
ಎಚ್.ಎಸ್. ದೊರೆಸ್ವಾಮಿ ಅವರು ಜ್ವಾಲಾಮುಖಿ ವಾರ ಪತ್ರಿಕೆಗೆ ಬರೆದ ಅಂಕಣಗಳೂ ಸೇರಿದಂತೆ ಪ್ರಚಲಿತ ವಿದ್ಯಮಾನಗಳ ಕುರಿತು ವಿವಿಧ ಸಂದರ್ಭಗಳಲ್ಲಿ ಬರೆದ ಲೇಖನಗಳ ಸಂಕಲನ-ಪ್ರಚಲಿತ ರಾಜಕೀಯ ಎತ್ತ ಸಾಗಿದೆ?.
ಕೃತಿಯ ಮುನ್ನುಡಿಯಲ್ಲಿ ಚಂದ್ರಶೇಖರ ಪಾಟೀಲ (ಚಂಪಾ) ಅವರು ಬರೆಯುತ್ತಾ, ‘ಪ್ರಚಲಿತ ಶಬ್ದ ಬಹಳ ಮುಖ್ಯ. ನಮ್ಮ ಕಣ್ಣೆದುರಿಗೇ ಸಂಭವಿಸುತ್ತಿರುವ ಸುಡು ಸುಡು ವರ್ತಮಾನವನ್ನು ನಾವು ಅರ್ಥಮಾಡಿಕೊಳ್ಳದಿದ್ದರೆ, ಅದಕ್ಕೆ ತಕ್ಕುದಾಗಿ ಮಾತು ಬರಹ ಕ್ರಿಯೆಗಳ ಮೂಲಕ ಸ್ಪಂದಿಸದಿದ್ದರೆ ಭವಿಷ್ಯದ ಕನಸು ಕಾಣಲಿಕ್ಕಾದರೂ ಹೇಗೆ ಸಾಧ್ಯ? ಹಿರಿಯರಾದ ದೊರೆಸ್ವಾಮಿಯವರ ಒಳನೋಟಗಳಲ್ಲಿ ತತ್ವಜ್ಞಾನವಿದೆ; ದರ್ಶನವಿದೆ; ಕ್ರಾಂತಿಯ ಸಂದೇಶವಿದೆ; ಅಪಾರ ಅನುಭವದ ಹಿನ್ನೆಲೆಯ ಅಪರೂಪದ ಕಾಣ್ಕೆಗಳಿವೆ’ ಎನ್ನುವ ಮೂಲಕ ಲೇಖನಗಳ ಮಾನವೀಯ ಮೌಲ್ಯವನ್ನು ವಿವರಿಸಿದ್ದಾರೆ.
©2025 Book Brahma Private Limited.