ಜ್ಞಾನ ವಿಜ್ಞಾನ ತತ್ವಜ್ಞಾನ

Author : ಕೆ.ವಿ. ತಿರುಮಲೇಶ್‌

Pages 291

₹ 300.00




Year of Publication: 2016
Published by: ಅಭಿನವ ಪ್ರಕಾಶನ
Address: 17/18-2, ಮೊದಲನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-560040
Phone: 9448804905

Synopsys

ಜ್ಞಾನ ವಿಜ್ಞಾನ ತತ್ವಜ್ಞಾನ ಕುರಿತಂತೆ ಇಂಗ್ಲಿಷ್ ಭಾಷೆಯಲ್ಲಿ ಹರಿದ ಅರಿವಿನ ಧಾರೆಯನ್ನು ಕನ್ನಡಕ್ಕೆ ತಂದಿದ್ದಾರೆ ಕೆ.ವಿ ತಿರುಮಲೇಶ್. ಹೀಗೆ ಬೇರೆ ಬೇರೆ ಧಾರೆಗಳು ಹರಿದಾಗಲೇ ಕನ್ನಡ ದಷ್ಟಪುಷ್ಟವಾಗುವುದು. ಸಾಹಿತಿಯೂ, ವಿದ್ವಾಂಸರೂ ಆದ ತಿರುಮಲೇಶರು ಕೃತಿಯ ಬಗ್ಗೆ ಹೇಳುವುದು ಹೀಗೆ:
'ಜ್ಞಾನ ವಿಜ್ಞಾನ ತತ್ವಜ್ಞಾನ-ಬಹಳ ಗಹನವಾದ ವಿಷಯಗಳು. ಇವುಗಳಲ್ಲಿ ತೊಡಗಿದ ಮೇಧಾವಿಗಳಿದ್ದಾರೆ. ಅವರು ಮಾನವ ಜೀವನವನ್ನು ಅರ್ಥಪೂರ್ಣವಾಗಿ ಮಾಡಿದ್ದಾರೆ. ನಾನಾದರೆ ಜ್ಞಾನಿಯೂ ಅಲ್ಲ. ವಿಜ್ಞಾನಿಯೂ ಅಲ್ಲ, ತತ್ವಜ್ಞಾನಿಯೂ ಅಲ್ಲ, ನಾನೊಬ್ಬ ಸಾಮಾನ್ಯ ಮನುಷ್ಯ, ಈ ವಿಷಯಗಳ ಅರ್ಥವನ್ನು ಸರಿಯಾಗಿ ತಿಳಿದಿದ್ದೇನೆ ಎನ್ನಲಾರೆ. ಆದರೂ ತಿಳಿಯುವ ಸಹಜ ಕುತೂಹಲ ಯಾವತ್ತೂ ಇರಿಸಿಕೊಂಡಿದ್ದೇನೆ. ಈ ಕ್ಷೇತ್ರಗಳಿಗೆ ಸಂಬಂಧಿಸಿದ ಕೆಲವು ಲೇಖನಗಳನ್ನು ಮತ್ತು ಪುಸ್ತಕಗಳನ್ನು ನನ್ನ ಪರಿಮಿತಿಯೊಳಗೆ ಓದಿ ಋಷಿಪಟ್ಟಿದ್ದೇನೆ. ಇಂಗ್ಲಿಷ್ ಭಾಷೆಯಲ್ಲಿನ ಇಂಥ ಒಳ್ಳೆಯ ಬರಹಗಳನ್ನು ಓದಿದಾಗೆಲ್ಲಾ ಇವುಗಳನ್ನು ಕನ್ನಡಕ್ಕೆ ತಂದರೆ ಹೇಗೆ ಎನ್ನುವ ಆಸೆ ನನ್ನಲ್ಲಿ ಮೂಡುತ್ತದೆ' ಎಂದಿದ್ದಾರೆ. 

About the Author

ಕೆ.ವಿ. ತಿರುಮಲೇಶ್‌
(12 September 1940 - 30 January 2023)

ಕಾವ್ಯ, ಕತೆ, ಕಾದಂಬರಿ ಹೀಗೆ ಹಲವು ಸಾಹಿತ್ಯ ಪ್ರಕಾರಗಳಲ್ಲಿ ಕೆಲಸ ಮಾಡಿರುವ ಕೆ.ವಿ. ತಿರುಮಲೇಶ್ ಸಾಹಿತ್ಯ ವಿಮರ್ಶೆ ಮತ್ತು ಭಾಷಾ ವಿಜ್ಞಾನ ಕ್ಷೇತ್ರಗಳಲ್ಲಿಯೂ ಕೆಲಸ ಮಾಡಿದವರು. ತಮ್ಮ ಬಾಲ್ಯವನ್ನು (ಜ. 1940) ಕಾಸರಗೋಡಿನ ಕಾರಡ್ಕದಲ್ಲಿ ಮಲೆಯಾಳಿಗಳ ನಡುವೆ ಕಳೆದ ತಿರುಮಲೇಶ್ ಅವರು ತಮ್ಮ ಜೀವನದ ಬಹುತೇಕ ಅವಧಿಯನ್ನು ಕರ್ನಾಟಕದಿಂದ ಹೊರಗಡೆಯೇ ಇದ್ದು ಕಳೆದಿದ್ದಾರೆ. ಹೈದರಾಬಾದ್ ನ ಸೆಂಟ್ರಲ್ ಇನ್ಸ್ ಟಿಟ್ಯೂಟ್ ಆಫ್ ಇಂಗ್ಲಿಷ್ ಆ್ಯಂಡ್ ಫಾರಿನ್ ಲ್ಯಾಂಗ್ವೇಜಸ್’ ನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ‘ಮುಖವಾಡಗಳು’, ‘ವಠಾರ’, ‘ಮಹಾಪ್ರಸ್ಥಾನ’, ಮುಖಾಮುಖಿ’, ‘ಅವಧ’, ‘ಪಾಪಿಯೂ’ ಕವನ ಸಂಕಲನಗಳು. ತಿರುಮಲೇಶ್ ...

READ MORE

Related Books