ದಾರು ಪ್ರತಿಮಾ ನ ಪೂಜಿವೇ

Author : ಜಿ.ರಾಜಶೇಖರ

Pages 124

₹ 25.00




Year of Publication: 1993
Published by: ಅಕ್ಷರ ಪ್ರಕಾಶನ
Address: ಅಕ್ಷರ ಪ್ರಕಾಶನ, ಹೆಗ್ಗೋಡು, ಸಾಗರ, ಕರ್ನಾಟಕ-577417

Synopsys

19ನೇ ಶತಮಾನದ ಪುರಿ ಜಗನ್ನಾಥ ಮತ್ತು ಛತ್ತೀಸಘಡದ ಅಸ್ಪೃಶ್ಯರ ಧಾರ್ಮಿಕ ದಂಗೆಯನ್ನು ಕುರಿತ ಅಧ್ಯಯನ ಹಾಗೂ ಪ್ರಬಂಧದ ಅನುವಾದವನ್ನು ’ ದಾರು ಪ್ರತಿಮಾ ನ ಪೂಜಿವೇ ’ ಕೃತಿಯು ಒಳಗೊಂಡಿದೆ. 

ಒರಿಸ್ಸಾದ ಇತಿಹಾಸಕಾರ ಡಾ.ಫಣೀಂದಂ ದೇವ್, ಬಂಗಾಳದ ಇತಿಹಾಸಕಾರ್ತಿ, ಡಾ.ಇಶಿತ ಬ್ಯಾನರ್ಜಿದುಬೆ, ಹಾಗೂ ದೆಹಲಿಯ ಇತಿಹಾಸದ ಅಧ್ಯಾಪಕ ಡಾ.ಸೌರಬ್ ದುಬೆ ಅವರ ಪ್ರಬಂಧ ಹಾಗೂ ಅಧ್ಯಯನ ಲೇಖನಗಳನ್ನು ಜಿ. ರಾಜಶೇಖರ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಒರಿಸ್ಸಾದ ಸಾಮಾಜಿಕ, ರಾಜಕೀಯ ಬದುಕು, 19ನೆಯ ಶತಮಾನದ ಉದ್ದಕ್ಕೂ ಪ್ರಕ್ಷುಬ್ಧವಾಗಿತ್ತು. ಈ ಕಾಲ ದೇಶ ಪರಿಸ್ಥಿತಿಯ ಜೊತೆ ಮಹಿಮಾಧರ್ಮ ತಳಕು ಹಾಕಿಕೊಂಡಿದೆ. ಈ ಧರ್ಮದ ಅಭ್ಯಾಸದ ಮಹತ್ವವಿರುವುದೇ ಇಲ್ಲಿ. ಆದರೆ 19ನೇ ಶತಮಾನದ ಒರಿಸ್ಸಾದ ಸಾಮಾಜಿಕ, ಸಾಂಸ್ಕೃತಿಕ ಸನ್ನಿವೇಶ ಮತ್ತು ಅದು ರೂಪಿಸಿದ ಬುಡಕಟ್ಟು ಸಮುದಾಯ ಮತ್ತು ಇತರರ ಸಂಬಂಧಗಳು, ಬೇರೆ ಬೇರೆ ಬುಡಕಟ್ಟುಗಳ ನಡುವಿನ ಸಂಬಂಧಗಳು ಮತ್ತು ಬುಡಕಟ್ಟಿನ ಒಳಗಡೆಯೇ ಪರಸ್ಪರ ಸಂಬಂಧಗಳು, ಜೊತೆಗೆ 19ನೆಯ ಶತಮಾನದಲ್ಲಿ ಧರ್ಮದ ಸ್ವರೂಪದಲ್ಲಿ ಆಗುತ್ತಿದ್ದ ಪರಿವರ್ತನೆಗಳು ಹಾಗೂ ಸಾಮಾಜಿಕ ಶ್ರೇಣಿಗಳಲ್ಲಿ ನಡೆದ ಪಲ್ಲಟಗಳು- ಈ ಎಲ್ಲದರ ಬೇರುಗಳು, ವಸಾಹತುಶಾಹಿಯ ಕಾಲಕ್ಕಿಂತಲೂ ಹಿಂದಕ್ಕೆ ಚಾಚಿಕೊಳ್ಳುತ್ತವೆ.ಹಾಗಾಗಿ ಮಹಿಮಾಧರ್ಮದ ಚಳುವಳಿಯ ಹಿನ್ನೆಲೆಯನ್ನು ಸರಿಯಾಗಿ ವಿಶ್ಲೇಷಿಸಲು, ವಸಾಹತುಶಾಹಿಗೂ ಮೊದಲಿನ ಬೆಳವಣಿಗೆಗಳನ್ನು ಅರ್ಥಮಾಡಿಕೊಳ್ಳಬೇಕು. 

