
ಶಿವಮೊಗ್ಗ ಕರ್ನಾಟಕ ಸಂಘದ ಹಾ.ಮಾ.ನಾ.ಪ್ರಶಸ್ತಿ ಪಡೆದ ಕೃತಿ ಜ್ಯೋತಿ ಗುರುಪ್ರಸಾದ್ ಅವರ ’ಈ ಕ್ಷಣ’. ಇದು ಅಗ್ನಿ ವಾರಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಅಂಕಣ ಬರಹಗಳ ಸಂಕಲನ. 26 ಕಂತುಗಳಲ್ಲಿ, ಹದಿನೈದು ದಿನಕ್ಕೊಮೆಯಂತೆ ಹೆಚ್ಚೂಕಡಿಮೆ ಒಂದು ವರ್ಷ ಕನ್ನಡಿಗರನ್ನು ತಮ್ಮ ವಿಶಿಷ್ಟ ಒಳನೋಟಗಳ ಮೂಲಕ ಹಿಡಿದಿಟ್ಟವರು ಜ್ಯೋತಿ.
’ಅಗ್ನಿ’ಯ ಕಾರ್ಯನಿರ್ವಾಹಕ ಸಂಪಾದಕರಾಗಿದ್ದ ಪತ್ರಕರ್ತ ಬಸವರಾಜು ವರ್ಣಿಸುವಂತೆ ಇಲ್ಲಿ ’ಸುಪ್ರಭಾತದ ಸುಬ್ಬುಲಕ್ಷ್ಮಿಯಿಂದ ಹಿಡಿದು ಅಮೃತಾ ಪ್ರೀತಂವರೆಗೆ, ಕವನ ಕಣ್ಬಿಡುವ ಹೊತ್ತಿನಿಂದ ಹತ್ಯೆಯಾಗುವ ಪ್ರೇಮದವರೆಗೆ, ಬಾಲ್ಯದ ನೆನಪುಗಳಿಂದ ಬುದ್ಧ ಬಾಹುಬಲಿಯವರೆಗೆ, ಡಾ.ರಾಜ್ ಅವರ ಮಾಂತ್ರಿಕತೆಯಿಂದ ಸುಬ್ಬಣ್ಣನವರ ಹೆಗ್ಗೋಡಿನವರೆಗೆ’ ಎಲ್ಲವೂ ಉಂಟು.
©2025 Book Brahma Private Limited.