ದಿವ್ಯವಾಣಿ

Author : ದೇವುಡು ನರಸಿಂಹಶಾಸ್ತ್ರಿಗಳು

Pages 140

₹ 100.00




Year of Publication: 2015
Published by: ಸಾಹಿತ್ಯ ನಂದನ
Address: ರಾಜಾಜಿನಗರ, ಬೆಂಗಳೂರು -10

Synopsys

ದೇವುಡು ನರಸಿಂಹಶಾಸ್ತ್ರಿ ಅನುವಾದಿಸಿರುವ ಕೃತಿ ದಿವ್ಯವಾಣಿ.ಮಿತ್ರ ವಿವೇಕಾನಂದ, ಗುರು ವಿವೇಕಾನಂದ, ಶಿಷ್ಯ ವತ್ಸಲ ವಿವೇಕಾನಂದ, ಆಚಾರ್ಯ ವಿವೇಕಾನಂದರ ಪರಿಚಯವಾದುದು ಆತನ ಪಾದಮೂಲವನ್ನು ಆಶ್ರಯಿಸುವ ಭಾಗವನ್ನು ಪಡೆದಿದ್ದವರಿಗೆ ಮಾತ್ರ! ಆದರೆ ಏಕಾಂತದ ಅಂತರಂಗ ಭಕ್ತರಿಗೆಂದು ಆತ ನೆರೆದ ಜ್ಞಾನಾಮೃತವನ್ನು ನಮ್ಮವರೆಗೂ ತಂದಿರುವುದು ಈ ಗ್ರಂಥವೊಂದೇ.

About the Author

ದೇವುಡು ನರಸಿಂಹಶಾಸ್ತ್ರಿಗಳು
(29 December 1886 - 27 October 1962)

’ಮಹಾಕಾದಂಬರಿಕಾರ’ ಎಂದು ಹೆಸರುವಾಸಿಯಾಗಿದ್ದ ದೇವುಡು ನರಸಿಂಹಶಾಸ್ತ್ರಿಗಳು ಶಿಕ್ಷಕರಾಗಿ, ಸಂಪಾದಕರಾಗಿ, ನಟರಾಗಿ, ವಿಮರ್ಶಕರಾಗಿ ತಮ್ಮ ಪ್ರತಿಭೆ- ಪಾಂಡಿತ್ಯ ಮೆರೆದಿದ್ದರು. ನರಸಿಂಹ ಶಾಸ್ತ್ರಿಗಳು ಜನಿಸಿದ್ದು ಮೈಸೂರಿನ ರಾಜಪುರೋಹಿತರ ಮನೆತನದಲ್ಲಿ.  1896ರ ಡಿಸೆಂಬರ್‌ 26ರಂದು ಜನಿಸಿದ ಅವರು ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡರು. ತಾಯಿಯ ಆಸರೆಯಲ್ಲಿ ಬೆಳೆದ ನರಸಿಂಹಶಾಸ್ತ್ರಿಗಳು ತೀಕ್ಷ್ಣ ಬುದ್ಧಿಯುಳ್ಳವರಾಗಿದ್ದರು. ಹನ್ನೆರಡನೆಯ ವಯಸ್ಸಿನಲ್ಲಿಯೇ ರಾಮಾಯಣ, ಮಹಾಭಾರತದಂತಹ ಕಾವ್ಯ ಮತ್ತುಭಾಗವತದಂತಹ ಪುರಾಣಗಳನ್ನು ಓದಿ ಅರಿತಿದ್ದರು. ಹದಿನೈದನೆಯ ವಯಸ್ಸಿನಲ್ಲಿಯೇ ಛಂದೋಬದ್ಧವಾಗಿ ಕಾವ್ಯ ರಚಿಸುವ ಹವ್ಯಾಸ ಬೆಳೆಸಿಕೊಂಡರು. ಸಾಂಪ್ರದಾಯಿಕ ವೈದಿಕ ವಿದ್ಯೆಯ ಜೊತೆಯಲ್ಲಿಯೇ ಬಿ.ಎ., ಎಂ.ಎ. ಪದವಿಯನ್ನು ಸಂಸ್ಕೃತ ಹಾಗೂ ಭಾರತೀಯ ತತ್ವಶಾಸ್ತ್ರದಲ್ಲಿ ಪಡೆದಿದ್ದರು. ಸರ್ವಪಲ್ಲಿ ...

READ MORE

Related Books