ಕನ್ನಡಕ್ಕಾಗಿ ಹೊಲಿದುಕೊಂಡ ದಿರಿಸುಗಳು

Author : ತಾರಿಣಿ ಶುಭದಾಯಿನಿ .ಆರ್

Pages 232

₹ 240.00




Year of Publication: 2022
Published by: ಶ್ರೀ ಸಿದ್ದಲಿಂಗೇಶ್ವರ ಪ್ರಕಾಶನ
Address: ಸರಸ್ವತಿ ಗೋದಾಮ ಕಲಬುರಗಿ-585101
Phone: 988002088

Synopsys

'ಕನ್ನಡಕ್ಕಾಗಿ ಹೊಲಿದುಕೊಂಡ ದಿರಿಸುಗಳು' ಕೃತಿ ಕನ್ನಡ ಸಾರಸ್ವತ ಲೋಕಕ್ಕೆ ಅದರಲ್ಲಿ ವಿಮರ್ಶೆ ಸಂಶೋಧನಾ ಕ್ಷೇತ್ರಕ್ಕೆ ಎಲ್ಲಕ್ಕಿಂತ ಹೆಚ್ಚಾಗಿ ಅನುವಾದ ಸಾಹಿತ್ಯದ ಮೇಲೆ ನಡೆದ ಚರ್ಚೆಗೆ ನೀಡಿದ ಮಹತ್ವದ ಕೃತಿಯಾಗಿದೆ. ಕನ್ನಡದಲ್ಲಿ ಬಂದ ಅನುವಾದ ಸಾಹಿತ್ಯದ ಮೇಲೆ ಬೆಳಕು ಚೆಲ್ಲುವ ಕೆಲಸವನ್ನು ಆರ್. ತಾರಿಣಿ ಶುಭದಾಯಿನಿಯವರು ಬಹಳ ವ್ಯವಸ್ಥಿತವಾಗಿ, ಮೌಲಿಕವಾಗಿ ಬರೆದು ಪ್ರಸ್ತುತಪಡಿಸಿದ್ದಾರೆ. ಒಟ್ಟು ಇದರಲ್ಲಿ ಹದಿಮೂರು ಮೌಲಿಕವಾದ ಲೇಖನಗಳಿವೆ.

ಬಿ.ಎಂ.ಶ್ರೀ ಯವರ 'ಇಂಗ್ಲೀಷ್ ಗೀತೆಗಳ ಪಯಣ' ಲೇಖನವಂತೂ ಕನ್ನಡ-ಇಂಗ್ಲೀಷ್ ಭಾಷೆಗಳ ಸೌಂದರೀಕರಣ ಹೆಚ್ಚಿಸುವುದಾಗಿದೆ. ಅವರು ಕನ್ನಡ-ಇಂಗ್ಲೀಷ್ ಎರಡೂ ಭಾಷೆಗಳ ಬೋಧಕರಾಗಿರುವುದರಿಂದ, ಎರಡೂ ಭಾಷೆಗಳು ಬಲ್ಲ ಸವ್ಯಸಾಚಿಯಾಗಿರುವುದರಿಂದ ಇವಳ ತೊಡುಗೆ- ಉಡುಗೆಗಳು ಅವಳಿಗುಡಿಸಿ, ಇವಳಿಗುಡಿಸಿ, ಹಾಡಬಯಸಿದ ವ್ಯಕ್ತಿಗಳವರು. ಇದೇ ರೀತಿ ಇಲ್ಲಿಯ ಎಲ್ಲ ಲೇಖನಗಳು ಪ್ರಬುದ್ಧ, ಪ್ರೌಢ ಮತ್ತು ಮೌಲಿಕವಾಗಿವೆ. ಅನುವಾದ ಸಾಹಿತ್ಯದ ಪರಂಪರೆಯನ್ನು ಹಾಗೂ ದಾರಿಯನ್ನು ಗುರುತಿಸಿದ ಪ್ರಬುದ್ಧ ಲೇಖಕರಾಗಿದ್ದಾರೆ. ಅಪರೂಪದ ಕೃತಿಗಳಲ್ಲಿ ಇದೂ ಒಂದಾಗಿದೆ.

About the Author

ತಾರಿಣಿ ಶುಭದಾಯಿನಿ .ಆರ್
(09 January 1971)

ತಾರಿಣಿ ಶುಭದಾಯಿನಿ ಆರ್. ಅವರು 1971 ಜನವರಿ 09ರಂದು ಮೈಸೂರಿನಲ್ಲಿ ಹುಟ್ಟಿದರು.  ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯದಲ್ಲಿ ಅಧ್ಯಯನ ಮಾಡಿದವರು. ’ತೋಡಿರಾಗ, ಚಿತ್ತಗ್ಲಾನಿಯ ಮಾತು, ಒಂದು ತುಂಡು ಬೆಲ್ಲ’ ಎಂಬ ಕವನ ಸಂಕಲನ ಹೊರತಂದಿದ್ಧಾರೆ.  ಉಪನ್ಯಾಸಕಿಯಾಗಿದ್ದು, ಕನ್ನಡ ಸಾಹಿತ್ಯದ ಬಗ್ಗೆ ಹಲವಾರು ಉಪನ್ಯಾಸ ನೀಡಿದ್ದಾರೆ. ‘ಹೆಡೆಯಂತಾಡುವ ಸೊಡರು’ ಅವರ ವಿಮರ್ಶಾ ಕೃತಿ. ಸ್ತ್ರೀಶಿಕ್ಷಣ ಚರಿತ್ರೆಯ ಹೆಜ್ಜೆಗಳು ಅವರ ಮಾನವಿಕ ಕೃತಿಯಾಗಿದೆ. ಕರ್ನಾಟಕ ಲೇಖಕಿಯರ ಸಂಘದಿಂದ ಗುಡಿಬಂಡೆ ಪೂರ್ಣಿಮಾ ದತ್ತಿಪ್ರಶಸ್ತಿ, ಕಥಾರಂಗಂ ಪ್ರಶಸ್ತಿ, ಪ್ರೊ. ಡಿ.ಸಿ. ಅನಂತಸ್ವಾಮಿ ಸಂಸ್ಕರಣ ದತ್ತಿನಿಧಿ ಪ್ರಶಸ್ತಿ ಬೇಂದ್ರೆ ಗ್ರಂಥ ಬಹುಮಾನ ಮುಂತಾದ ಪ್ರಶಸ್ತಿಗಳು ಲಭಿಸಿವೆ. ಸ್ತ್ರೀವಾದಕ್ಕೆ ಹೊಸ ...

READ MORE

Related Books