ಸ್ತ್ರೀವಾದ ಮತ್ತು ಭಾರತೀಯತೆ

Author : ಡಾ. ಧರಣೀದೇವಿ ಮಾಲಗತ್ತಿ

Pages 120

₹ 30.00




Year of Publication: 1998
Published by: ಚೇತನ ಬುಕ್ ಹೌಸ್(ಬ್ರ್ಯಾಂಚ್)
Address: ರೇಣುಕಾಚಾರ್ಯ ದೇವಸ್ಥಾನ ರಸ್ತೆ, ಲಕ್ಷ್ಮಿ ಟಾಕೀಸ್ ಹಿಂಭಾಗ, ಮೈಸೂರು- 570024

Synopsys

‘ಸ್ತ್ರೀವಾದ ಮತ್ತು ಭಾರತೀಯತೆ’ ಧರಣೀದೇವಿ ಮಾಲಗತ್ತಿ ಅವರ ಪ್ರಬಂದ. ಈ ಕೃತಿಗೆ ಲಂಕೇಶ್ ಅವರ ಬೆನ್ನುಡಿ ಬರಹವಿದೆ. ಹೇಳಬೇಕಾದ ಕೊನೆಯದೊಂದು ಮಾತು, ಈಗ ತಾನೆ ಮಾತಾಡಿಹೋದ ಪ್ರತಿಭಾ, ಧರಣಿದೇವಿ ಮಾಲಗತ್ತಿ ಎಂಬ ಪುಟ್ಟ ಹುಡುಗಿಯ ಬ್ರೆಡ್ ಜಾಮ್ ಎಂಬ ಕವನಗಳ ಪುಸ್ತಕ ನಮ್ಮ ಪತ್ರಿಕೆಯ ವಿಮರ್ಶೆಗಿಂತ ಉತ್ತಮವಾಗಿದೆ ಅದನ್ನು ಸೂಚಿಸಿ ಎಂದು ಹೇಳಿದ್ದಾಳೆ, ಆಕೆಯ ಮಾತು ನಿಜವಿರಬಹುದು, ನಿಮ್ಮಿಯ ಜೀವಂತ ನುಡಿಗಳು, ಧರಣಿಯ ಕವನಗಳು ಎಂದು ನೆನೆಯುತ್ತ, ವಿರಮಿಸುತ್ತ ಏಟ್ಸ್ ನ ಪುಟ್ಟ ಕವನದ ಸಾಲುಗಳನ್ನು ಮೆಲುಕು ಹಾತುತ್ತಿದ್ದೇನೆ ಎಂದಿದ್ದಾರೆ ಲಂಕೇಶ್. ಹಾಗೇ ಶ್ರೇಷ್ಠ ಜೀವನ ಮತ್ತು ಶ್ರೇಷ್ಠ ಕೃತಿಗಳ ಮಧ್ಯೆ ಜಾಣಯಾವುದನ್ನಾದರೂ ಆರಿಸಿಕೊಳ್ಳಲೇ ಬೇಕಾಗುತ್ತದೆ ಶ್ರೇಷ್ಠ ಕೃತಿಯನ್ನೊಪ್ಪಿ ಬದುಕಿದ ಮೇಲೆ ಸ್ವರ್ಗವ ತಿರಸ್ಕರಿಸಿ ಕತ್ತಲಲ್ಲಿ ಕೂಗಾಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

About the Author

ಡಾ. ಧರಣೀದೇವಿ ಮಾಲಗತ್ತಿ
(12 May 1967)

ಕವಿ, ಮಹಿಳಾಪರ ಸಾಹಿತಿ ಧರಣೀದೇವಿ ಮಾಲಗತ್ತಿ ಅವರು ಪೊಲೀಸ್ ಇಲಾಖೆಯಲ್ಲಿ ವಿವಿಧ ಉದ್ದೆಗಳನ್ನು ನಿರ್ವಹಿಸಿ ಸದ್ಯ ಐ.ಪಿ.ಎಸ್. ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದವರಾದ ಧರಣೀದೇವಿಯವರ ತಂದೆ- ಪಿ.ದೂಮಣ್ಣ ರೈ, ತಾಯಿ- ದೇವಕಿ ಡಿ.ರೈ. ಕುಕ್ಕಾಜೆ. ಬಿಬಿಎಂ ಹಾಗೂ ಎಂ.ಕಾಂ. ಕನ್ನಡ ಎಂ.ಎ ಪದವೀಧರೆಯಾಗಿರುವ ಅವರು ನಿರ್ವಹಣಾ ಶಾಸ್ತ್ರದಲ್ಲಿ ಪಿ.ಹೆಚ್.ಡಿಯನ್ನು ಪಡೆದಿದ್ದಾರೆ.  1990ರಿಂದ 1991 ರ ವರೆಗೆ ಮಂಗಳೂರು ವಿಶ್ವವಿದ್ಯಾಲಯ ವಾಣಿಜ್ಯ ವಿಭಾಗದಲ್ಲಿ ಸಂಶೋಧನಾ ಸಹಾಯಕರಿಯಾಗಿ, 1991 ರಿಂದ 1993 ರ  ವರೆಗೆ ಮಂಗಳೂರಿನ ಸೈಂಟ್ ಆಗ್ನೇಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ, 1993ರಿಂದ 94ರ ವರೆಗೆ ...

READ MORE

Related Books