‘ಎಮರ್ಜೆನ್ಸಿ’ ಸಂವಿಧಾನದ ಕೊಲೆಗೆ ನಡೆದ ಸಂಚು ಕುರಿತು ಬರೆದಿರುವ ರೋಹಿತ್ ಚಕ್ರತೀರ್ಥ ಅವರ ಸಂಪಾದಿತ ಲೇಖನ ಸಂಕಲನವಾಗಿದೆ. ಇಲ್ಲಿ 1975 ರಲ್ಲಿ ಕಾಂಗ್ರೆಸ್ ಪಕ್ಷದ ಇಂದಿರಾ ಗಾಂಧಿ ಘೋಷಿಸಿದ ತುರ್ತು ಪರಿಸ್ಥಿತಿಯ ಕುರಿತು ವಿವರಿಸಲಾಗಿದೆ. ಇನ್ನು ಇದೊಂದು ಭಾರತದ ಪ್ರಜಾಪ್ರಭುತ್ವ ಇತಿಹಾಸದಲ್ಲಿ ಅಳಿಸಲಾರದ ಕಪ್ಪುಚುಕ್ಕೆ. ಇದು ಏಕಾಯಿತು, ಹೇಗಾಯಿತು ಇದರ ಪರಿಣಾಮಗಳೇನು, ಸಂವಿಧಾನದ ಸ್ವರೂಪಕ್ಕೆ ಆದ ಘಾಸಿಯ ಪ್ರಮಾಣ ಎಂಥದ್ದು, ಷಾ ಆಯೋಗದ ವರದಿಯಲ್ಲಿ ದಾಖಲಿಸಿದ ಸತ್ಯಗಳೇನು, ಅ ವರದಿಯನ್ನು 35 ವರ್ಷ ಮುಚ್ಚಿಡುವುದಕ್ಕೆ ಏನು ಕಾರಣ. ಇತ್ಯಾದಿ -ಕನ್ನಡದಲ್ಲಿ ಇದುವರೆಗೂ ಪ್ರಕಟವಾಗದ ಮಾಹಿತಿಗಳನ್ನು ಸಂಗ್ರಹ ರೂಪದಲ್ಲಿ ಕೊಡುವ ಕೃತಿಯಿದು.
©2025 Book Brahma Private Limited.