
‘ಬೇಂದ್ರೆಕಾವ್ಯ: ಅವಧೂತಪ್ರಜ್ಞೆ’ ಗೀತಾವಸಂತ ಅವರು ರಚಿಸಿರುವ ಪ್ರಬಂಧ ಸಂಕಲನ. ಅಂಬಿಕಾತನಯದತ್ತ ಬೇಂದ್ರೆಯವರು ಅನುಭವಿಸಿದ ಅವಧೂತತನವು ಅವರ ಕಾವ್ಯಾತ್ಮಕ ಪ್ರಜ್ಞೆಯ ಫಲಿತಾಂಶವಾಗಿದೆ. ಅನುಭಾವದೆತ್ತರಕ್ಕೆ ಕಲ್ಪನೆಯ ನಂಟನಿಂದ ಏರುವ ಬೇಂದ್ರೆ ಇಹದ ನೆಂಟನ್ನು ಬಿಡುವುದಿಲ್ಲ. ಕಟ್ಟಿಕೊಂಡ ಲೋಕದ ಗಂಟನ್ನು ಸಡಿಲಗೊಳಿಸುವುದಿಲ್ಲ. ಓದುಗನಿಗೆ ಶಾಂತಿರಸವನ್ನು ಪ್ರೀತಿಯಿಂದ ಮೈದೋರಿಸುವ ಗಾರುಡಿಗತನ ಬೇಂದ್ರೆಯವರದು. ಬೇಂದ್ರೆ ಕಾವ್ಯದ ಅವಧೂತ ಪ್ರಜ್ಞೆ ತನ್ನ ವೈಚಾರಿಕ ಸ್ವರಮಂಡಲದ ನಾಲ್ಕು ತಂತಿಗಳನ್ನು ಮೀಟುವ ಮೂಲಕ ಸುಲಲಿತವಾಗಿ ಕೇಳಿಸುವದರಲ್ಲಿ ಗೀತಾ ವಸಂತ ಅವರ ಈ ಅಧ್ಯಯನ ಪ್ರಬಂಧ ನಿರತವಾಗಿದೆ.
©2025 Book Brahma Private Limited.