ರಘುಕುಲ ಚರಿತಂ

Author : ಜಿ. ಅಶ್ವತ್ಥನಾರಾಯಣ

₹ 4.00




Year of Publication: 1913
Published by: ಕುವೆಂಪು ಭಾಷಾಭಾರತಿ ಪ್ರಾಧಿಕಾರ

Synopsys

ಸಂಸ್ಕೃತದಿಂದ ಕನ್ನಡಕ್ಕೆ ಅನುವಾದ ಮಾಡಿದ ಕಾವ್ಯ ಕೃತಿ ಕಾಳಿದಾಸನ ʼರಘುವಂಶ ಚರಿತಂʼ. ಅನುವಾದವನ್ನು ಲೇಖಕ ದೊಡ್ಡಬೆಲೆ ನಾರಾಯಣ ಶಾಸ್ತ್ರಿ ಅವರು ಮಾಡಿದ್ದಾರೆ. ಪ್ರೊ. ಜಿ. ಅಶ್ವತ್ಥಾರಾಯಣ ಅವರು ಸಂಪಾದಕರು. ಈ ಕೃತಿಯು ಕಾಳಿದಾಸನ ರಘುವಂಶ ಕಾವ್ಯದ ಗದ್ಯಾನುವಾದವಾಗಿದೆ. ಇಕ್ಷ್ವಾಕು ವಂಶದ ದಿಲೀಪ ರಾಜ ಮತ್ತು ಸುದಕ್ಷಿಣಾಗೆ ಜನಿಸಿದ ಮಗು ರಘು . ರಘು ಪದದ ಅರ್ಥ ಎಂದರೆ ಬಹಳ ವೇಗವಾಗಿ ಸಾಗುವವ ಎಂದು . ರಘುವು ವಹಳ ವೇಗವಾಗಿ ಯುದ್ಧರಥವನ್ನು ನಡೆಸುವ ಛಾತಿ ಉಳ್ಳವನು. ರಘುವಿನ ಹೆಗ್ಗಳಿಕೆಯಿಂದ ಇಕ್ಷ್ವಾಕು ವಂಶವನ್ನು ರಘುವಂಶವೆಂದೇ ಕರೆಯಲಾಗುತ್ತದೆ. ವಿಷ್ಣು ಪುರಾಣ, ವಾಯು ಪುರಾಣ, ಲಿಂಗ ಪುರಾಣ ಇವು ಎಲ್ಲದರಲ್ಲೂ ರಘುವಿನ ಬಗ್ಗೆ ಉಲ್ಲೇಖ ಇವೆ.

About the Author

ಜಿ. ಅಶ್ವತ್ಥನಾರಾಯಣ
(12 May 1938)

ಸಂಶೋಧಕರು, ಸಾಹಿತಿ, ಭಾಷಾ ತಜ್ಞ, ವಿಶ್ರಾಂತ ಕನ್ನಡ ಪ್ರಾಧ್ಯಾಪಕರಾದ ಜಿ. ಅಶ್ವತ್ಥನಾರಾಯಣ ಅವರು 1938 ಮೇ 12 ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಎಚ್.ಗುಂಡಪ್ಪ, ತಾಯಿ ಜಾನಕಮ್ಮ. ಸಮಾಜಶಾಸ್ತ್ರ ಮತ್ತು ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ರಾಜ್ಯದ ನಾನಾ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಪುರುಷೋತ್ತಮ ದಾಸರ ಸಮಗ್ರ ಕೃತಿಗಳು, ವಿಜಯ ದಾಸರ ಸಮಗ್ರ ಕೀರ್ತನೆಗಳು, ರತ್ನಾಕರವರ್ಣಿಯ ಶತಕತ್ರಯ, ಜ್ಞಾನವಂತರಾಗಿ ಜಾಗರೂಕರಾಗಿರಿ, ಉತ್ತಮ ಕ್ಷಮಾಧರ್ಮ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಇವರಿಗೆ ಕನ್ನಡ ಸಾಹಿತ್ಯ ಅಕಾಡಮಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಲಭಿಸಿವೆ.  ...

READ MORE

Related Books