ಅರಿವಿನೊಳಗಣ ಬೆರಗು

Author : ರವಿಶಂಕರ್ ಎ.ಕೆ (ಅಂಕುರ)

Pages 336

₹ 440.00




Year of Publication: 2023
Published by: ಲಿಖಿತ್ ಪ್ರಕಾಶನ
Address: ಬೋಗಾದಿ, ಮೈಸೂರು
Phone: 8660867073

Synopsys

“ಅರಿವಿನೊಳಗಣ ಬೆರಗು” ಗ್ರಂಥವು ವಚನ-ಕೀರ್ತನ-ತ್ರಿಪದಿ-ತತ್ವಪದಗಳನ್ನು ಆಧರಿಸಿ ಶಾಂತಿ ಮತ್ತು ಸಾಮರಸ್ಯದ ಹಿನ್ನೆಲೆಯಲ್ಲಿ ಶೋಧಿಸಲ್ಪಟ್ಟ ಪ್ರಬಂಧಗಳಿಂದ ಸಂಪನ್ನಗೊಂಡಿದೆ. ಭಾರತೀಯ ಸಾಹಿತ್ಯದಲ್ಲಿ 12ನೇ ಶತಮಾನದ ವಚನಗಳು ಸಾಮರಸ್ಯದ ಬದುಕನ್ನು ಸಾರುತ್ತಲೇ ಶಾಂತಿಯ ಅಗತ್ಯತೆಯನ್ನು ಮಂಡಿಸಿದವು. ನುಡಿದಂತೆ ನಡೆದ ಸಮುದಾಯವು ಶರಣರೆಂಬ ಹೆಸರಿಗೆ ಸಾಕ್ಷಿಯಾಯಿತು. ಇವರ ಪರಂಪರೆಯನ್ನು ಇವರದೇ ಜನಮುಖಿ ಮಾರ್ಗದಲ್ಲಿ ಮುಂದುವರೆಸಿದವರು ಕೀರ್ತನಕಾರರು, ಸರ್ವಜ್ಞ, ತತ್ವಪದಕಾರರೆಂಬ ಅಧ್ಯಯನಗಳು ಸಮಾಜಕ್ಕೆ ಚಿಂತನೆಯ ಮುನ್ನುಡಿಯನ್ನು ತೆರೆದಿಟ್ಟಿವೆ.

About the Author

ರವಿಶಂಕರ್ ಎ.ಕೆ (ಅಂಕುರ)

ರವಿಶಂಕರ ಎ.ಕೆ. ಅವರು ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಅಳಿಲುಘಟ್ಟ ಗ್ರಾಮದವರು. ಅರವಿಂದ ಆಶ್ರಮದಿಂದ ಪ್ರಭಾವಿತರು. ಕನ್ನಡ ಸಾಹಿತ್ಯದಲ್ಲಿ ಶಿಕ್ಷಣ ಪದವಿ, ಸ್ನಾತಕೋತ್ತರ ಪದವಿ ಹಾಗೂ ‘ಬೇಂದ್ರೆ ಸಾಹಿತ್ಯ : ವಿಮರ್ಶೆಯ ಸ್ವರೂಪ ಮತ್ತು ತಾತ್ವಿಕತೆ’ ವಿಷಯದ ಮೇಲೆ ಪಿಎಚ್.ಡಿ ಪದವಿ ಪಡೆದಿದ್ದಾರೆ. ಜೈನ್ ವಿಶ್ವವಿದ್ಯಾಲಯ, ಆಳ್ವಾಸ್ ಶಿಕ್ಷಣ ಸಂಸ್ಥೆ, ಕೃಪಾನಿಧಿ ಶಿಕ್ಷಣ ಸಂಸ್ಥೆಗಳಲ್ಲಿ ಉಪನ್ಯಾಸಕರಾಗಿ ಸದ್ಯ ಬೆಂಗಳೂರಿನ ಕ್ರಿಸ್ತು ಜಯಂತಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. ಅಂಕುರ-ಎಂಬುದು ಇವರ ಕಾವ್ಯನಾಮ.  ಕೃತಿಗಳು: ಖಾನ್ ಅಬ್ದುಲ್ ಗಫಾರ್ ಖಾನ್(ಜೀವನ ಚರಿತ್ರೆ 2013), ಎತ್ತಿಕೊಂಡವರ ಕೂಸು (ಕವನ ಸಂಕಲನ -2017), ...

READ MORE

Related Books