
ಹಿಮಾಚಲ ಪ್ರದೇಶದ ಜನರಿಗೆ ಬೀರಸೇನನ ವೀರೋಚಿತ ಭವ್ಯ ಸಾಧನೆಗಳು ಹೆಚ್ಷೂ ಕಡಿಮೆ ಪರಿಚಿತವಿದೆ. ಆದರೆ, ದಕ್ಷಿಣದಿಂದ (ಕರ್ನಾಟಕದಿಂದ) ವಲಸೆ ಬಂದ ಮೇಲೆ ಬೀರಸೇನನ ಪೂರ್ವಜರು ಬಂಗಾಲವನ್ನು ಅಳಿದುದಾಗಲಿ, ದಕ್ಷಿಣ ಭಾರತದ ಸಾಂಸ್ಕೃತಿಕ ಅಂಶಗಳ ಕೊಡುಗೆಯಿಂದ ಬಂಗಾಲದ ಸಂಸ್ಕೃತಿ ಶ್ರೀಮಂತಗೊಂಡು ಅಖಿಲ ಭಾರತೀಯ ಸಂಕೀರ್ಣ ಸಂಸ್ಕೃತಿಯಾಗಿ ಮಾರ್ಪಟ್ಟಿತೆಂಬುದಾಗಲಿ ಅಷ್ಟೊಂದು ಪರಿಚಿತವಿಲ್ಲ. ಹೀಗೆ ಹಿಮಾಚಲವನ್ನಾಳಿದ ಕರ್ನಾಟ ಸೇನರ ಕುರಿತು ಈ ಕೃತಿಯು ಮಾಹಿತಿ ನೀಡಿದೆ. ಇಂಗ್ಲಿಷ್ನಲ್ಲಿ ಡಾ. ಡಿ.ಬಿ. ಚಕ್ರವರ್ತಿ ಅವರು ರಚಿಸಿದ ಈ ಕೃತಿಯನ್ನು ಪ್ರೊ. ಸದಾನಂದ ಕನವಳ್ಳಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.
©2025 Book Brahma Private Limited.