ಒರಿಸ್ಸಾದ 19ನೇ ಶತಮಾನದ ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆ ರೂಪುಗೊಂಡ ಬಗೆಯನ್ನು ಅದರ ಐತಿಹಾಸಿಕ ಹಿನ್ನೆಲೆಯಲ್ಲಿ ಅಭ್ಯಸಿಸುವುದು ಈ ಪ್ರಬಂಧ ಅನುವಾದದ ಉದ್ದೇಶ.

About the Author

ಜಿ.ರಾಜಶೇಖರ
(03 April 1946 - 20 July 2022)

1946ರ ಏಪ್ರಿಲ್ 3ರಂದು ಉಡುಪಿ ಜಿಲ್ಲೆಯ ಗುಂಡ್ಮಿಯಲ್ಲಿ ಜನಿಸಿದ ಜಿ. ರಾಜಶೇಖರ ಅವರು ಪದವಿ ಪಡೆದದ್ದು ಉಡುಪಿಯಲ್ಲಿ. ಮೊದಲಿಗೆ ಕೆಲಕಾಲ ಶಿಕ್ಷಕರಾಗಿ ಕೆಲಸ ಮಾಡಿದ ಇವರು ಬಳಿಕ ಎಲ್‌ಐಸಿಯ ಉದ್ಯೋಗಿಯಾಗಿದ್ದರು. ಸಾಹಿತ್ಯ-ಸಮಾಜ- ರಾಜಕಾರನ ಕುರಿತಂತೆ ಹಾಗೂ ಕೋಮುವಾದವೂ ಸೇರಿದಂತೆ ಸಮಕಾಲೀನ ತುರ್ತಿನ ವಿದ್ಯಮಾನಗಳ ಬಗ್ಗೆ ಅವರು ಬಹುಸಂಖ್ಯೆಯ ಲೇಖನಗಳನ್ನು ಸತತವಾಗಿ ಪ್ರಕಟಿಸುತ್ತಲೇ ಬಂದಿದ್ದರೂ ಈ ಬರಹಗಳು ಸಂಕಲನಗೊಂಡು ಪ್ರಕಟಗೊಂಡಿದ್ದು ಕಡಿಮೆ. ಸಮಕಾಲೀನ ಕನ್ನಡದ ಪ್ರಮುಖ ವಿಮರ್ಶಕ- ಚಿಂತಕರೆಂದು ಮನ್ನಣೆ ಗಳಿಸಿರುವ ರಾಜಶೇಖರ ಅವರು ಎಡಪಂಥೀಯ ಧೋರಣೆಯನ್ನು ನಿಷ್ಠುರ ಆತ್ಮವಿಮರ್ಶೆಯೊಂದಿಗೆ ಕಸಿ ಮಾಡಿದವರು. ಕೃತಿಗಳು: ’ಕಾಗೋಡು ಸತ್ಯಾಗ್ರಹ’, ಪರಿಸರ ...

READ MORE

Related Books