ಆನೆ ಸಾಕಲು ಹೊರಟವಳು

Author : ಸಹನಾ ಕಾಂತಬೈಲು

Pages 112

₹ 90.00




Year of Publication: 2019
Published by: ಶ್ರೀ ರಾಮ ಬುಕ್ ಸೆಂಟರ್
Address: ಬೆಂಗಳೂರು

Synopsys

ಲೇಖಕಿ ಸಹನಾ ಕಾಂತಬೈಲು ಅವರ ಪ್ರಬಂಧಗಳ ಸಂಕಲನ-ಆನೆ ಸಾಕಲು ಹೊರಟವಳು. ಬಹುತೇಕ ಲೇಖನಗಳು ಉದಯವಾಣಿ ದಿನಪತ್ರಿಕೆಗೆ ಬರೆದ ಅಂಕಣ ಬರಹಗಳಾಗಿವೆ. ಕೃಷಿ ಮಹಿಳೆಯ ಸಾಹಸವನ್ನು ವಿವರಿಸುವ ಒಟ್ಟು 26 ಪ್ರಬಂಧಗಳಿವೆ. ಆಹಾರ ಸಿಗದ ಕಾರಣ ಕಾಡಿನಿಂದ ನಾಡಿಗೆ ನುಗ್ಗುವ ಪ್ರಾಣಿಗಳು ವಿಶೆಷವಾಗಿ ಆನೆಗಳು, ಅವುಗಳನ್ನು ಓಡಿಸಲು ಹಾಕಿದ ವಿದ್ಯುತ್ ತಂತಿಗಳು, ಇವುಗಳ ಪರಿವೇ ಇಲ್ಲದ ಆನೆಗಳು ವಿದ್ಯುತ್ ತಂತಿ ಬೇಲಿಗೆ ಸಿಕ್ಕಿ ಸಾಯುವುದು ಹೀಗೆ ಆನೆಗಳ ಕುರಿತೇ ವಿವಿಧ ಪ್ರಬಂಧಗಳಿದ್ದು, ಕೃತಿಗೂ ‘ಆನೆ ಸಾಕಲು ಹೊರಟವಳು’ ಎಂಬ ಶೀರ್ಷಿಕೆ ನೀಡಿದ್ದರ ಬಗ್ಗೆ ಲೇಖಕಿ ಸ್ಪಷ್ಟಪಡಿಸಿದ್ದಾರೆ.

ಜೇನು ಕೃಷಿ ಬಗ್ಗೆ , ಹಂಡೆ ನೀರಿನ ಸ್ನಾನದ ಬಗ್ಗೆ , ಮನೆಯಲ್ಲಿ ವಿದ್ಯುತ್ ತಯಾರಿಸಿದ ಬಗ್ಗೆ .. ಹೀಗೆ ಹಲವಾರು ಪ್ರಬಂಧ ಗಳು ಮಣ್ಣಿನ ವಾಸನೆ ಬೀರುತ್ತವೆ . ಖ್ಯಾತ ಲೇಖಕ ನಾಗೇಶ್ ಹೆಗಡೆ ಅವರು ಕೃತಿಗೆ ಮುನ್ನುಡಿ ಬರೆದಿದ್ದಾರೆ. ಮನಸಿಗೆ ಮುದ ನೀಡುವ ತಿಳಿವಳಿಕೆ ಹೆಚ್ಚಿಸುವ ಬರಹಗಳು .ಕೃತಿಯಲ್ಲಿವೆ. 

 

About the Author

ಸಹನಾ ಕಾಂತಬೈಲು

ಲೇಖಕಿ ಸಹನಾ ಕಾಂತಬೈಲು ಅವರು ಕೊಡಗು ಮತ್ತು ದಕ್ಷಿಣ ಕನ್ನಡದ ಗಡಿಭಾಗವಾದ ಸಂಪಾಜೆಯ ದಬ್ಬಡ್ಕ ಎನ್ನುವ ಕುಗ್ರಾಮದವರು. ಕೇವಲ ಪಿ.ಯು.ಸಿ ವರೆಗೆ ವಿದ್ಯಾಬ್ಯಾಸ ಪಡೆದ ಅವರು ತಮ್ಮ 17ನೇ ವಯಸ್ಸಿಗೆ ವಿವಾಹವಾದರು. 20ನೇ ಹರೆಯದಲ್ಲೇ ಮಂಗಳ, ಸುಧಾ, ತುಷಾರ, ಮಯೂರ, ಕರ್ಮವೀರದಲ್ಲಿ ಅವರ ಹಲವಾರು ಹನಿಗವಿತೆಗಳು ಪ್ರಕಟವಾಗಿವೆ. ಚುಟುಕುಗಳ ರಚನೆಗಾಗಿ ಕೇರಳದಲ್ಲಿ ನಡೆದ ಅಂತರಾಜ್ಯ ಮಟ್ಟದ ಪ್ರತಿಷ್ಟಿತ ಚುಟುಕು ಶ್ರೀ ಪ್ರಶಸ್ತಿ ದೊರೆಕಿದೆ. ಅಲ್ಲದೇ ಮಡಿಕೇರಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೂ ಹಿಂದೆ ಶಿವಮೊಗ್ಗೆಯಲ್ಲಿ ನಡೆದ ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ.  ಕೃಷಿಯನ್ನೇ ನೆಚ್ಚಿಕೊಂಡ ಮನೆ ಅವರದ್ದಾಗಿದ್ದರಿಂದ ...

READ MORE

Related Books