ಕಬೀರ ವಚನಾವಲಿ

Author : ಶೇಷ ನವರತ್ನ

Pages 147

₹ 30.00




Published by: ಸಮಾಜ ಪುಸ್ತಕಾಲಯ
Address: ಸಮಾಜ ಪುಸ್ತಕಾಲಯ, ಶಿವಾಜಿಬೀದಿ, ಧಾರವಾದ - 1, 580001

Synopsys

ಮೂಲ ಹಿಂದೀ ಕೀರ್ತನೆಗಳ ಕನ್ನಡ ಅನುವಾದವಾದ ’ಕಬೀರ ವಚನಾವಲಿ’ ಕೃತಿಯು ಹಿಂದೀ ಸಂತ ಸಾಹಿತ್ಯ ಮಾಲಿಕೆಯಲ್ಲಿ ಪ್ರಕಟವಾದ ಕೃತಿಯಾಗಿದೆ. 

ಹಿಂದೀ ಸಾಹಿತ್ಯ ಚರಿತ್ರೆಯ ವಿಶಾಲವಾದ ಪರಂಪರೆಯಲ್ಲಿ ಸಂತ ಕಬೀರದಾಸರ ಸ್ಥಾನವು ಅತ್ಯಂತ ಗೌರವಯುತವಾದದ್ದಾಗಿದೆ. ಸಂತನಾಗಿ ಹಾಗೂ ಕವಿಯಾಗಿ ಏಕಕಾಲಕ್ಕೆ ತನ್ನ ಸಮಕಾಲೀನ ಹಾಗೂ ನಂತರದ ಕಾಲದ ಸಮಾಜ, ಸಂಸ್ಕೃತಿ ಹಾಗೂ ಸಾಹಿತ್ಯಗಳ ಮೇಲೆ ಇಷ್ಟು ಅಚ್ಚಳಿಯದ ಪ್ರಭಾವವನ್ನು ಬೀರಿದ ಕೆಲವೇ ಯುಗಪುರುಷರಲ್ಲಿ ಕಬೀರರು ಒಬ್ಬರು. ಈ ಹಂತದಲ್ಲಿ ಸಂತ ಶ್ರೇಷ್ಠ ತುಳಸೀದಾಸರನ್ನು ಮಾತ್ರ ಕಬೀರರೊಂದಿಗೆ ಹೋಲಿಸಲು ಸಾಧ್ಯ. ಆದರೆ ತುಳಸೀದಾಸರಿಗೆ ಸಾಧ್ಯವಾಗದ ನಿಷ್ಠುರತೆ, ನಿರ್ಲಿಪ್ತತೆ ಹಾಗೂ ನಿರ್ಮಮತೆಗಳು ಕಬೀರರಿಗೆ ಹೇಗೆ ಸಾಧ್ಯವಾದವು ಎಂಬುದು ಈ ಕೃತಿ ತಿಳಿಸುತ್ತದೆ. 

About the Author

ಶೇಷ ನವರತ್ನ
(05 May 1950 - 15 December 2013)

ಶೇಷ ನವರತ್ನ ಅವರು 1950 ರ ಮೇ 5ರಂದು ಧಾರವಾಡದಲ್ಲಿ ಜನಿಸಿದರು. ಎಂ.ಎ. (ಇಂಗ್ಲಿಷ್) ಪದವೀಧರರು. ಸಾಹಿತ್ಯಕ ಮತ್ತು ತತ್ವಶಾಸ್ತ್ರೀಯ ಕೃತಿಗಳನ್ನು ರಚಿಸಿದ್ದಾರೆ. ಚಿಕ್ಕಜಾಜೂರು ಪಿಯು ಕಾಲೇಜು ಪ್ರಾಂಶುಪಾಲರಾಗಿ ನಿವೃತ್ತರು.  ಧರ್ಮಗಳು, ಕರ್ಮ ಸಿದ್ದಾಂತ ಮತ್ತು ಪುನರ್ಜನ್ಮ ಮನಸೋಲ್ಲಾಸ, ನಿರ್ಣಯ ಸಿಂಧು, ಮಹಾಭಾರತದಲ್ಲಿ ಧರ್ಮ, ಬೇಂದ್ರೆ ಸಾಹಿತ್ಯದಲ್ಲಿ ಸ್ತ್ರೀ (ಸಾಹಿತ್ಯಕ-ತತ್ವಶಾಸ್ತ್ರೀಯ). ಹರೆಯದ ಹುಚ್ಚು, ಊರ್ಮಿಳಾ, ಮಲನಾಡ ಗಿಣಿ, ಮೀರಾಬಾಯಿ (ಕವನ ಸಂಕಲನ).  ಕಬೀರ್, ಸೂರದಾಸ್ ಮುಂತಾದವರ ಕವಿತೆಗಳ ಅನುವಾದ. ಅವರಿಗೆ ವೇದಾಂತರತ್ನ, ಉಜ್ಜನಿ ಸದ್ಧರ್ಮ ಪೀಠ, ಆರ್ಯ ಸಮಾಜ ಮುಂತಾದ ಗೌರವಗಳು ಸಂದಿವೆ. 2013ರ ಡಿಸೆಂಬರ್ 15ರಂದು ನಿಧನರಾದರು. ...

READ MORE

Related Books