
’ವಾರ್ತಾಭಾರತಿ’ ಪತ್ರಿಕೆಗಾಗಿ ಕವಯತ್ರಿ, ಚಿಂತಕಿ ಜ್ಯೋತಿ ಗುರುಪ್ರಸಾದ್ ಅವರು ಬರೆದ ಅಂಕಣಗಳ ಮೊದಲ ಭಾಗ ’ಜೋಲಿ ಲಾಲಿ’. ಪತ್ರಿಕೆಯ ಸಂಪಾದಕ ಬಿ.ಎಂ. ಬಷೀರ್ ಅವರ ಒತ್ತಾಸೆಯಿಂದಾಗಿ ಈ ಬರಹಗಳು ಮೂಡಿಬಂದವು ಎಂದು ಅಂಕಣಕಾರ್ತಿ ಹೇಳಿಕೊಂಡಿದ್ದಾರೆ. ಸಂತ ಶಿಶುನಾಳ ಶರೀಫರ ಆಲೋಚನಾ ಕ್ರಮ ಈ ಅಂಕಣ ಬರಹಗಳ ರಚನೆಗೆ ಸ್ಫೂರ್ತಿಯಂತೆ.
ಸ್ವಾರಸ್ಯಕರ ಸಂಗತಿ ಎಂದರೆ ಮೊದಮೊದಲು ಇಲ್ಲಿನ ಅಂಕಣಗಳನ್ನು ವಿರೋಧಿಸುತ್ತಿದ್ದ ಚಿಂತಕ ಪಟ್ಟಾಭಿರಾಮ ಸೋಮಯಾಜಿ ಕೂಡ ಕಡೆಕಡೆಗೆ ಇವುಗಳ ಪ್ರಾಮಾಣಿಕ ಅಭಿವ್ಯಕ್ತಿಯನ್ನು ಕಂಡು ಖುಷಿಗೊಂಡಿರುವುದನ್ನು ಲೇಖಕಿ ಸ್ಮರಿಸಿದ್ದಾರೆ.
2009ರಿಂದ 2010ರ ನಡುವೆ ಪ್ರಕಟಗೊಂಡ ಅಂಕಣ ಬರಹಗಳ ಸಂಗ್ರಹ ಇದು. ಇದಲ್ಲದೆ ಎರಡನೇ ಭಾಗ ಕೂಡ ಪ್ರಕಟಗೊಂಡಿದೆ.
©2025 Book Brahma Private Limited.