
‘ಶಾವೋಲಿನ್ ಮಕ್ಕಳಿಗಾಗಿ ಕಥೆಗಳು’ ಕೃತಿಯು ಕೆ. ಶಿವಲಿಂಗಪ್ಪ ಹಂದಿಹಾಳು ಅವರ ಮಕ್ಕಳ ಕತಾಸಂಕಲನವಾಗಿದೆ. ಕೃತಿಯ ಬೆನ್ನುಡಿಯಲ್ಲಿ ಆನಂದ ಪಾಟೀಲ ಅವರು, ಮಕ್ಕಳ ಕಥಾಲೋಕ ನಿಧಾನವಾಗಿಯಾದರೂ ಭಾರತದಲ್ಲಿ ತನ್ನ ಅಗತ್ಯವನ್ನ ಹೇಳತೊಡಗಿದೆ. ಮಕ್ಕಳ ಜಗತ್ತಿನ ಪ್ರೇರಣೆಯಲ್ಲಿ ಬರೆಯುತ್ತಿರುವ ಅನೇಕ ಲೇಖಕರು ಈಗ ಕಾಣಿಸಿಕೊಳ್ಳುತ್ತಿದ್ದಾರೆ. ರಾಮೇಂದ್ರ ಕುಮಾರ ಇಂಗ್ಲಿಷಿನಲ್ಲಿ ಬರೆಯುತ್ತಿರುವ ಹೆಸರುವಾಸಿ ಲೇಖಕ, ಭಾರತದಲ್ಲಿ ಹಾಗೆಯೇ ವಿದೇಶಗಳಲ್ಲಿಯೂ ಮಕ್ಕಳ ಸಾಹಿತ್ಯದ ವಿಶೇಷದ ಕಾರ್ಯಕ್ರಮಗಳಲ್ಲಿ ರಾಮೇಂದ್ರ ಕಾಣಿಸಿಕೊಳ್ಳುತ್ತಿರುವುದು ಈಗ ವಾಡಿಕೆಯಾಗಿಬಿಟ್ಟಿದೆ. ಇಂಥ ಉತ್ಸಾಹಿ ಪ್ರತಿಭೆಯ ಲೇಖಕನ ಕತೆಗಳೀಗ ಕನ್ನಡಕ್ಕೆ ಬಂದಿವೆ. ಉತ್ಸಾಹಿ ಯುವ ಲೇಖಕ, ವೈಚಾರಿಕ ಗುಂಗಿನ ಸಂಶೋಧನೆ ಆಸಕ್ತಿಯ, ಮಕ್ಕಳ ಕುರಿತು ಇನ್ನಿಲ್ಲದ ಆಸಕ್ತಿ ವಹಿಸುವ, ಅದರಲ್ಲೂ ಗ್ರಾಮೀಣ ಪರಿಸರದ ಅನನುಕೂಲದ ಮಕ್ಕಳ ಕಡೆಗೆ ಸದಾ ತುಡಿಯುವ ಕೆ. ಶಿವಲಿಂಗಪ್ಪ ಹಂದಿಹಾಳು, ಈ ಇಂಗ್ಲಿಷ್ ಕತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ’ ಎಂದು ಪ್ರಶಂಸಿಸಿದ್ದಾರೆ.
©2025 Book Brahma Private Limited.