
ಲೇಖಕ ನಾಗತಿಹಳ್ಳಿ ಚಂದ್ರಶೇಖರ ಅವರ ಅಂಕಣಗಳ ಬರೆಹ ಈ ಕೃತಿ-’ಹೊಳೆ ದಂಡೆ ಅಂಕಣಮಾಲೆ-ನೋಟ-2' . ಅಂಕಣಕಾರನ ಖಾಸಗಿ ಹಾಗೂ ಸಾರ್ವತ್ರಿಕ ಚಿಂತನೆಗಳು, ತತ್ಕಾಲಿಕ ಸಂಗತಿಗಳು ಇಲ್ಲಿ ಅರ್ಥ ವಿಸ್ತಾರವನ್ನು ಪಡೆದುಕೊಂಡಿವೆ. ಲೇಖಕರೇ ಹೇಳುವಂತೆ, ಅಂಕಣಕಾರ ಸೂರ್ಯನ ಕೆಳಗಿರುವ ಎಲ್ಲವನ್ನೂ ದಾಖಲಿಸಲು ಯತ್ನಿಸುತ್ತಿರುತ್ತಾನೆ. ಹೀಗಾಗಿ, ಅಂಕಣಕಾರನ ಪ್ರಜ್ಞೆ ಪ್ರವಾಹ ರೂಪದಲ್ಲಿರುತ್ತದೆ. ಹೊಳೆದಂಡೆಯ ಮೇಲೆ ಕುಳಿತು ತುಂಬಿ ಹರಿಯುವ ಬದುಕಿನ ಪ್ರವಾಹವನ್ನು ಬಿಡುಗಣ್ಣಿನಿಂದ ನೋಡ ತೊಡಗಿ ಹತ್ತು ವರ್ಷಗಳಾಯಿತು. ಈ ಕೃತಿಯು ಹೊಳೆದಂಡೆ ಅಂಕಣ ಮಾಲೆಯ ಎರಡನೇ ನೋಟ ಎಂದು ಲೇಖಕರೇ ತಮ್ಮ ಕೃತಿ ಬಗ್ಗೆ ಹೇಳಿಕೊಂಡಿದ್ದಾರೆ. ಪ್ರತಿ ಅಂಕಣದ ವಿಷಯ ವೈವಿಧ್ಯತೆಯಿಂದ ಕೂಡಿದ್ದು, ಓದುಗರನ್ನು ಸೆಳೆಯುತ್ತದೆ.
©2025 Book Brahma Private Limited.