ನಿರಂತರ ಹೋರಾಟದಲ್ಲಿ ರೈತ

Author : ಶಿವರಾಜ್ ಬಡಿಗೇರ್

Pages 104

₹ 90.00




Year of Publication: 2015
Published by: ನೇಕಾರ ಪ್ರಕಾಶನ
Address: ನೇಕಾರ ಪ್ರಕಾಶನ, ಗುರುಮಂದಿರ ರಸ್ತೆ, ಸೊರಬ-577429 ಶಿವಮೊಗ್ಗ ಜಿಲ್ಲೆ.
Phone: 9141833556

Synopsys

ಡಾ. ಶಿವರಾಜರವರು ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಚಾಗಭಾವಿ ಗ್ರಾಮದವರು. ಶಿವರಾಜ ಬಡಿಗೇರ್ ಎಂದೇ ಈಗಾಗಲೇ ಓದುಗರಿಗೆ ಪರಿಚಿತರಾದ ಅವರು ರಚಿಸಿರುವ “ನಿರಂತರ ಹೋರಾಟದಲ್ಲಿ ರೈತ” ಎಂಬ ಈ ಕೃತಿಯು ಭಾರತದ ಸಾಮಾಜಿಕ ಚರಿತ್ರೆ ಹಾಗೂ ಸಮಕಾಲಿನ ಆಯಾಮಗಳ ಒಂದು ಸ್ಥಿತಿಯನ್ನು ಪರಿಚಯಿಸುತ್ತಿದೆ.

ಪ್ರಸ್ತುತ ರೈತರು, ಅಸ್ಪೃಶ್ಯರಂತೆ ಸಮಾಜದ ಜೊತೆ ನಿರಂತರ ಹೋರಾಟದಲ್ಲಿರುವುದನ್ನು ಈ ಕೃತಿ  ಗುರುತಿಸಿರುವುದನ್ನು ಕಾಣಬಹುದು.  ಸಮಾಜದಲ್ಲಿ ರೈತರ ಸ್ಥಿತಿಗತಿಗಳ ಬಗ್ಗೆ ಸಂಶೋಧನಾತ್ಮಕ ಅಧ್ಯಯನ ಕುರಿತು ತೀವ್ರವಾದ ಆಸಕ್ತಿಯನ್ನಿಟ್ಟುಕೊಂಡಿರುವ ಇವರು ಈ ಕೃತಿಯಲ್ಲಿ ರೈತರ ಮೇಲೆ ಸಮಾಜದ ಪ್ರಬಲವರ್ಗ (ರಾಜಕೀಯ ನಾಯಕರು) ನಡೆಸುತ್ತಿರುವ ದೌರ್ಜನ್ಯಗಳ ಸಹಿಸಿಕೊಂಡು, ತಮ್ಮ ಬದುಕಲ್ಲಿ ನಿರಂತರವಾದ ಹೋರಾಟದಲ್ಲಿರುವ ರೈತರ ಚಿಂತಾಜನಕ ವಿಚಾರಗಳನ್ನು ಯಶಸ್ವಿಯಾಗಿ ಈ ಕೃತಿಯಲ್ಲಿ ಮಂಡಿಸಿದ್ದಾರೆ. 

Related Books