ಯವನವಿಜೇತ ಚಂದ್ರಗುಪ್ತ

Author : ಶಿವರಾಮು ಕಾಡನಕುಪ್ಪೆ

Pages 210

₹ 35.00




Year of Publication: 1969
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಕೇಶವ ಶಿಲ್ಪ, ಕೆಂಪೇಗೌಡ ನಗರ, ಬೆಂಗಳೂರು-560019

Synopsys

ಯವನವಿಜೇತ ಚಂದ್ರಗುಪ್ತ ಜೀವನಚರಿತ್ರೆ ಪುಸ್ತಕವನ್ನು ಲೇಖಕ ಪಂಡಿತ್‌ ದೀನದಯಾಳ ಉಪಧ್ಯಾಯ ಅವರು ರಚಿಸಿದ್ದು, ಇದರ ಕನ್ನಡನುವಾದವನ್ನು ಲೇಖಕ ಶಿವರಾಮು ಅವರು ಮಾಡಿದ್ದಾರೆ. ಈ ಕೃತಿಯಲ್ಲಿ 2,400 ವರ್ಷಗಳ ಹಿಂದೆ ಚಂದ್ರಗುಪ್ತ ಮತ್ತು ಚಾಣಕ್ಯರು ಒಗ್ಗೂಡಿ ನಡೆಸಿದ ಪ್ರಯತ್ನಗಳಿಂದ ಸಮಾಜದ ರಚನಾತ್ಮಕ ಶಕ್ತಿ ಎಚ್ಚೆತ್ತಿತು. ಅಜೇಯನೆನಿಸಿಕೊಂಡಿದ್ದ ಪಶ್ಚಿಮದ ವೀರ ಅಲಿಕ ಸುಂದರನನ್ನು ಭಾರತದಿಂದ ಹೊರಗಟ್ಟಿದುದಷ್ಟೇ ಅಲ್ಲ, ಒಂದು ಭವ್ಯ ಸಾಮ್ರಾಜ್ಯದ ಕನಸು ಅವರಲ್ಲಿ ಮೊಳಕೆಯೊಡೆಯಿತು. ಚಂದ್ರಗುಪ್ತ ಮತ್ತು ಚಾಣಕ್ಯರು ತಮ್ಮ ಸಾಮರ್ಥ್ಯದಿಂದ ಭಾರತದ ಸಣ್ಣಪುಟ್ಟ ರಾಜ್ಯಗಳೆಲ್ಲವನ್ನೂ ವಶಪಡಿಸಿಕೊಂಡರು. ವಿದೇಶಿ ಯವನರೂ ಸಹ ಮುಕ್ತಕಂಠದಿಂದ ಹೊಗಳುವಷ್ಟು ಸುಸಜ್ಜಿತ ಸಾಮರ್ಥ್ಯ ಮತ್ತು ದಕ್ಷ ಆಡಳಿತವನ್ನು ನಡೆಸಿದರು. ಅವರ ರಾಷ್ಟ್ರೀಯ ಪ್ರಯತ್ನಗಳಿಂದಾಗಿ ಭಾರತದಲ್ಲಿ ಅಗಾಧ ಶಕ್ತಿ ಸಂಚಯವಾಯಿತು. ಇಂಥ ಪ್ರಚಂಡ ರಾಷ್ಟ್ರಶಕ್ತಿಯನ್ನು ಕಟ್ಟಿದ ಮಹಾಪುರುಷ, ಜಗತ್ತಿನೆದುರು ಕಂಗೊಳಿಸಿದ ಚಕ್ರಾಧಿಪತಿ ಚಂದ್ರಗುಪ್ತ ಮೌರ್ಯನ ಪುಣ್ಯಚರಿತ್ರೆಯನ್ನು ನೆನಪಿಸುವ ಮಹದ್ಗ್ರಂಥ ‘ಯವನವಿಜೇತ ಚಂದ್ರಗುಪ್ತ’ ಎಂದು ಚಂದ್ರಗುಪತ್ನ ಕುರಿತಾಗಿ ಇಲ್ಲಿ ವಿವರಿಸಲಾಗಿದೆ.

About the Author

ಶಿವರಾಮು ಕಾಡನಕುಪ್ಪೆ
(09 August 1953 - 26 July 2018)

ರಾಮನಗರ ಜಿಲ್ಲೆಯ ಕಾಡನಕುಪ್ಪೆಯ ಹಳ್ಳಿಯಲ್ಲಿ ಶಿವರಾಮು ಕಾಡನಕುಪ್ಪೆ (1953ರ ಆಗಸ್ಟ್ 9) ಜನಿಸಿದರು. ತಂದೆ ಲಿಂಗೇಗೌಡ, ತಾಯಿ-ಶಿವಮ್ಮ. ಕನ್ನಡ ಸಾಹಿತ್ಯವಲಯದಲ್ಲಿ ಉತ್ತಮ ವಿಮರ್ಶಕರು, ಪ್ರಬಂಧಕಾರರು, ಕವಿಗಳು, ಕಾದಂಬರಿಕಾರರು ಎಂಬ ಖ್ಯಾತಿ ಇವರಿಗಿದೆ. ದಲಿತ ಸಮುದಾಯದ ಜೀವನ ಅನುಭವಗಳನ್ನು ಸಮಗ್ರವಾಗಿ ಕಟ್ಟಿಕೊಡುವ ಕೃತಿ-ಕುಕ್ಕರಹಳ್ಳಿ, ಮೈಸೂರು ವಿ.ವಿ. ಪದವಿ ವಿದ್ಯಾರ್ಥಿಗಳಿಗೆ ಪಠ್ಯವಾಗಿದೆ. ಮೈಸೂರಿನ ವಿದ್ಯಾವರ್ಧಕ ಪ್ರಥಮ ದರ್ಜೆ ಪದವಿ ಕಾಲೇಜು ಪ್ರಿನ್ಸಿಪಾಲರಾಗಿಯೂ ಸೇವೆ ಸಲ್ಲಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಪಂಪ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರು, ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರು, 2006ರಲ್ಲಿ ಜರುಗಿದ ಬೆಂಗಳೂರು ಗ್ರಾಮಾಂತರ ಕನ್ನಡ ಸಾಹಿತ್ಯ ...

READ MORE

Related Books