
‘ಭವಿಷ್ಯತ್ತಿನ ಪ್ರಭುತ್ವದ ಸ್ವರೂಪ’ ಸುರೇಶ ಭಟ್ ಬಾಕ್ರಬೈಲು ಅವರ ಒಂದು ಅವಲೋಕನ ಕೃತಿಯಾಗಿದೆ. ಈ ಕೃತಿಯಲ್ಲಿನ ಮಾತುಗಳು ಹೀಗಿವೆ; ವರ್ತಮಾನವು ಭವಿಷ್ಯಕ್ಕೆ ಅಡಿಗಲ್ಲು. ಮುಂದೇನು ಎಂಬುದಕ್ಕೆ ಇಂದು ಸೂಚನೆ ನೀಡುತ್ತದೆ. ಯಾವುದೂ ಸೂಚನೆ ಇಲ್ಲದೆ ಥಟಕ್ಕನೆ ಉದ್ಭವಿಸುವುದಿಲ್ಲ. ಚಿಲಿಯಲ್ಲಿ ಅಲೆಂಡೆ ಪ್ರಭುತ್ವವನ್ನು ಹೊಸಕಿಹಾಕಿ ಪೈಶಾಚಿಕ ಪಿನೋಶೆಯ ಸರ್ಕಾರ ಸ್ಥಾಪನೆಗೊಂಡಿತು. ಭಾರತದಲ್ಲಿ ಪ್ರಜಾಪ್ರಭುತ್ವವಾದಿ ವ್ಯವಸ್ಥೆಯನ್ನು ಪಲ್ಲಟಗೊಳಿಸದೆಯೇ ಅನಿಯಂತ್ರಿತ ಏಕಾಧಿಪತ್ಯವು ಹೊಮ್ಮುತ್ತದೆಯೋ ಎಂಬ ಆತಂಕವಿದೆ. ವಿಕಾಸವು ಯಾವ ದಿಕ್ಕಿನಲ್ಲಿ ಜರುಗುತ್ತದೆಂಬ ಭವಿಷ್ಯವಾಣಿಗಿಂತಲೂ ಯಾವ ಮಹದಾಶವು ಸಮುದಾಯಕ್ಕೆ ಪ್ರೇರಣೆ ನೀಡುತ್ತದೆಂಬುದು ಹೆಚ್ಚು ಪ್ರಸ್ತುತವಾದ್ದು. ಈ ದೃಷ್ಟಿಯಿಂದ ಚಾಮ್ ಸ್ಕಿಯ ಕೃತಿಗಳು ಮೌಲಿಕವಾದವು ಮತ್ತು ವಿಶಾಲ ಚಿಂತನೆಗೆ ಗ್ರಾಸ ಒದಗಿಸುವಂಥವು.
©2025 Book Brahma Private Limited.