ಕರುಣಾಳು ಬಾ ಬೆಳಕೆ ಭಾಗ-7

Author : ಗುರುರಾಜ ಕರಜಗಿ

Pages 234

₹ 113.00




Year of Publication: 2015
Published by: ವ್ಯಾಸ ಪ್ರಕಾಶನ
Address: #480, 6ನೇ ಮುಖ್ಯರಸ್ತೆ, ಹೆಚ್.ಎಮ್.ಟಿ ಬಡಾವಣೆ ಆರ್.ಟಿ.ನಗರ, ಬೆಂಗಳೂರು-560032

Synopsys

ಪ್ರಜಾವಾಣಿ ಪತ್ರಿಕೆಯಲ್ಲಿ ನಿರಂತರವಾಗಿ ‘ಕರುಣಾಳು ಬಾ ಬೆಳಕೆ‘ ಶೀರ್ಷಿಕೆಯಡಿ ಡಾ. ಗುರುರಾಜ ಕರಜಗಿ ಅವರು ಬರೆಯುತ್ತಿದ್ದ ಅಂಕಣ ಲೇಖನಗಳ ಬರಹಗಳ ಈ ಕೃತಿ. ಅಂಕಣ ಲೇಖನಗಳ ಭಾಗ-7. ನೀತಿ ಕಥೆಗಳ ಮೂಲಕ ಜನಸಾಮಾನ್ಯರ ನೈತಿಕ ಪ್ರಜ್ಞೆಯನ್ನು ಜಾಗೃತಗೊಳಿಸುವ, ಜೀವನದಲ್ಲಿ ನೀತಿಯ ಅಳವಡಿಕೆಯ ಮಹತ್ವವನ್ನು ಪ್ರತಿಪಾದಿಸುವ ಕಳಕಳಿ ಕಾಣಬಹುದು. ಈ ಲೇಖನಗಳು ಗಾತ್ರದಲ್ಲಿ ಚಿಕ್ಕದಾಗಿದ್ದು, ತೀರಾ ಲಘು ಬರೆಹಗಳ ಮೂಲಕವೇ ಜೀವನದ ಗಂಭೀರತೆಯನ್ನು, ಬದುಕು ಸಾರ್ಥಕಪಡಿಸಿಕೊಳ್ಳುವ ಮಾರ್ಗವನ್ನು ಇವು ಬೋಧಿಸುತ್ತವೆ. ಹೀಗಾಗಿ, ಲೇಖನಗಳು ಓದುಗರಿಗೆ ಆಪ್ತವೆನಿಸುತ್ತವೆ.

About the Author

ಗುರುರಾಜ ಕರಜಗಿ
(24 May 1952)

ಡಾ.ಗುರುರಾಜ ಕರ್ಜಗಿಯವರು, ಗುರುರಾಜರು ಜನಿಸಿದ್ದು ೨೪.೦೫.೧೯೫೨ ರಲ್ಲಿ. ಶಿಕ್ಷಣ ತಜ್ಞರು. ಮೂರೂ ದಶಕಗಲಿಗಿಂತಲೂ ಹೆಚ್ಚುಕಾಲ ಉನ್ನತ ಮಟ್ಟದ ವಿದ್ಯಾಸಂಸ್ಥೆ ಕಟ್ಟಿ, ಬೆಳೆಸಿ, ಪ್ರಾಧ್ಯಾಪಕರಾಗಿ, ಸಾವಿರಾರು ವಿದ್ಯಾರ್ಥಿಗಳ ಭವಿಷ್ಯವನ್ನು ಉಜ್ಜಲವಾಗಿಸಿದವರು. ವಿಶ್ವದಾದ್ಯಂತ ಶಿಷ್ಯ ಪರಂಪರೆಯನ್ನ್ನು ಹೊಂದಿರುವ ಇವರು ಕರ್ನಾಟಕ ವಿಶ್ವವಿದ್ಯಾನಿಲಯದಿಂದ ರಸಾಯನ ಶಾಸ್ತ್ರದಲ್ಲಿ ಡಾಕ್ಟರೇಟನ್ನು ಪಡೆದುಕೊಂಡಿದ್ದಾರೆ. ೨೨ಕ್ಕೂಹೆಚ್ಚು ಸಂಶೋಧನಾ ಲೇಖನಗಳನು ದೇಶ ವಿದೇಶಗಳ ನಿಯತಕಾಲಿಕೆಗಳಲ್ಲಿ ಪ್ರಕಟಿಸಿದ್ದಾರೆ. ಸೃಜನ ಶೀಲತೆ,ಸಂವಹನಕಲೆ, ಮುಂತಾದದುಗಳಲಿ ಆಸಕ್ತಿ ಹೊಂದಿರುವ ಡಾ.ಕರಜಗಿಯವರು ತಮ್ಮ ಧನಾತ್ಮಕ ಚಿಂತನೆಗಳು, ಕಾರ್ಯಕ್ಷಮತೆ ಹಾಗೂ ಮಾನವೀಯ ಮೌಲ್ಯಗಳಿಗಾಗಿ ಚಿರಪರಿಚಿತರು ಇವರ ಉಪನ್ಯಾಸ ಹಾಗು ಕಾರ್ಯಾಗಾರಗಳಿಗೆ, ಭಾರತ ಮತ್ತು ವಿದೇಶಗಳಲ್ಲೂ ಹೆಚ್ಛು ಪರಿಚಿತರು. ಎಪ್ಪತ್ತಕ್ಕೂ ಹೆಚ್ಚು ...

READ MORE

Related Books