ಅಜ್ಞಾತ ಭಾರತ

Author : ಸ್ವಾಲಿಹ್ ತೋಡಾರ್

Pages 224

₹ 2019.00




Year of Publication: 160
Published by: ಅವರ್ ಬುಕ್ಸ್
Address: 3ನೇ ಫ್ಲೋರ್, ಹಲ್ ರಹಬಾ ಪ್ಲಾಜಾ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹತ್ತಿರ, ಮಂಗಳೂರು- 575001
Phone: 9663925123

Synopsys

‘ಅಜ್ಞಾತ ಭಾರತ’ ಡಾ. ಹುಸೈನ್ ರಂಡತ್ತಾನಿ ಅವರ ಕೃತಿಯನ್ನು ಸ್ವಾಲಿಹ್ ತೋಡಾರ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಇತಿಹಾಸದ ಅಜ್ಞಾತ ಸತ್ಯಗಳನ್ನು ಜನ ಸಾಮಾನ್ಯರಿಗೆ ತಲುಪಿಸಬೇಕಾದ ಜರೂರತ್ತಿದೆ. ಸರ್ವಾಲಂಕಾರಭೂಷಿತ ಸುಳ್ಳುಗಳನ್ನು ನಿರಾಡಂಬರ ಸತ್ಯದೊಂದಿಗೆ ಎದುರಿಸುವುದು ಸುಲಭವಲ್ಲ. ಫ್ಯಾಶಿಷ್ಟರ ಸುಳ್ಳಿನ ಕೋಟೆಯನ್ನು ಬೇಧಿಸುವ ಸಾಹಸವನ್ನು ಹಲವು ಇತಿಹಾಸಕಾರರು ಮಾಡಿದ್ದಾರೆ. ಅವರಲ್ಲಿ ಡಾ. ಹುಸೈನ್ ರಂಡಸ್ತಾನಿ ಕೂಡ ಒಬ್ಬರು. ಮಲೆಯಾಳಂ ಭಾಷೆಯ ಪ್ರಸಿದ್ಧ ಲೇಖಕರಾದ ಇವರು ಇತಿಹಾಸಕ್ಕೆ ಸಂಬಂಧಿಸಿದ ಹಲವು ಅಧ್ಯಯನಾತ್ಮಕ ಕೃತಿಗಳನ್ನು ರಚಿಸಿದ್ದಾರೆ. ‘ಅರಿಯಪ್ಪೆಡಾತ ಇಂಡಿಯ’ ಅವರ ಬಹಳ ಪ್ರಸಿದ್ಧ ಕೃತಿ. ಬಹಳಷ್ಟು ಮುಖ್ಯವಾಹಿನಿಯ ಇತಿಹಾಸ ಸಂಶೋಧಕರು ಮುಟ್ಟದೆ ಬಿಟ್ಟಿರುವ ಭಾರತದ ಸೂಫಿ ಹಾಗೂ ಸುಲ್ತಾನರುಗಳ ಚರಿತ್ರೆಯೇ ಅರಿಯಪ್ಪೆಡಾತ ಇಂಡಿಯಾದ ವಸ್ತು. ಮುಸ್ಲಿಮರು ದಾಳಿಕೋರರು, ಇಸ್ಲಾಮ್ ಖಡ್ಗದಿಂದ ಹರಡಿದ ಧರ್ಮ, ಮುಸ್ಲಿಮ್ ಸುಲ್ತಾನರುಗಳು ಭಾರತಕ್ಕೆ ಬಂದಿರುವುದೇ ಇಲ್ಲಿಯ ಹಿಂದೂಗಳನ್ನು ಮತಾಂತರ ಮಾಡಲು ಮೊದಲಾದ ಹಸಿ ಸುಳ್ಳುಗಳನ್ನು ಈ ಕೃತಿ ಇತಿಹಾಸದ ದಾಖಲೆಗಳೊಂದಿಗೆ ನಿರಾಕರಿಸುತ್ತಾ ಹೋಗುತ್ತದೆ. ಜೊತೆಗೆ ಸೂಫಿಗಳ ಕುರಿತ ಯುರೋಪ್ ಪ್ರಣೀತ ಚಿಂತಕರ ಪೂರ್ವಾಗ್ರಹ ಪೀಡಿತ ಅಭಿಪ್ರಾಯಗಳನ್ನು ಪರಿಶೀಲಿಸಿ, ಅದು ಹೇಗೆ ಅಸತ್ಯ ಎಂಬುದನ್ನು ನಿರೂಪಿಸುತ್ತದೆ. ಸೂಫಿಗಳ ಬದುಕು, ಅವರ ನಡುವಿನ ವಾಗ್ವಾದ, ವಿವಾದಗಳ ಪರಿಚಯವಿದೆ. ಭಾರತೀಯ ಸೂಫಿ ಪ್ರಜ್ಞೆ ಹಾಗೂ ವಿವಿಧ ಆಧ್ಮಾತಿಕ ಸರಣಿಗಳ ನೋಟವಿದೆ. ಒಟ್ಟಾರೆ ಈ ಕೃತಿ ಬಹುಮಟ್ಟಿಗೆ ಅಜ್ಞಾತವಾಗಿಯೇ ಉಳಿದಿರುವ ಭಾರತದ ಚರಿತ್ರೆಯನ್ನು ಹೇಳುತ್ತಾ, ವರ್ತಮಾನ ಭಾರತಕ್ಕೆ ಅಂಟಿಕೊಂಡಿರುವ ಫ್ಯಾಶಿಷ್ಟ್ ರೋಗಕ್ಕೆ ಚಿಕಿತ್ಸೆಯನ್ನು ಸೂಚಿಸುತ್ತದೆ. ಇಷ್ಟು ಮಹತ್ವದ ಕೃತಿಯನ್ನು ಲೇಖಕ ಸ್ವಾಲಿಹ್ ತೋಡಾರ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.

