ಇರುವುದೆಲ್ಲವ ಬಿಟ್ಟು

Author : ಕಿಗ್ಗಾಲು. ಎಸ್. ಗಿರೀಶ್

Pages 294

₹ 200.00




Year of Publication: 2021
Published by: ಚಾಮುಂಡೇಶ್ವರಿ ಪ್ರಕಾಶನ
Address: ಮೈಸೂರು
Phone: 9141395426

Synopsys

ಲೇಖಕ ಕಿಗ್ಗಾಲು. ಎಸ್. ಗಿರೀಶ್ ಅವರ ಎರಡನೆಯ ಸಾಮಾಜಿಕ ಕಾದಂಬರಿ ಹಾಗೂ ಹನ್ನೊಂದನೆಯ ಕೃತಿ ಇರುವುದೆಲ್ಲವ ಬಿಟ್ಟು. ವೈದಿಕ ಕುಟುಂಬದ ಶಾಂಭವಿಯು ಅನುಕೂಲಸ್ಥ ವೈದಿಕರೊಬ್ಬರನ್ನು ವಿವಾಹವಾದರೂ ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗಿ ಆಂಗ್ಲಮಾಧ್ಯಮ ಶಾಲೆಗೆ ಮಕ್ಕಳನ್ನು ಕಳುಹಿಸುವಳು.ಈ ಪ್ರತಿಭಾವಂತ ಮಕ್ಕಳು ವಿದೇಶದಲ್ಲಿ ಉದ್ಯೋಗಗಳಿಸಿ,ಅನ್ಯ ಧರ್ಮೀಯ ಹೆಂಗುಸರೊಂದಿಗೆ ಲಿವ್ ಇನ್ ಸಂಪರ್ಕದಲ್ಲಿದ್ದು ಹಣದಾಸೆಗಾಗಿ ಹೆತ್ತ ತಾಯಿಯನ್ನು ತಮ್ಮಲ್ಲಿಗೆ ಕರೆಸಿ,ಅನಂತರ ವೃದ್ಧಾಶ್ರಮಕ್ಕೆ ಸೇರಿಸಿ ಅವಳ ದಾರುಣದ ಅಂತ್ಯಕ್ಕೆ ಕಾರಣರಾಗುವರು. ಚಂದ್ರಮುಖಿಯೆಂಬ ಮಹಳೆಯು ಸಂಸಾರ ನಡೆಸಲಾಗದ ಅಶಕ್ತನನ್ನು ವಿವಾಹವಾಗಿ,ಅನಂತರ ಅವನನ್ನು ತೊರೆದು ದರ್ಜಿಯನ್ನು ಮದುವೆಯಾಗಿ ಗಂಡುಮಗುವಿನ ತಾಯಿಯಾಗುವಳು. ಅವಳು ಸ್ವ ಪರಿಶ್ರಮದಿಂದ ಮೇಲ್ಮೆಗೆ ಬರುತ್ತಾಳೆ ಹಾಗೂ ಮಗನಿಗೆ ಕೃಷಿಯಲ್ಲಿಯೇ ಬದುಕನ್ನು ಕಾಣಿಸುತ್ತಾಳೆ. ಇರುವುದೆಲ್ಲವ ಬಿಟ್ಟು ಇಲ್ಲದುದಕೆ ತುಡಿಯುವ/ ಬಯಸುವ ಶಾಂಭವಿ,ಏನೂ ಇರದೆ ಎಲ್ಲವನ್ನೂ ಪಡೆಯುವ ಚಂದ್ರಮುಖಿ,ಹೀಗೆ ಇಬ್ಬರ ಸಂಸಾರದ ಘಟನೆಗಳೇ ಈ ಕಾದಂಬರಿಯ ಹುರುಳು.

About the Author

ಕಿಗ್ಗಾಲು. ಎಸ್. ಗಿರೀಶ್
(24 December 1951)

ಕೊಡಗು ಜಿಲ್ಲೆಯ ಕಿಗ್ಗಾಲು ಗ್ರಾಮದ ನಿವಾಸಿ ಕಿಗ್ಗಾಲು ಗಿರೀಶ್ ರವರು 1951ರ ಡಿಸೆಂಬರ್ 24 ರಂದು ಶ್ರೀನಿವಾಸ ರಾಜಲಕ್ಷ್ಮಿ ಹವ್ಯಕದಂಪತಿಗಳ ದ್ವಿತೀಯ ಪುತ್ರನಾಗಿ ಕಿಗ್ಗಾಲುವಿನಲ್ಲಿ ಜನಿಸಿದರು. ಮೂರ್ನಾಡುವಿನಲ್ಲಿ ಪ್ರಾಥಮಿಕ ಹಾಗೂ ಪ್ರೌಡಶಿಕ್ಷಣವನ್ನು ಪಡೆದ ಇವರು ಮಡಿಕೇರಿಯ ಅಂದಿನ ಸರಕಾರೀ ಕಾಲೇಜಿನಲ್ಲಿ ಬಿ.ಎಸ್ ಸಿ ಪದವಿಯನ್ನು ಗಳಿಸಿದರು.ಅನಂತರ,ಭಾರತೀಯ ವಾಯುಪಡೆಗೆ ಆಯ್ಕೆಯಾಗಿ,ಗುಜರಾತಿನ ಭುಜ್ ಪಟ್ಟಣದಲ್ಲಿ ವಾಯುಸೇನಾ ಕರ್ತವ್ಯಕ್ಕಿಳಿದರು. ವಿದ್ಯಾರ್ಥಿಯಾಗಿರುವಾಗಲೇ ಸುಧಾ,ಪ್ರಜಾವಾಣಿ ಮುಂತಾದ ನಿಯತಕಾಲಿಕಗಳಿಗೆ ಬರೆಹಗಳನ್ನು ನೀಡುತ್ತಿದ್ದ ಇವರು ವಾಯುಪಡೆಯಲ್ಲಿಯೂ ಲೇಖನಗಳನ್ನು ಬರೆಯುತ್ತಿದ್ದರು.ಆಗ್ರಾ ವಿಶ್ವವಿದ್ಯಾನಿಲಯದಲ್ಲಿ ಆಂಗ್ಲಭಾಷೆಯಲ್ಲಿ ಎಮ್ ಏ ಪದವಿ ಗಳಿಸಿ,ಹದಿನೇಳು ವರ್ಷ ಸೇವೆಮಾಡಿ ಅನಂತರ ಸೇನೆಯಿಂದ ನಿವೃತರಾದರು. ಮಡಿಕೇರಿ ಆಕಾಶವಾಣಿಯಲ್ಲಿ ...

READ MORE

Related Books