಂದಾಗಿ, ತಾನು ಅತಿಯಾಗಿ ಪ್ರೀತಿಸುವ ಮಗಳನ್ನೂ ಕಳೆದುಕೊಳ್ಳುವ ಸ್ಥಿತಿಗೆ ಬರುತ್ತಾನೆ. ಕಡೆಯಲ್ಲಿ ಆತನಿಗೆ ತನ್ನ ತಪ್ಪಿನ ಅರಿವಾಗುತ್ತದೆ. ದುರಾಸೆಯನ್ನು ಬಿಟ್ಟು ಬೇರೆ ಮನುಷ್ಯರಂತೆ ತಾನೂ ಬದುಕಲಾರಂಭಿಸುತ್ತಾನೆ. ಚಂದ್ರಕಾಂತ ಕರದಳ್ಳಿಯವರು ಇಂಗ್ಲೀಷಿನಲ್ಲಿ ಜನಪ್ರಿಯವಾಗಿರುವ ಈ ಕತೆಯನ್ನು ಕನ್ನಡದಲ್ಲಿ ಅತ್ಯಂತ ಸರಳವಾಗಿ, ಮಕ್ಕಳಿಗೆ ಅರ್ಥವಾಗುವ ಶೈಲಿಯಲ್ಲಿ ನಿರೂಪಿಸಿದ್ದಾರೆ.
©2025 Book Brahma Private Limited.