ಅನುಪಮ್ ಖೇರ್ ಅವರ ಇಂದಿನ ದಿನವೇ ಶುಭ ದಿನವು

Author : ವಿಶ್ವೇಶ್ವರ ಭಟ್

Pages 200

₹ 250.00




Year of Publication: 2023
Published by: ವಿಶ್ವವಾಣಿ ಪುಸ್ತಕ
Address: ನಂ-1867, ನಿಸರ್ಗ ಸೆರೆನಿಟಿ ಕಾಂಪ್ಲೆಕ್ಸ್‌ ರಸ್ತೆ, ಬಿಇಎಂಎಲ್‌ ಬಡಾವಣ, 5ನೇ ಹಂತ, ರಾಜರಾಜೇಶ್ವರಿನಗರ ಬೆಂಗಳೂರು-560098
Phone: 8431007267

Synopsys

ಅನುಪಮ್ ಖೇರ್ ಅವರ ಇಂದಿನ ದಿನವೇ ಶುಭ ದಿನವು ವಿಶ್ವೇಶ್ವರ ಭಟ್ ಅವರ ಅನುವಾದ ಕೃತಿಯಾಗಿದೆ .ಇಡೀ ಜಗತ್ತನ್ನು ಏಕಕಾಲದಲ್ಲಿ ಕಲ್ಲವಿಲಗೊಳಿಸಿ, ನಂತರ ಒಂದುಗೂಡಿಸುವುದು, ವಿಶ್ವವಾಸಿಗಳೆಲ್ಲಾ ಒಂದೇ ರೀತಿ ಯೋಚಿಸುವಂತೆ ಪ್ರೇರೇಪಿಸುವುದು ಸಾಧ್ಯವಿಲ್ಲ. ಯಾರಿಂದಲೂ ಸಾಧ್ಯವಿಲ್ಲದ್ದು ಕರೋನಾದಿಂದ ಸಾಧ್ಯವಾಯಿತು, ವಿಶ್ವದ ಆರ್ಥಿಕ ವ್ಯವಸ್ಥೆಯೇ ಗಾಳುಮೇಳಾಗಿ ಹೋಯಿತು. ಎಲ್ಲರ ಬದುಕಿನಲ್ಲೂ ಆತಂಕ, ದುಗುಡ, ಅನಿಶ್ಚಿತತೆ, ಕತ್ತಲು ಆವರಿಸಿತು. ನಮ್ಮ ಮುಂದೆ ಇದ್ದವರೆಲ್ಲ ಮಿಂಚುಹುಳುಗಳ ಹಾಗೆ ಸತ್ತು ಹೋದರು. ಇಡೀ ವಿಶ್ವದ ಚಲನೆ ಸ್ತಬ್ಧವಾಯಿತು. ಆತ್ಮೀಯರ ಅಂತ್ಯಸಂಸ್ಕಾರಕ್ಕೂ ಹೋಗಲು ಆಗಲಿಲ್ಲ. ತಂದೆ ಸತ್ತರೂ ಮಗನಿಗೆ ಹೋಗಲಾಗಲಿಲ್ಲ. ಚಿತೆಗೇರಿದ ಗಂಡನನ್ನು ಹೆಂಡತಿ ನೋಡಲಿಲ್ಲ. ಮಾನವ ಸಂಬಂಧದ ಎಲ್ಲಾ ಕೋಶ-ತಂತುಗಳನ್ನು ಕರೋನಾ ಚಿವುಟಿ ಹಾಕಿಬಿಟ್ಟಿತು. ಎಲ್ಲರೂ ತಮ್ಮ ತಮ್ಮ ಜೀವವನ್ನು ಕಂಕುಳಲ್ಲಿ ಬಚ್ಚಿಟ್ಟುಕೊಂಡವರಂತೆ ಭಯದಲ್ಲಿ ಜೀವಿಸಿದರು. ಬದುಕಿನ ಬಗೆಗಿದ್ದ ಕಲ್ಪನೆಯನ್ನೇ ಕರೋನಾ ಗುಡಿಸಿಹಾಕಿತು. ನಮ್ಮ ಆಚರಣೆ, ಸಂಪ್ರದಾಯ, ಜನಜೀವನ, ಯೋಚನೆ, ಜೀವನಕ್ರಮ, ಪದ್ಧತಿಗಳನ್ನೆಲ್ಲಾ ಕರೋನಾ ಮುದ್ದೆಟ್ಟಿ ಬಿಸಾಕಿತು. ಕೆಲದಿನ ಜಗತ್ತಿನ ಯಾವ ರಾಷ್ಟ್ರದ ಮೇಲೂ ವಿಮಾನ ಹಾರಲಿಲ್ಲ. ವಾಹನ ಸಂಚರಿಸಲಿಲ್ಲ. ಹಡಗು ದಡ ಬಿಟ್ಟು ಕದಲಲಿಲ್ಲ, ಕರೋನಾ ಟ್ರಾಫಿಕ್ ಸಿಗ್ನಲ್ ಮುಂದೆ, ಜಗತ್ತೇ ಸ್ಟಾಪ್! ಆ ಸಮಯದಲ್ಲಿ ಮೂಡಿದ ಆಲೋಚನೆಗಳೇನು? ಕರೋನಾ ಕಲಿಸಿದ ಪಾಠಗಳೇನು? ಕದಲಿದ ನಂಬಿಕೆಗಳೇನು? ಅವನ್ನೆಲ್ಲಾ ನಿಭಾಯಿಸಿ ಬದುಕನ್ನು ಮರಳಿ ಹಳಿಗೆ ಎತ್ತಾಕಿಕೊಂಡು ಬಂದಿದ್ದು ಹೇಗೆ? ಸಾವಿನ ಕದ ತಟ್ಟಿ ಬಂದ ಆ ಅನುಭವ ಹೇಗಿತ್ತು? ಕರೋನಾ ನಮ್ಮೊಳಗೇ ತಂದ ಪರಿವರ್ತನೆ ಏನು? ಬದುಕು ಮೂರಾಬಟ್ಟೆಯಾದಾಗ, ಆತ್ಮವಿಶ್ವಾಸ, ಪ್ರೀತಿ, ಆನಂದ, ಸಮಾಧಾನ, ನಂಬಿಕೆಗಳಿಂದ ಪುನಃ ನೆಲಸಮವಾದ ಜೀವನವನ್ನು ಕಟ್ಟಿಕೊಳ್ಳುವುದು ಹೇಗೆ? ಖ್ಯಾತ ಸಿನಿಮಾ ನಟ ಅನುಪಮ್ ಖೇರ್ ಈ ಕೃತಿಯಲ್ಲಿ ವೈಯಕ್ತಿಕ ಅನುಭವದ ನೆಲೆಯಲ್ಲಿ ಅವೆಲ್ಲವನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾರೆ. ಬದುಕಿಗೆ ಪ್ರೀತಿಯುಣಿಸುವ, ವಿಶ್ವಾಸದ ಕೈತುತ್ತು ತಿನಿಸುವ ಭರವಸೆಯ ಸಾಲುಗಳು ಇಲ್ಲಿವೆ.

