ಬಹುಮುಖಿ

Author : ಜೀಯು ಭಟ್ (ಗಜಾನನ ಉಮಾಮಹೇಶ್ವರ ಭಟ್)

Pages 560

₹ 500.00




Year of Publication: 2020
Published by: ಪ್ರೇಮ ಪ್ರಕಾಶನ
Address: 90, ಬೆಳಕು, ವಿವೇಕಾನಂದ ಬ್ಲಾಕ್, ಶಿಕ್ಷಕರ ಬಡಾವಣೆ, ಮೈಸೂರು
Phone: 9886026085

Synopsys

ಜಿ.ಯು. ಭಟ್ ಅವರ 'ಬಹುಮುಖಿ' ಒಂದು ವಿಭಿನ್ನ ಬಗೆಯ ಅಂಕಣ ಬರಹಗಳ ಸಂಕಲನ, ಈಗ ಬಹುತೇಕ ಪತ್ರಿಕೆಗಳು ಅನೇಕ ವಿದ್ವಾಂಸರ ಅಂಕಣ ಬರಹಗಳನ್ನು ಸಾಂದರ್ಭಿಕ ಘಟನೆ, ಸಂದರ್ಭ, ಸನ್ನಿವೇಶಗಳನ್ನು ಕುರಿತು ತಮ್ಮದೇ ಆದ ಭಾಷೆ, ಶೈಲಿಗಳ ಮೂಲಕ ಸಿದ್ಧಗೊಳಿಸಿಕೊಟ್ಟಿರುವುದನ್ನು ಪ್ರಕಟಿಸುತ್ತಾ ಬರುತ್ತಿವೆ. ಹಾಗಾಗಿ ಅಂಕಣ ಸಾಹಿತ್ಯ ಒಂದು ಪ್ರಕಾರವಾಗಿ ತನ್ನದೇ ಆದ ನೆಲೆಯನ್ನು ಸಾಹಿತ್ಯಕ್ಷೇತ್ರದಲ್ಲಿ ಗುರುತಿಸಿಕೊಂಡಿದೆ. ಪ್ರತಿಯೊಂದು ಬರಹಗಳು ಅಂದಂದಿನ ಸ್ಥಿತಿಗತಿಗಳಿಗೆ ಸ್ಪಂದಿಸುತ್ತಾ ಬಂದಿವೆ. ಕಲೆ, ಸಾಹಿತ್ಯ, ಸಂಸ್ಕೃತಿ, ಸಾಮಾಜಿಕ, ಆರ್ಥಿಕ, ಧಾರ್ಮಿಕ, ವೈಜ್ಞಾನಿಕ, ರಾಜಕೀಯ, ಯಕ್ಷಗಾನ, ಜಾನಪದ, ಶೈಕ್ಷಣಿಕ, ಜಾಗತಿಕ, ರಂಗಭೂಮಿ, ವಿಶಿಷ್ಟ ಸಾಧಕರ ಮುಂತಾದ ಕ್ಷೇತ್ರಗಳಲ್ಲಿನ ವೈಶಿಷ್ಟ್ಯ, ವೈವಿಧ್ಯಗಳನ್ನು ಪುಟ್ಟ ಪುಟ್ಟ ಲೇಖನಗಳಲ್ಲಿ ಹೆಚ್ಚಿನ ವಿಷಯ ಸಂಗ್ರಹಣೆ ಮೂಲಕ ಹಿಡಿದಿಟ್ಟಿರುವುದು ಎದ್ದುಕಾಣುತ್ತದೆ. ಇಂತಹ ವಿವಿಧ ಬಗೆಯ ಲೇಖನಗಳನ್ನೊಳಗೊಂಡ ಕೃತಿ 'ಬಹುಮುಖಿ' ಸಂಕಲನ.

About the Author

ಜೀಯು ಭಟ್ (ಗಜಾನನ ಉಮಾಮಹೇಶ್ವರ ಭಟ್)
(03 May 1948)

ಜೀಯು ಭಟ್ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದವರು. ಪತ್ರಿಕೋದ್ಯಮ ಮತ್ತು ಕೃಷಿಯನ್ನು ವೃತ್ತಿಯಾಗಿಸಿಕೊಂಡಿದ್ದಾರೆ. ಉದಯವಾಣಿ ಹಿರಿಯ ವರದಿಗಾರನಾಗಿ 50 ವರ್ಷಗಳಿಂದ ಕೆಲಸನಿರ್ವಹಿಸಿದ್ದಾರೆ . ಸಂಯುಕ್ತ ಕರ್ನಾಟಕ ಪತ್ರಿಕೆಯ ಹೊನ್ನಾವರದ ವರದಿಗಾರನಾಗಿ , ಗ್ರಾಮ ವಿಕಾಸ ವಾರಪತ್ರಿಕೆಯ ಸಂಪಾದಕನಾಗಿ, ಸಮನ್ವಯ ವಾರಪತ್ರಿಕೆಯ ಸ್ಥಾನಿಕ ಸಂಪಾದಕನಾಗಿ ಕಾರ್ಯನಿರ್ವಹಿಸಿದ್ದಾರೆ. “ಜೋಕುಮಾರ ಸ್ವಾಮಿ”, “ಅಂಧಯುಗ”, “ಬೇಲಿ ಮತ್ತು ಹೊಲ”, “ಆಷಾಢದ ಒಂದು ದಿನ”, ನಾಟಕಗಳನ್ನು ನಿರ್ದೇಶಿಸಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಹಾಗೂ ಹರಿಶ್ಚಂದ್ರ ಭಟ್ ನಿರ್ದೇಶಿಸಿದ “ಶೋಧ”,, ಕಾಶಿನಾಥರ “ಅನುಭವ”, ಅಂಬರೀಶ ಜೊತೆ “ಗಿರಿಬಾಲೆ”, ಚಲನಚಿತ್ರದಲ್ಲಿ, “ಅಪ್ಸರಧಾರಾ” ,ವಿಶಾಲರಾಜ್ ನಿರ್ದೇಶನದ ...

READ MORE

Related Books