
ಸಮಕಾಲೀನ ಸಾಮಾಜಿಕ, ರಾಜಕೀಯ ಹಾಗೂ ಮಹಿಳಾ ಜೀವನ ಸ್ಥಿತಿಗತಿಗಳ ವಿಶ್ಲೇಷಣೆ ದೆಹಲಿ ನೋಟ ಕೃತಿಯ ಲೇಖನಗಳಲ್ಲಿವೆ. ಬಿಹಾರದ ಬಾಲಿಕಾಗೃಹದಲ್ಲಿ ನಡೆಯುತ್ತಿದ್ದ ಕ್ರೌರ್ಯ, ಮೇಧಾ ಪಾಟ್ಕರ್ ಅವರ ಕುರಿತ ಲೇಖನ ಹೀಗೆ ಅವರ ಪ್ರತಿಯೊಂದು ಅಂಕಣ ಬರಹವೂ ಸರ್ಕಾರವನ್ನು ವಿಮರ್ಶಿಸುವಂತಿದೆ. ಮಾನವೀಯ ನೆಲೆಗಟ್ಟಿನಲ್ಲಿ ರಚಿತವಾಗಿರುವ ಈ ಅಂಕಣ ಬರಹಗಳು ಇಂದಿನ ವಾಸ್ತವದ ಕುರಿತು ಕಣ್ತೆರೆಸುತ್ತವೆ.
ಪ್ರಚಲಿತ ವಿದ್ಯಮಾನಗಳಿಗೆ ಸ್ಪಂದಿಸುವ ಡಿ. ಉಮಾಪತಿಯವರ ಈ ಅಂಕಣ ಬರಹಗಳು ಓದುಗರನ್ನು ಯೋಚನೆಗೆ ದಾರಿ ಮಾಡುವುದಂತೂ ನಿಜ. ಈ ಕೃತಿಯಲ್ಲಿನ ಪ್ರತಿಯೊಂದು ಲೇಖನದ ಬರಹ ಆಳ, ಅದರ ಕ್ರೌರ್ಯ, ಅಮಾನವೀಯತೆಯನ್ನು ವಿವರಿಸುವುದರೊಂದಿಗೆ, ಕಣ್ಣಿದ್ದು ಕುರುಡರಂತಿರುವ ಜನಸಾಮಾನ್ಯರು, ನನಗೂ ಸಮಾಜಕ್ಕೂ ಸಂಬಂಧವೇ ಇಲ್ಲದಂತೆ ದುರಾಡಳಿತ ನಡೆಸುತ್ತಿರುವ ಸರ್ಕಾರದ ನಡೆಯನ್ನು ಪ್ರಶ್ನಿಸುವಂತಿವೆ.
©2025 Book Brahma Private Limited.