ಅಂಬೇಡ್ಕರ್ ಕಂಡ ಭಾರತ

Author : ಲಕ್ಕೂರು ಆನಂದ

Pages 80

₹ 80.00




Year of Publication: 2018
Published by: ಪರಾಗ ಪುಸ್ತಕ
Address: #112/2, 22ನೇ ಕ್ರಾಸ್, ಕೃಷ್ಣಯ್ಯಾ ಲೇಔಟ್, ಬೆಂಗಳೂರು- 560085
Phone: 8660059424

Synopsys

ತೆಲುಗು ಭಾಷಾ ಲೇಖಕ ಜಿ.ವಿ.ರತ್ನಾಕರ್ ಅವರ ಕೃತಿಯನ್ನು ಕನ್ನಡದ ಲೇಖಕ ಹಾಗೂ ಅನುವಾದಕ ಲಕ್ಕೂರು ಆನಂದ ಅವರ ಅನುವಾದಿಸಿದ್ದು ‘ಅಂಬೇಡ್ಕರ್ ಕಂಡ ಭಾರತ’ ಎಂಬ ಶೀರ್ಷಿಕೆಯನ್ನು ನೀಡಿದ್ದಾರೆ. ಆಧುನಕತೆಯ ತಾತ್ವಿಕ ನೆಲೆಗಳು ಹಾಗೂ ವರ್ತಮಾನದ ತಲ್ಲಣಗಳು ಎಂಬ ಉಪಶೀರ್ಷಿಕೆಯನ್ನು ಈ ಕೃತಿ ಹೊಂದಿದೆ. ಪ್ರೊ.ಎಚ್.ಟಿ.ಪೋತೆ ಅವರು ಈ ಕೃತಿಗೆ ಮುನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಕೃತಿಯನ್ನು ಅಂಬೇಡ್ಕರ್ ಕಂಡ ಭಾರತ ಹಾಗೂ ಅಂಬೇಡ್ಕರ್ ನಂತರದ ಭಾರತ ಎಂಬುದಾಗಿ ಎರಡು ಭಾಗವಾಗಿ ವಿಂಗಡಿಸಿದ್ದು, ಮೊದಲ ಭಾಗದಲ್ಲಿ ಬಾಬಾ ಸಾಹೇಬ್ ಡಾ. ಅಂಬೇಡ್ಕರ್, ಡಾ. ಅಂಬೇಡ್ಕರ್ ಸೌತ್ ಭರೋ ಕಮಿಟಿ, ಅಸ್ಪೃಷ್ಯ ಕುಲಗಳು ಐಕ್ಯತೆ, ಆರ್ಥಿಕ ಶಾಸ್ತ್ರದ ಪ್ರೊಫೆಸರ್ ಡಾ. ಅಂಬೇಡ್ಕರ್, ಗುಲಾಮತನ:ಅಸ್ಪೃಶ್ಯತೆ, ಡಾ. ಅಮಬೇಡ್ಕರ್ : ಬಹಿಷ್ಕೃತ ಹಿತಕಾರಿಣಿ ಸಭೆ ಸೇರಿದಂತೆ ಅನೇಕ ಶೀರ್ಷಿಕೆಗಳಿವೆ..ಎರಡನೇ ಭಾಗದಲ್ಲಿ ಅಂಬೇಡ್ಕರ್ ಕುರಿತು ದೇವಿದಯಾಲ್, ಬಾಬಾ ಸಾಹೆಬ್ ವಸ್ತ್ರಧಾರಣೆ, ಬಾಬಾ ಸಾಹೇಬ್ ಅಲ್ಪಾಹಾರ, ಬಾಬಾ ಸಾಹೇಬರ ಸಮಾಚಾರ ಶೇಖರಣೆ, ನಿಯಮಬದ್ಧವಾದಂತಹ ಜೀವನ, ಡಾ. ಅಂಬೇಡ್ಕರ್ ಭೋಜನ, ಬಾಬಾ ಸಾಹೇಬ್ ವಿಶ್ರಾಂತಿ ಸೇರಿದಂತೆ ಅನೇಕ ಶೀರ್ಷಿಕೆಗಳ ಬರಹಗಳಿವೆ.

About the Author

ಲಕ್ಕೂರು ಆನಂದ

ಲಕ್ಕೂರು ಸಿ. ಆನಂದ ಅವರು ಮೂಲತಃ ಕೋಲಾರ ಜಿಲ್ಲೆಯ ಲಕ್ಕೂರಿನವರು. ದಲಿತ- ಬಂಡಾಯ ಕಾವ್ಯ ಮಾರ್ಗದ ಮೂರನೇ ತಲೆಮಾರಿನವರಾದ ಅವರು ಸೃಜನಶೀಲ ಬರಹಗಾರ. ಕವಿ, ವಿಮರ್ಶಕ, ಅನುವಾದಕರಾಗಿಯೂ ಗುರುತಿಸಿಕೊಂಡಿರುವ ಆನಂದ ಅವರ ಮಾತೃಭಾಷೆ ತೆಲುಗು. ಪ್ರಸ್ತುತ ಕೆಂಗೇರಿ ಶೇಷಾದ್ರಿಪುರಂ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಲಕ್ಕೂರು ಆನಂದ ಅವರು ಇದುವರೆಗೆ ಐದು ಕವನ ಸಂಕಲನ, ಐದು ಅನುವಾದಿತ ಕೃತಿಗಳು ಹಾಗೂ ಒಂದು ಸಂಶೋಧನಾ ಗ್ರಂಥವನ್ನು ಪ್ರಕಟಿಸಿದ್ದಾರೆ. ಮಾತಂಗ ಮಾದಿಗರ ಸಂಸ್ಕೃತಿಯ ಬಗ್ಗೆ ಆನಂದ ಅವರು ಆಳವಾದ ಅಧ್ಯಯನ ನಡೆಸಿದ್ದಾರೆ. ತೆಲುಗು ಭಾಷೆಯಿಂದ ಕನ್ನಡಕ್ಕೆ ಅನುವಾದಿಸಿದ ಅತ್ಯುತ್ತಮ ಆತ್ಮ ...

READ MORE

Related Books