About the Author

ವಿಶ್ವೇಶ್ವರ ಭಟ್

ವಿಶ್ವೇಶ್ವರ ಭಟ್ ಅವರು ಉತ್ತರಕನ್ನಡ ಜಿಲ್ಲೆಯ  ಕುಮಟಾದ ಮೂರೂರಿನವರು. ಓದಿದ್ದು ಎಂ.ಎಸ್ಸಿ. ಹಾಗೂ ಎಂ.ಎ. ನಾಲ್ಕು ಚಿನ್ನದ ಪದಕ ವಿಜೇತರು, ಇಂಗ್ಲೆಂಡಿನಲ್ಲಿ ಪತ್ರಿಕೋದ್ಯಮದಲ್ಲಿ ಉನ್ನತ ವ್ಯಾಸಂಗ, ಸಂಯುಕ್ತ ಕರ್ನಾಟಕ, ಕನ್ನಡಪ್ರಭದಲ್ಲಿ ಉಪಸಂಪಾದಕರಾಗಿ ವೃತ್ತಿ ಜೀವನ ಆರಂಭ, ವಿಜಯ ಕರ್ನಾಟಕ, ಕನ್ನಡ ಪ್ರಭ ಹಾಗೂ ಸುವರ್ಣ ನ್ಯೂಸ್ ಚಾನಲ್‌ನ ಪ್ರಧಾನ ಸಂಪಾದಕ, ಏಷಿಯನ್ ಕಾಲೇಜ್ ಆಫ್ ಜರ್ನಲಿಸಮ್‌ನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್, ಕೇಂದ್ರ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಖಾತೆ ಸಚಿವರಿಗೆ ವಿಶೇಷ ಕರ್ತವ್ಯ ಅಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಸದ್ಯ,  “ವಿಶ್ವವಾಣಿ' ದಿನಪತ್ರಿಕೆಯ ಪ್ರಧಾನ ಸಂಪಾದಕರು. 'ನೂರೆಂಟು ವಿಶ್ವ, 'ಇದೇ ಅಂತರಂಗ ಸುದ್ದಿ' ...

READ MORE

Related Books