
ನಟ ಪ್ರಕಾಶ್ ರೈ ಅವರು ’ಉದಯವಾಣಿ’ ಮತ್ತು ’ಪ್ರಜಾವಾಣಿ’ ಪತ್ರಿಕೆಗಳಿಗೆ ಬರೆದ ಅಂಕಣ ಬರಹಗಳ ಸಂಕಲನ ’ಅವರವರ ಭಾವಕ್ಕೆ’.
ಕೃತಿಯ ಕುರಿತು ರೈ ಅವರು ಮುನ್ನಡಿಯಲ್ಲಿ ’ಕೇರಳದಲ್ಲಿ, ದೆಹಲಿಯ ವಿಮಾನ ನಿಲ್ದಾಣದಲ್ಲಿ, ಹೈದರಾಬಾದಿನ ನನ್ನ ತೋಟದಲ್ಲಿ, ಬೆಂಗಳೂರಿನ ಆಫೀಸಿನಲ್ಲಿ, ಚೆನ್ನೈನ ಶೂಟಿಂಗ್ ತಾಣದಲ್ಲಿ- ಹೀಗೆ ಎಲ್ಲೆಂದರಲ್ಲಿ ಮಳೆ ಬಿದ್ದೊಡನೆ ನೆಲದಿಂದ ಮೊಳಕೆ ಒಡೆಯುವ ನೀಲಿ ಹೂವುಗಳ ಹಾಗೆ ಅರಳಿದ ಬರಹಗಳೆಲ್ಲಾ’ ಇಲ್ಲಿ ಒಟ್ಟಾಗಿವೆ ಎಂದಿದ್ದಾರೆ. ಬರೆಯುವುದು ಎಂದರೆ ಶಿಸ್ತುಬದ್ಧನಾಗುವುದು ಎನ್ನುವ ರೈ, ಲೇಖನಗಳನ್ನು ತಮ್ಮ ಬೊಗಸೆಗೆ ಬಿದ್ದ ಮಳೆ ಎಂದು ವರ್ಣಿಸುತ್ತಾರೆ.
ಪಯಣಗಳು ತರುವ ಪಕ್ವತೆ, ಎಲ್ಲರೂ ಸೇರಿ ಕಲೆಯ ತೇರೆಳೆಯೋಣವೇ?, ಸ್ತ್ರೀ ಎಂದರೆ ಅಷ್ಟೇ ಸಾಕೆ ಇತ್ಯಾದಿ ಪ್ರಮುಖ ಲೇಖನಗಳು ಕೃತಿಯಲ್ಲಿವೆ.
©2025 Book Brahma Private Limited.