About the Author

ಸ್ವಾಲಿಹ್ ತೋಡಾರ್

ಲೇಖಕ ಸ್ವಾಲಿಹ್ ತೋಡಾರ್ ಮೂಲತಃ ದಕ್ಷಿಣ ಕನ್ನಡದ ಮೂಡಬಿದ್ರೆ ಸಮೀಪದ ತೋಡಾರ್ ನವರು. ವೃತ್ತಿಯಿಂದ ಪತ್ರಕರ್ತರಾಗಿರುವ ಅವರು ಪ್ರವೃತ್ತಿಯಿಂದ ಬರಹಗಾರರಾಗಿದ್ದಾರೆ. ಮೂಡಬಿದ್ರೆ ಆಳ್ವಾಸ್ ಕಾಲೇಜಿನಲ್ಲಿ ಬಿಬಿಎಂ ಪದವಿ, ಮಂಗಳೂರು ವಿಶ್ವವಿದ್ಯಾಲಯದಿಂದ ದೂರ ಶಿಕ್ಷಣದ ಮೂಲಕ ಕನ್ನಡ ಸಾಹಿತ್ಯದಲ್ಲಿ ಎಂ.ಎ.ಪದವಿ ಪಡೆದಿರುವ ಅವರು ಕಳೆದ ಆರು ವರ್ಷಗಳಿಂದ ಗಲ್ಫ್ ಇಶಾರ ಮಾಸಿಕದ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಕಟಿತ ಕೃತಿಗಳು: ಅಜ್ಞಾತ ಭಾರತ, ಅಮ್ಮ ಬರೆದ ಎರಡು ಪತ್ರಗಳು, ಮುಸ್ಲಿಮ್ ಸ್ವಾತಂತ್ರ್ಯ ಹೋರಾಟಗಾರರು, ಮಾರ್ಟಿನ್ ಲಿಂಗ್ಸ್ ಮುಹಮ್ಮದ್ ...

READ MORE

Related Books