ಅಂಚೆಗೆ ಹೋಗದ ಪತ್ರ

Author : ಶಿವಾನಂದ ಬೇಕಲ್

Pages 182

₹ 203.00




Year of Publication: 2013
Published by: ಮಂಜುಳ್‌ ಪಬ್ಲಿಷಿಂಗ್‌ ಹೌಸ್‌

Synopsys

ಅಂಚೆಗೆ ಹೋಗದ ಪತ್ರ ಎಂಬ ಕೃತಿಯು ಮಹಾತ್ರಯ ರಾ ಅವರ ಇಂಗ್ಲೀಷ್‌ ಮೂಲ ಕೃತಿಯಾಗಿದೆ. ಈ ಕೃತಿಯನ್ನು ಶಿವನಂದ ಬೇಕಲ್‌ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಮಾನವ ಪ್ರಜ್ಞೆಯ ವಿಕಸನದಲ್ಲಿ ನಮ್ಮ ಅನೇಕ ಪೂರ್ವಜರು ತಮ್ಮ ಪಾತ್ರವನ್ನು ನಿರ್ವಹಿಸಿದ್ದಾರೆ ಮತ್ತು ನಾವು ಅದರ ಪ್ರತಿಫಲವನ್ನು ಅನುಭವಿಸುತ್ತಿದ್ದೇವೆ. ನಾವು ಯಾವ ಬಗೆಯ ಪಾತ್ರವನ್ನು ನಿರ್ವಹಿಸಲು ಉದ್ಯುಕ್ತರಾಗಿದ್ದೇವೆ?ಈ ದಿಶೆಯಲ್ಲಿ ಇದೊಂದು ನನ್ನ ನಮ್ರತೆಯಿಂದ ಕೂಡಿದ ಪ್ರಯತ್ನ ನನ್ನ ಪ್ರೀತಿಯ ಓದುಗರಿಗೆ ಒಂದು ವ್ಯತ್ಯಸ್ತ ಅನುಭವ ನೀಡುವ ಪ್ರಯತ್ನ. ಎಂದು ಪುಸ್ತಕದ ಬಗ್ಗೆ ಮಹಾತ್ರಯ ರಾ ತಿಳಿಸಿದ್ದಾರೆ.

About the Author

ಶಿವಾನಂದ ಬೇಕಲ್
(21 February 1951)

ಡಾ. ಶಿವಾನಂದ ಬೇಕಲ್ ಅವರು ಹುಟ್ಟಿದ್ದು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಐತಿಹಾಸಿಕ ಸ್ಥಳ ಬೇಕಲ್ ನಲ್ಲಿ. ತಂದೆ- ಬೇಕಲ್  ಸಾಂತನಾಯಕರು, ತಾಯಿ- ಲಲಿತಾಬಾಯಿ. ಪ್ರಾಥಮಿಕದಿಂದ ಹೈಸ್ಕೂಲುವರೆಗೆ ವಿದ್ಯಾಭ್ಯಾಸ ನಡೆದದ್ದು ಬೇಕಲ್‌ನಲ್ಲಿ . ಕಾಸರಗೋಡಿನಲ್ಲಿ ಬಿ.ಎಸ್ಸಿ, ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎಡ್, ಕರ್ನಾಟಕ ವಿಶ್ವ ವಿದ್ಯಾಲಯದಿಂದ ಎಂ.ಎ. ಮತ್ತು ಗುಲಬರ್ಗಾ ವಿಶ್ವ ವಿದ್ಯಾಲಯದಿಂದ ಡಾಕ್ಟರೇಟ್ ಪಡೆದರು. 16ನೇ ವಯಸ್ಸಿನಲ್ಲಿ ಬರೆದ ‘ಕೇದಗೆಯ ಹಾವು’ ಮೊದಲ ಕಥೆಗೆ 1968ರಲ್ಲಿ ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಯಲ್ಲಿ ಬಹುಮಾನ ಗಳಿಸಿತು. ಇವರ ಲೇಖನ ಕೃಷಿ ಮಂಗಳೂರಿನ ನವಭಾರತ, ಕಿನ್ನಗೋಳಿಯ ಯುಗಪುರುಷ ನಂತರ  ಸುಧಾ, ತರಂಗ, ಪ್ರಜಾವಾಣಿ, ...

READ MORE

Related Books