ದ್ವಾಪರಯುಗ ಬಳಿಕ ಕಲಿಯುಗ ಆರಂಭದ ಘಟ್ಟದಲ್ಲಿ ಉದ್ಭವವಾದ ಸ್ಥಿತ್ಯಂತರಗಳು ಈ ಕಾದಂಬರಿಯ ಪ್ರಮುಖ ಕಥಾ ವಸ್ತು. ಧನದಾಹ, ಸ್ವಾರ್ಥ, ಪ್ರಾಚೀನ ನಂಬಿಕೆಗಳನ್ನು ಒರೆಗೆ ಹಚ್ಚುವ ಸಂದರ್ಭಗಳನ್ನು ಈ ಕೃತಿಯಲ್ಲಿ ಕಾಣುಬಹುದು.
ಕಾದಂಬರಿಕಾರ ಲಕ್ಷ್ಮಣ ಕೌಂಟೆಯವರು 1958 ಡಿಸೆಂಬರ್ 10 ರಂದು ಜನಿಸಿದರು. ಮೂಲತಃ ಗುಲಬರ್ಗದವರು. ರಂಗಭೂಮಿ ಅವರ ಅಭಿರುಚಿಯ ಕ್ಷೇತ್ರ. ಓದು, ಸಾಹಿತ್ಯ ರಚನೆ, ನಾಟಕ ಅವರ ಒಲವಿನ ಪ್ರವೃತ್ತಿ. ಅವರು ಬರೆದ ನಾಟಕ 'ಕಲೆಯ ಕೊಲೆ ಅರ್ಥಾತ್ ಕಲಾವಿದನ ಕಣ್ಣೀರು' ರಂಗ ಪ್ರದರ್ಶನಗೊಂಡು ಜನ ಮೆಚ್ಚುಗೆಗೆ ಪಾತ್ರರಾಗಿದ್ದರು. ಲೀಲಾತರಂಗ, ಸಂಚಲನ, ಅನುಪರ್ವ, ಸಮರ್ಪಿತ ಮುಂತಾದ ಕಾದಂಬರಿಗಳನ್ನು ರಚಿಸಿದ್ದಾರೆ. ...
READ MORE