ಬೀದಿಜಗಳ

Author : ಕೆ. ಸತ್ಯನಾರಾಯಣ

Pages 128

₹ 140.00




Year of Publication: 2022
Published by: ಬಿ.ಎಸ್. ಮಧು ನ್ಯೂ ವೇವ್ ಬುಕ್ಸ್
Address: # 90/3, ಇಸ್ಟ್ ಫ್ಲೋರ್, ಬಸವನಗುಡಿ, ಬೆಂಗಳೂರು 560 004.\n

Synopsys

 ‘ಬೀದಿ ಜಗಳ’  ಕೆ ಸತ್ಯನಾರಾಯಣ ಅವರ ಕೃತಿಯಾಗಿದೆ. ಮೊದಮೊದಲ ಓದುಗನಾಗಿ ಕೆ ಸತ್ಯನಾರಾಯಣರ ‘ಬೀದಿ ಜಗಳ’ ಗಳನ್ನು ನೋಡಿದಾಗ ಹೊರಾಂಗಣದಲ್ಲಿ ಇವನ್ನೆಲ್ಲ ಇಷ್ಟು  ಆಸ್ಥೆಯಿಂದ  ಗಮನಿಸುವ ಇವರ ‘ಒಳಾಂಗಣದ ಬದುಕು’ ಹೇಗಿರಬಹುದೆಂಬ ಕುತೂಹಲ ಮೂಡಿತು. ಸಂಕಲನದಲ್ಲಿನ ಪಬಂಧಗಳನ್ನು ಓದುತ್ತಾ, ಇವರಿಗೆ ಹೊಳೆದ ವಿಷಯಗಳು ನನಗೆ ಎಂದೂ ಹೊಳೆಯಲಿಲ್ಲವಲ್ಲಾ ಎಂದು 'ಅಲವತ್ತಿಕೊಳ್ಳುವುದು' ದೈನಂದಿನ ಪಾಡಾಯಿತು.

ಬೀದಿಜಗಳಗಳು ಎಂದಮೇಲೆ ಹೊಡೆದಾಟ ಇರಬೇಕಾದ್ದೇ. ಅದಕ್ಕೆ ಮಸಲ್ ಪವರ್ ಎಷ್ಟು ಮುಖ್ಯವೋ, 'ಮಸಲ್‌ ಮೆಮೊರಿ'ಯೂ ಅಷ್ಟೇ ಮುಖ್ಯವಾದೀತು. ಕೆಲವರು ಒರಿಜಿನಲ್‌ ಜಗಳಗಂಟರಾಗಿ ಹೋರಾಟವೇ ತಮ್ಮ ಜೀವನವೆಂದು ಭಾವಿಸಿದ್ದರೆ, ಇನ್ನು ಕೆಲವರು ತಮ್ಮ ತಪ್ಪಿಲ್ಲದೆಯೂ ಜಗಳದ ಅಂಗವಾಗಬೇಕಾಗಿ ಬಂದಾಗ 'ನಮಗೇ ಯಾಕೆ ಹೀಗಾಗುತ್ತೆ?” ಎಂದುಕೊಳ್ಳುತ್ತಾರೆ. ಜಗಳದ ಕಾವಿನಲ್ಲಿ ಇಲ್ಲದ ಹಿರಿಯರ ಬಗ್ಗೆಯೂ ಪ್ರಸ್ತಾಪ ಬಂದಾಗ ತೀರಿಹೋದವರನ್ನು ಕುರಿತು ಮಾತು ಬೇಕೆ?' ಎಂಬ ಭಾವ ಮೂಡುವುದು ಸಹಜ. 'ಸಂಬಂಧಗಳನ್ನು ಏಕೆ ತೊರೆಯಬೇಕು?' ಜಗಳವಾಡುವುದು ಬೇಡ: 'ಇತರೆಯವರು ಹೇಳಿದರೂ, 'ಇಳಿವಯಸ್ಸಿನ ಕಾಠಿಣ್ಯ ಸ್ವಾರ್ಥ ಇತ್ಯಾದಿಗಳು' ಜಗಳದತ್ತ ಮನವನ್ನು ಸೆಳೆಯುವುದುಂಟು. ಇಬ್ಬರೇ ಜಗಳವಾಡಿದರೇನು ಚೆನ್ನ? ಅದರ ವೀಕ್ಷಣೆಗೆ ಒಂದಷ್ಟು 'ಹ್ಯಾಂಗರ್‍ಸ್‌ ಆನ್' ಇರಬೇಕು.

ಮೇಲ್ಕಂಡ ಪ್ಯಾರಾದಲ್ಲಿ ಬೋಲ್ಡ್ ಆಗಿರುವುದೆಲ್ಲ ಈ ಕೃತಿಯಲ್ಲಿನ ಪ್ರಬಂಧಗಳ ಶೀರ್ಷಿಕೆಗಳು, ಅಪರೂಪದ ವಿಷಯಗಳನ್ನು ಹೆಕ್ಕಿಕೊಂಡು ಪ್ರಬಂಧ ರಚಿಸುವ ಕೌಶಲವುಳ್ಳ ವಿಮರ್ಶಕ, ಅಂಕಣಕಾರ, ಕತೆಗಾರ, ಕಾದಂಬರಿಕಾರ ಕೆ. ಸತ್ಯನಾರಾಯಣರ ಈ ಕೃತಿಯದು ಎನ್‌. ರಾಮನಾಥ್ ಅವರು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ಕೆ. ಸತ್ಯನಾರಾಯಣ
(21 April 1954)

ಕೆ.ಸತ್ಯನಾರಾಯಣ ಅವರು ಹುಟ್ಟಿದ್ದು 1954 ಏಪ್ರಿಲ್ 21 ರಂದು. ಮಂಡ್ಯ ಜಿಲ್ಲಾ ಮದ್ದೂರು ತಾಲೋಕು ಕೊಪ್ಪ ಗ್ರಾಮದಲ್ಲಿ. 1972ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ.ಪದವಿ(ಸುವರ್ಣ ಪದಕದೊಂದಿಗೆ). 1978ರಲ್ಲಿ ಇದೇ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ.  1978ರಲ್ಲಿ ಭಾರತ ಸರ್ಕಾರದ ಇಂಡಿಯನ್ ರೆವಿನ್ಯೂ ಸರ್ವೀಸ್ ಗೆ ಸೇರಿ ಆದಾಯ ತೆರಿಗೆ ಇಲಾಖೆಯಲ್ಲಿ ದೇಶದ ನಾನಾ ಭಾಗಗಳಲ್ಲಿ ಕೆಲಸ ಮಾಡಿ(ಏಪ್ರಿಲ್ 2014ರಲ್ಲಿ ಕರ್ನಾಟಕ ಮತ್ತು ಗೋವಾ ವಲಯದ ಪ್ರಧಾನ ಮುಖ್ಯ ಆಯುಕ್ತರಾಗಿ, ಬೆಂಗಳೂರು) ನಿವೃತ್ತಿ.  ಸಣ್ಣಕಥೆ, ಕಿರುಕಥೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣಬರಹ, ವಿಮರ್ಶೆ, ಪ್ರವಾಸಕಥನ- ಹೀಗೆ ಬೇರೆ ಬೇರೆ ...

READ MORE

Related Books