
ಪ್ರಜಾವಾಣಿಯಲ್ಲಿ ಪ್ರಕಟವಾದ ಅಂಕಣಬರಹಗಳ ಸಂಗ್ರಹ ರೂಪ ಚೌಕಟ್ಟಿನಾಚೆ. ಸಾದಾ ಹಳ್ಳಿಗನ ನಿರ್ಭಿಡೆಯ ನೇರ ನುಡಿ ಮತ್ತು ರಾಜಧಾನಿಯ ಪತ್ರಕರ್ತನ ಸೂಕ್ಷ ಪರಿಣತಿ - ಇವೆರಡರ ಒಂದು ವಿಶಿಷ್ಟ ಸಂಗಮ ಪದ್ಮರಾಜ ದಂಡಾವತಿಯವರ ಬರಹಗಳಲ್ಲಿದೆ. ಉದಾಹರಣೆಗೆ, ಸರ್ಕಾರಿ ಶಾಲೆಗಳಲ್ಲಿ ಜಾತಿಭೇದ ಮಾಡುವ ಯೋಜನೆಗಳನ್ನು ತರುವುದು ತಪ್ಪೆಂದು ಅವರು ವಾದಿಸುವಾಗ ಅದರ ಹಿಂದೆ ಹಳ್ಳಿಗನ ನಿರ್ಭಿಡೆಯ ನುಡಿ ಕಂಡರೆ, ಅಸ್ಮಿತೆಯ ರಾಜಕಾರಣದ ಐತಿಹಾಸಿಕ ಮಜಲುಗಳ ಕಥನವನ್ನು ಅವರು ಮಾಡುತ್ತಿರುವಾಗ ನಮಗೆ ಪರಿಣತ ಪತ್ರಕರ್ತನೊಬ್ಬನ ಸೂಕ್ಷ ಜ್ಞತೆ ಎದುರಾಗುತ್ತದೆ.
©2025 Book Brahma Private Limited.