ಕೊಡಗಿನ ಸಾಹಿತ್ಯ ತಪಸ್ವಿಗಳು

Author : ವೈಲೇಶ್ ಪಿ. ಎಸ್

Pages 134

₹ 140.00




Year of Publication: 2021
Published by: ಬೊಮ್ಮಲಿಂಗೇಶ್ವರ ಪ್ರಕಾಶನ
Address: ಬ್ರಹ್ಮ ಲಿಂಗೇಶ್ವರ ನಿಲಯ, ಕೆ. ಬೋಯಿಕೇರಿ ಗ್ರಾಮ ಮತ್ತು ಅಂಚೆ ವಿರಾಜಪೇಟೆ ತಾಲ್ಲೂಕು ದ. ಕೊಡಗು-571218

Synopsys

‘ಕೊಡಗಿನ ಸಾಹಿತ್ಯ ತಪಸ್ವಿಗಳು’ ಕೃತಿಯು ವೈಲೇಶ್ ಪಿ. ಎಸ್ ಕೊಡಗು ಅವರ ಅಂಕಣ- ರಿಂಗಣ ಸಂಕಲನವಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ಸುಬ್ರಾ `ಭಾರತೀಯರಿಗೆ ಚಾರಿತ್ರಿಕ ಪ್ರಜ್ಞೆ ಕಡಿಮೆ ಎಂಬ ಮಾತನ್ನು ಅಸರಬ್ ಗಣಿತಜ್ಞ ಅಲ್ಬೆರೂನಿ ಹೇಳಿದ್ದಾನೆ. ನಾವು ನಮ್ಮ ದೇಶದ ಯಾವುದೇ ವ್ಯಕ್ತಿ, ಸಂಸ್ಥೆ ಅಥವಾ ಊರಿನ ಚರಿತ್ರೆಯ ಬಗ್ಗೆ ಅಧ್ಯಯನ ಮಾಡಲು ಹೊರಟರೂ ಈ ಮಾತಿನ ಮರ್ಮ ನಮಗೆ ನಿಚ್ಛಳವಾಗಿ ಅರಿವಾಗುತ್ತದೆ. ನಾವು ಭಾರತೀಯರು ಯಾವುದನ್ನೂ ದಾಖಲಿಸಿಡುವ ಗೋಜಿಗೆ ಹೋಗುವುದಿಲ್ಲ. ಈ ನಿಟ್ಟಿನಲ್ಲಿ, ಕೊಡಗಿನ ಲೇಖಕರು ಮತ್ತು ಅವರ ಕೃತಿಗಳ ಕುರಿತು ವೈಲೇಶ್ ಅವರ ಈ ಅಂಕಣದ ಸಂಕಲನ ಒಂದು ಸಾರ್ಥಕ ಕೆಲಸ. ಮುಂದೆ ಸಾಹಿತ್ಯಿಕ ಅಧ್ಯಯನಕಾರರಿಗೆ ಈ ಕೃತಿ ಮಹತ್ವದ ಒಂದು ಆಕರವಾಗಲಿದೆ ’ ಎಂದು ಪ್ರಶಂಸಿಸಿದ್ದಾರೆ. 

About the Author

ವೈಲೇಶ್ ಪಿ. ಎಸ್

ಲೇಖಕ ವೈಲೇಶ್ ಪಿ. ಎಸ್ ಅವರು ಮೂಲತಃ ಕೊಡಗಿನವರು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಚಾಲಕರಾಗಿದ್ದಾರೆ.   ಕೃತಿಗಳು: ಅಮ್ಮ ನಿನಗಾಗಿ (2018) , ಕಣ್ಮರೆಯಾದ ಹಳ್ಳಿ(2020), ಬೊಮ್ಮಲಿಂಗನ ಸಗ್ಗ(2021) (ಕವನಸಂಕಲನ) ...

READ MORE

Related Books