ಸುದ್ದಿಯೇ ಸಾಹಿತ್ಯ

Author : ಸಿ. ನಾಗಣ್ಣ

Pages 252

₹ 200.00




Year of Publication: 2018
Published by: ವಾಚಸ್ಪತಿ ಪ್ರಕಾಶನ
Address: #658, 2ನೇ ಪ್ಲೋರ್, 4ನೇ ಮುಖ್ಯರಸ್ತೆ, 4ನೇ ಕ್ರಾಸ್, ಈ ಮತ್ತು ಎಫ್ ಬ್ಲಾಕ್, 2ನೇ ಸ್ಟೇಜ್, ರಾಮಕೃಷ್ಣನಗರ, ಮೈಸೂರು

Synopsys

‘ಸುದ್ದಿಯೇ ಸಾಹಿತ್ಯ’ ಡಾ.ಸಿ. ನಾಗಣ್ಣ ಅವರ ಅಂಕಣ ಬರಹಗಳ ಸಂಕಲನ. ಈ ಕೃತಿಗೆ ಕವಿ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಅವರ ಬೆನ್ನುಡಿಯ ಮಾತುಗಳಿವೆ. ಪ್ರತಿಭೆ ಮತ್ತು ಶ್ರಮ ಮೇಳೈಸಿದಲ್ಲಿ ಗೆಲುವು ಕಟ್ಟಿಟ್ಟ ಬುತ್ತಿ. ಇಂಗ್ಲೀಷ್ ಮತ್ತು ಆಫ್ರಿಕನ್ ಸಾಹಿತ್ಯದಲ್ಲಿ ಪರಿಣತಿ ಹೊಂದಿರುವ ಇವರು ಕೈಚಾಚದ ಜ್ಞಾನ ಕ್ಷೇತ್ರಗಳಿಲ್ಲ. ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಳ ಮೇಲೆ ಅಸದೃಶ್ಯ ಹಿಡಿತ ಸಾಧಿಸಿರುವ ಕೆಲವೇ ವಿದ್ವಾಂಸರಲ್ಲಿ ಡಾ. ನಾಗಣ್ಣ ಒಬ್ಬರು ಎಂಬುದು ನನ್ನ ಖಚಿತವಾದ ನಂಬುಗೆ, ಯಾವುದೇ ವಿಷಯದ ಮೇಲೆ ಸ್ವಾರಸ್ಯಕರವಾಗಿ ಮಾತನಾಡಬಲ್ಲ ಇವರು ಸುದ್ದಿಗಳ ಸುತ್ತಲೇ ಸಾಹಿತ್ಯ ರಚಿಸಿದ್ದಾರೆ. ರಾಜಕೀಯ, ಶಿಕ್ಷಣ, ಸಂಸ್ಕೃತಿ, ಕ್ರೀಡೆ, ಮಹಿಳೆ, ಪ್ರಯಾಣ ಹೀಗೆ ವಿಷಯಗಳ ಹರವು ಆಸಕ್ತಿ ಹುಟ್ಟಿಸುತ್ತದೆ. ಅಲ್ಲಲ್ಲಿ ಕಾಣಬರುವ ದೃಷ್ಟಾಂತಗಳು ಇವರ ಓದಿನ ವಿಸ್ತಾರವನ್ನು ಹೇಳುತ್ತದೆ. ಹೊಸ ಪದಗಳನ್ನು ಟಂಕಿಸುವುದರಲ್ಲಿಯೂ ಇವರು ಜಾಣರು, ಟ್ರಂಪ್ರಳಯ ಒಂದು ಉದಾಹರಣೆ ಎನ್ನುತ್ತಾರೆ ಚಿನ್ನಸ್ವಾಮಿ. ಜಾಗತಿಕ ಸಂದರ್ಭದಲ್ಲಿ ಹೆಚ್ಚು ಪ್ರಸ್ತುತವೆನಿಸುವ ವಿಷಯಗಳನ್ನೂ ಚರ್ಚಿಸಿದ್ದಾರೆ. ಅವೆಲ್ಲವೂ ಪ್ರಬುದ್ಧತೆ ಮತ್ತು ಪ್ರಾಮಾಣಿಕತೆಯ ಮೂಸೆಯಲ್ಲಿ ಕಡೆದ ನುಡಿಗಡಣದ ರಸಾಯನವಾಗಿ ಭಟ್ಟಿ ಇಳಿದಿವೆ.

About the Author

ಸಿ. ನಾಗಣ್ಣ

ಡಾ. ಸಿ. ನಾಗಣ್ಣ ಅವರು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ತೌಲನಿಕ ಸಾಹಿತ್ಯ ಮತ್ತು ಭಾಷಾಂತರ ವಿಭಾಗದ ಪ್ರಾಧ್ಯಾಪಕರಾಗಿಯೂ, ಮೈಸೂರು ಮಹಾರಾಜಾ ಕಾಲೇಜಿನಲ್ಲಿ ಇಂಗ್ಲಿಷ್ ಸಾಹಿತ್ಯ ಬೋಧಕರಾಗಿಯೂ ಸೇವೆ ಸಲ್ಲಿಸಿ ನಿವೃತ್ತರು. ಕವಿ, ವಿಮರ್ಶಕ, ಭಾಷಾಂತರಕಾರರಾಗಿ ಹಲವು ಗ್ರಂಥಗಳನ್ನು ರಚಿಸಿದ್ದಾರೆ. ಭಾರತೀಯ ಜ್ಞಾನಪೀಠ, ಸರಸ್ವತಿ ಸಮ್ಮಾನ್, ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಸಮಿತಿಯ ಸದಸ್ಯರಾಗಿ ಕೆಲಸ ನಿರ್ವಹಿಸಿದ್ದರು. ಆಫ್ರಿಕನ್ ಲೇಖಕ ಚಿನುವ ಅಚಿಬೆಯ ಥಿಂಗ್ಸ್ ಫಾಲ್ ಅಪಾರ್ಟ್ ಕೃತಿಯನ್ನು ‘ಭಂಗ’ ಶೀರ್ಷಿಕೆಯಡಿ ಅನುವಾದಿಸಿದ್ದಾರೆ ಖ್ಯಾತ ಬರಹಗಾರ ಸಿ.ಎನ್. ರಾಮಚಂದ್ರನ್ ಅವರ ಬದುಕು-ಬರೆಹ ಕುರಿತ ಕೃತಿ ಪ್ರಕಟಿಸಿದ್ದಾರೆ. ...

READ MORE

Related Books