
ಖ್ಯಾತ ಪತ್ರಕರ್ತ, ಸಂಯುಕ್ತ ಕರ್ನಾಟಕ ದಿನಪತ್ರಿಕೆಯನ್ನು ಒಂದು ಧೀಮಂತ ಪತ್ರಿಕೆಯನ್ನಾಗಿ ಮಾಡಿದ ಖ್ಯಾತಿ ಕೆ. ಶಾಮರಾವ್ ಅವರಿಗೆ ಸಲ್ಲುತ್ತದೆ. ಸಂಜಯ ಎಂಬ ಹೆಸರಿನಿಂದಲೇ ಅವರು ಅಂಕಣಗಳನ್ನು ಬರೆಯುತ್ತಿದ್ದರು. ಸಂಯುಕ್ತ ಕರ್ನಾಟಕ ದಿನಪತ್ರಿಕೆಯಿಂದ ಅವರು ಹೊರ ಬಂದ ಮೇಲೆ ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಅಂಕಣ ಬರೆಯುತ್ತಿದ್ದು, ಆ ಬರಹಗಳ ಸಂಕಲನವೇ ‘ಸಂಜಯ ಉವಾಚ’. ಒಂದರ್ಥದಲ್ಲಿ ಅವರ ಅಫೂರ್ಣ ಆತ್ಮಕಥೆ ಎಂದೇ ಕರೆದು, ಆ ಎಲ್ಲ ಬರಹಗಳನ್ನು ಸಂಗ್ರಹಿಸಿ, ಸಂಪಾದಿಸಿ ಲೇಖಕ ವಿಶ್ವೇಶ್ವರ ಭಟ್ ಅವರು ನೀಡಿದ್ದೇ ಈ ಕೃತಿ-ಸಂಜಯ ಉವಾಚ.
©2025 Book Brahma Private Limited.