
‘ಹೊಸಗನ್ನಡದ ಅರುಣೋದಯ’ ಕೃತಿಯು ಶ್ರೀನಿವಾಸ ಹಾವನೂರ ಅವರ ಪರಿಷ್ಕೃತ ತೃತೀಯ ಆವೃತ್ತಿಯಾಗಿದೆ. ಕೃತಿಗೆ ಮುನ್ನುಡಿ ಬರೆದಿರುವ ಹಾ. ಮಾ. ನಾಯಕ ಅವರು, ಹೊಸಗನ್ನಡದ ಅರುಣೋದಯ ಒಂದು ಅಪರೂಪದ ಆಕರ ಗ್ರಂಥ. ಶ್ರೇಷ್ಠವಾದ ಸಂಶೋಧನಾ ಗ್ರಂಥ. ಕೇವಲ ಚರಿತ್ರೆಯ ಅಂಶಗಳು ತುಂಬಿಕೊಂಡಿರದೇ ವಿಮರ್ಶೆಯೂ ಮೌಲ್ಯಮಾಪನವೂ ಈ ಬರಹದಲ್ಲಿ ಹೊಳವು ಹಾಕಿರುವುದು ಒಂದು ವಿಶೇಷ. ಅತ್ಯುತ್ತಮವಾದ ಸಾಹಿತ್ಯ ಚರಿತ್ರೆ ಮಾಡಬೇಕಾದ ಕೆಲಸವೇ ಇದು. ಕೆಲ ಸಂದರ್ಭಗಳಲ್ಲಿ , ಹಾವನೂರರು ಮೌಲಿಕವಾಗಿ ವಿಚಾರ ವಿವೇಚನೆ ಮಾಡಿದ್ದಾರೆ: ಹೊಸ ಆಧಾರಗಳನ್ನು ಕಲೆಹಾಕಿದ್ದಾರೆ. ಕ್ರೈಸ್ತ ಮಿಶನರಿಗಳ ಸಾಹಿತ್ಯದ ಇತಿಮಿತಿಗಳನ್ನೂ ಕೊಡುಗೆಗಳನ್ನೂ ಇಲ್ಲಿ ಚರ್ಚಿಸಿದ್ದಾರೆ. ಕರ್ನಾಟಕದಲ್ಲಿ ಮುದ್ರಣಾಲಯಗಳು ಆರಂಭವಾಗಿ ಬೆಳೆದುಕೊಂಡ ಬಂದ ಬಗೆಯನ್ನು ವಿವರಿಸಿರುವುದು ಈ ಗ್ರಂಥದ ಅತ್ಯುಪಯುಕ್ತವಾದ ಒಂದು ಭಾಗವಾಗಿದೆ’ ಎಂದು ಪ್ರಶಂಸಿಸಿದ್ದಾರೆ.
©2025 Book Brahma Private Limited.