ಸಂಪಾದಕರ ಸದ್ಯಶೋಧನೆ ಭಾಗ -3

Author : ವಿಶ್ವೇಶ್ವರ ಭಟ್

Pages 216

₹ 250.00




Year of Publication: 2023
Published by: ವಿಶ್ವವಾಣಿ ಪುಸ್ತಕ
Address: ನಂ-1867, ನಿಸರ್ಗ ಸೆರೆನಿಟಿ ಕಾಂಪ್ಲೆಕ್ಸ್‌ ರಸ್ತೆ, ಬಿಇಎಂಎಲ್‌ ಬಡಾವಣ, 5ನೇ ಹಂತ, ರಾಜರಾಜೇಶ್ವರಿನಗರ ಬೆಂಗಳೂರು-560098
Phone: 8431007267

Synopsys

‘ಸಂಪಾದಕರ ಸದ್ಯಶೋಧನೆ ಭಾಗ -3’ ವಿಶ್ವೇಶ್ವರ ಭಟ್ ಅವರ ಅಂಕಣ ಬರಹಗಳಾಗಿವೆ. ಪ್ರತಿ ದಿನ ಅಂಕಣ ಬರೆಯುವುದೆಂದರೆ ಒಂದು ಶಿಸ್ತಿಗೆ ಸಜ್ಜಾಗುವುದು ಮತ್ತು ಅಂಥ ಶಿಸ್ತಿಗೆ ನಮ್ಮನ್ನು ಗುರಿಪಡಿಸಿಕೊಳ್ಳುವುದು. ಹೀಗಾಗಿ ನನ್ನ ಜಗತ್ತು ಎಲ್ಲಿಯೇ ಏಳಲಿ, 'ಸದ್ಯಶೋಧನೆ'ಯಲ್ಲಿಯೇ ಮುಳುಗುತ್ತದೆ. ಹೀಗಾಗಿ ಅದನ್ನು ಬಿಟ್ಟು ನನ್ನ ದಿನವಿಲ್ಲ. ಶೆಟ್ಟಿ ಜತೆಯಲ್ಲಿ ಪಟ್ಟಣ ಕಟ್ಟಿಕೊಂಡು ಹೋದ ಎನ್ನುವಂತೆ, ನಾನು ಎಲ್ಲಿಯೇ ಹೋಗಲಿ, ಹೋಗುವಲ್ಲೆಲ್ಲ 'ಸದ್ಯಶೋಧನೆ'ಯನ್ನೂ ಕಟ್ಟಿಕೊಂಡೇ ಹೋಗುತ್ತೇನೆ. ಕಳೆದ ನಾಲ್ಕು ವರ್ಷಗಳಿಂದ ಅದು ಬಿಟ್ಟು ನಾನಿಲ್ಲ. ಸ್ಕಾಟ್ಲೆಂಡಿನ ತುತ್ತತುದಿಯಿಂದ, ಮಂಗೋಲಿಯಾದ ಗಡಿಯಿಂದ, ಕತಾರ್ ನ ಫುಟ್ಬಾಲ್ ಮೈದಾನದಿಂದ, ಸೌದಿ ಅರೇಬಿಯಾದ ದಟ್ಟ ಮರುಭೂಮಿಯಿಂದ ಈ ಅಂಕಣಕ್ಕೆ ಬರೆದಿದ್ದೇನೆ. ಹೀಗಾಗಿ 'ಸದ್ಯಶೋಧನೆ' ನನ್ನ ನಿರಂತರ ಸಾಥಿ, ಶೋಧ. ಏನೂ ಬಯಸದ ಓದುಗನಿಗೆ, ಕೊನೆಯಲ್ಲಿ ಹೋಗುವಾಗ, ಏನನ್ನೋ ಕೈಯಲ್ಲಿಟ್ಟು ಪುಟ್ಟ ಅಚ್ಚರಿಯ ಕಚಗುಳಿ ಕೊಡುವ ಸಣ್ಣ ಇರಾದೆ ಬಿಟ್ಟು, ಇಲ್ಲಿನ ಬರಹಗಳಿಗೆ, ಬೇರೇನೂ ಇಲ್ಲದ ನಿರಾಭರಣತ್ವ ಭಾವ! ಹಾಗೆ ಇಲ್ಲಿನ ಬರಹಗಳು ಸದಾ ಬದುವನ್ನು ಸಡಿಲಿಸಿಕೊಳ್ಳುತ್ತಾ, ಹೊಸ ಪಾತಳಿಯನ್ನು ಕಂಡುಕೊಳ್ಳುತ್ತಾ, ಹಿಗ್ಗಿಸಿಕೊಳ್ಳುತ್ತಾ ಸರಾಗವಾಗಿ ಹರಿಯುವ ಅಜ್ಞಾತ ನದಿ. 'ಕರಗಿ, ಕರಗಿ, ನೀರಾದೆ ನಾನು' ಎಂಬುದಷ್ಟೇ ನನ್ನಲ್ಲಿ ಉಳಿಯುವ ಭಾವ ಎಂದಿದ್ದಾರೆ ಲೇಖಕ ವಿಶ್ವೇಶ್ವರ ಭಟ್.

About the Author

ವಿಶ್ವೇಶ್ವರ ಭಟ್

ವಿಶ್ವೇಶ್ವರ ಭಟ್ ಅವರು ಉತ್ತರಕನ್ನಡ ಜಿಲ್ಲೆಯ  ಕುಮಟಾದ ಮೂರೂರಿನವರು. ಓದಿದ್ದು ಎಂ.ಎಸ್ಸಿ. ಹಾಗೂ ಎಂ.ಎ. ನಾಲ್ಕು ಚಿನ್ನದ ಪದಕ ವಿಜೇತರು, ಇಂಗ್ಲೆಂಡಿನಲ್ಲಿ ಪತ್ರಿಕೋದ್ಯಮದಲ್ಲಿ ಉನ್ನತ ವ್ಯಾಸಂಗ, ಸಂಯುಕ್ತ ಕರ್ನಾಟಕ, ಕನ್ನಡಪ್ರಭದಲ್ಲಿ ಉಪಸಂಪಾದಕರಾಗಿ ವೃತ್ತಿ ಜೀವನ ಆರಂಭ, ವಿಜಯ ಕರ್ನಾಟಕ, ಕನ್ನಡ ಪ್ರಭ ಹಾಗೂ ಸುವರ್ಣ ನ್ಯೂಸ್ ಚಾನಲ್‌ನ ಪ್ರಧಾನ ಸಂಪಾದಕ, ಏಷಿಯನ್ ಕಾಲೇಜ್ ಆಫ್ ಜರ್ನಲಿಸಮ್‌ನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್, ಕೇಂದ್ರ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಖಾತೆ ಸಚಿವರಿಗೆ ವಿಶೇಷ ಕರ್ತವ್ಯ ಅಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಸದ್ಯ,  “ವಿಶ್ವವಾಣಿ' ದಿನಪತ್ರಿಕೆಯ ಪ್ರಧಾನ ಸಂಪಾದಕರು. 'ನೂರೆಂಟು ವಿಶ್ವ, 'ಇದೇ ಅಂತರಂಗ ಸುದ್ದಿ' ...

READ MORE

Related Books