ಶತ್ರುವಿಲ್ಲದ ಸಮರ

Author : ನಾಗೇಶ ಹೆಗಡೆ

Pages 216

₹ 120.00




Year of Publication: 2011
Published by: ಅಂಕಿತ ಪುಸ್ತಕ
Address: 53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು - 560 004
Phone: 0802661 7100

Synopsys

ಖ್ಯಾತ ಪರಿಸರವಾದಿ ನಾಗೇಶ ಹೆಗಡೆ ಅವರ ಕೃತಿ-ಶತ್ರುವಿಲ್ಲದ ಸಮರ. ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟಗೊಂಡ ಲೇಖಕರ ಅಂಕಣ ಬರಹಗಳನ್ನು ಸಂಕಲಿಸಲಾಗಿದೆ. ಭೂಮಿಯ ಉಷ್ಣತೆ ಹೆಚ್ಚುತ್ತಿದೆ. ಹಸಿರು ಕಡಿಮೆಯಾಗಿ ಮಳೆಯ ಪ್ರಮಾಣವೂ ತಗ್ಗುತ್ತಿದೆ. ಇದರಿಂದ, ಭೂಮಿಯ ಸಮತೋಲನ ತಪ್ಪಿ ನಿಸರ್ಗ ವಿಕೋಪಗಳು ಸಂಭವಿಸುತ್ತವೆ. ಲೇಖಕರೇ ಹೇಳುವಂತೆ ‘ಮುಷ್ಟಿಗೆ ಸಿಕ್ಕಷ್ಟನ್ನು ಇಲ್ಲಿ ಪೋಣಿಸಲಾಗಿದೆ. ಇವೆಲ್ಲ ‘ಪ್ರಜಾವಾಣಿ’ ಪತ್ರಿಕೆಯಲ್ಲಿ ಪ್ರತಿ ಗುರುವಾರ ಪ್ರಕಟವಾಗುತ್ತಿರುವ ‘ವಿಜ್ಞಾನ ವಿಶೇಷ’ ಅಂಕಣ ಬರಹಗಳು. ಎಲ್ಲವೂ ಬಿಸಿಭೂಮಿಗೆ ಸಂಬಂಧಿಸಿದ ವಿಷಯಗಳೇನಲ್ಲ. ಆಯಾ ವಾರದಲ್ಲಿ, ಮುಖ್ಯವೆನಿಸಿದ ವಿಶ್ವ ವಿದ್ಯಮನಗಳನ್ನು ಎದುರಿಗೆ ಇಟ್ಟುಕೊಂಡು ನಮ್ಮ ಸಮಾಜಕ್ಕೆ, ನಮ್ಮ ಸಮಯಕ್ಕೆ ಪ್ರಸ್ತುತವೆನಿಸುವಂತೆ ಬರೆದಿರುವ ವಿಶ್ಲೇಷಣೆಗಳು ಇವು. ಆದರೆ ಬಿಸಿ ಪ್ರಳಯ ಪದೇ ಪದೆ ಅಲ್ಲಲ್ಲಿ ಪ್ರಸ್ತಾಪಕ್ಕೆ ಬಂದಿದೆ. ಇಸವಿಯ ಆರಂಭದಲ್ಲೂ ಅದೇ, ಕೊನೆಯಲ್ಲೂ ಅದೇ. ಅದಕ್ಕೇ ಈ ಸಂಕಲನಕ್ಕೆ ‘ಸಮರ’ದ ಶಿರೋನಾಮೆ ಕೊಡಲಾಗಿದೆ.’ ಎಂದು ಅಭಿಪ್ರಾಯಪಟ್ಟಿದ್ದಾರೆ.

About the Author

ನಾಗೇಶ ಹೆಗಡೆ
(14 February 1948)

ಕನ್ನಡದ ಪ್ರಮುಖ ಲೇಖಕರಲ್ಲೊಬ್ಬರಾದ ನಾಗೇಶ ಹೆಗಡೆ ಅವರ ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಬಕ್ಕಮನೆ. ಮಾಧ್ಯಮಿಕ ಶಿಕ್ಷಣವನ್ನು ಯಡಳ್ಳಿಯ ವಿದ್ಯೋದಯ ಹೈಸ್ಕೂಲಿನಲ್ಲಿ ಪೂರೈಸಿದ ಅವರು ಶಿರಸಿಯ ಮೋಟಿನಸರ ಸ್ಮಾರಕ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಭೂವಿಜ್ಞಾನದಲ್ಲಿ ಬಿಎಸ್‍ಸಿ ಮುಗಿಸಿದರು. ಖರಗಪುರ ಐಐಟಿಯಲ್ಲಿ ಆನ್ವಯಿಕ ಭೂವಿಜ್ಞಾನದಲ್ಲಿ ಎಂಎಸ್‍ಸಿ (ಟೆಕ್) ಮಾಡಿದರು. ದೆಹಲಿಯ ಜವಾಹರಲಾಲ ನೆಹರು ವಿಶ್ವವಿದ್ಯಾಲಯದಲ್ಲಿ ಪರಿಸರ ವಿಜ್ಞಾನದಲ್ಲಿ ಎಂ.ಫಿಲ್ ಮಾಡಿದರು. ಶಿಕ್ಷಕ, ಪರಿಸರವಾದಿ ಹಾಗೂ ಪತ್ರಕರ್ತರಾಗಿ ವಿಭಿನ್ನ ಪಾತ್ರಗಳನ್ನು ವಹಿಸುತ್ತಿರುವ ನಾಗೇಶ ಹೆಗಡೆ ಸುಧಾ ವಾರಪತ್ರಿಕೆಯ ಸಹಾಯಕ ಸಂಪಾದಕರಾಗಿದ್ದರು. ಕನ್ನಡದಲ್ಲಿ ವಿಜ್ಞಾನ-ತಂತ್ರಜ್ಞಾನದ ಲೇಖನಗಳನ್ನು ಬರೆದಿರುವ ...

READ MORE

Related Books